<p><strong>ಬಸವಾಪಟ್ಟಣ:</strong> ಬೇಸಿಗೆ ಅವಧಿಯಲ್ಲಿ (ಏಪ್ರಿಲ್, ಮೇ) ತರಕಾರಿ ಬೆಲೆ ಏರಿಕೆಯಾಗುವುದು ಸಾಮಾನ್ಯ. ಆದರೆ, ಈ ವರ್ಷ ಬಿಸಿಲಿನ ಪ್ರಖರತೆ ಮತ್ತಷ್ಟು ಹೆಚ್ಚಿದ್ದರಿಂದ ತರಕಾರಿ ಉತ್ಪಾದನೆಯೂ ಕುಂಠಿತಗೊಂಡಿದ್ದು, ಬಹುತೇಕ ತರಕಾರಿಗಳ ಬೆಲೆ ಗಗನಮುಖಿಯಾಗಿವೆ.</p>.<p>ಬಿಸಿಲೇರುತ್ತಿದ್ದರೂ ಮದುವೆ, ಮುಂಜಿಗಳ ಸಂಖ್ಯೆಯೂ ಹೆಚ್ಚುತ್ತಲಿದೆ. ಸಾಲು ಸಾಲು ಜಾತ್ರೆ, ಸಭೆ, ಸಮಾರಂಭಗಳಿಗೆ ನೆಂಟರಿಷ್ಟರು ಮನೆಗೆ ಬರುವುದು ಸಹಜ. ಈ ಸಂದರ್ಭದಲ್ಲಿ ಬೆಲೆ ಎಷ್ಟೇ ಏರಿಕೆಯಾದರೂ ತರಕಾರಿ ಕೊಳ್ಳಲೇಬೇಕಾದ ಅನಿವಾರ್ಯತೆಯೂ ಇದ್ದು, ಬೇಡಿಕೆ ಹೆಚ್ಚಿದೆ. ಇದೂ ಬೆಲೆ ಏರಿಕೆಗೆ ಕಾರಣವಾಗಿ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದೆ.</p>.<p>ಪ್ರತಿ ಕೆ.ಜಿ. ಬೀನ್ಸ್ ₹ 200, ಬೆಂಡೆಕಾಯಿ ₹ 80, ಚವಳಿಕಾಯಿ ₹ 80, ಸೌತೆಕಾಯಿ ₹ 70, ನವಿಲುಕೋಸು ₹ 80, ನುಗ್ಗೆಕಾಯಿ ₹ 100, ಹಸಿ ಮೆಣಸಿನಕಾಯಿ ₹ 80, ಬದನೆಕಾಯಿ ₹ 50, ಟೊಮೆಟೊ ₹ 50, ಬೀಟ್ರೂಟ್ ₹ 60ಕ್ಕೆ, ಕರಿಬೇವು, ಕೊತ್ತಂಬರಿ ಚಿಕ್ಕ ಕಟ್ಟಿಗೆ ₹ 10 ಇದ್ದು, ವಿವಿಧ ಬಗೆಯ ಸೊಪ್ಪುಗಳು ಒಂದು ಕಟ್ಟಿಗೆ ₹ 20ದಂತೆ ಮಾರಾಟವಾಗುತ್ತಿವೆ.</p>.<p>‘ನೀರಿನ ಕೊರತೆ, ಕೃಷಿ ಕಾರ್ಮಿಕರ ಕೊರತೆಯಿಂದ ತರಕಾರಿ ಉತ್ಪಾದನೆ ಬೇಸಿಗೆಯಲ್ಲಿ ಕುಂಠಿತವಾಗಿದೆ. ಬೇಸಿಗೆಯಲ್ಲಿ ಹೆಚ್ಚು ಬಳಸುವ ನಿಂಬೆಹಣ್ಣಿನ ಇಳುವರಿ ಕಡಿಮೆಯಾಗಿದ್ದು, ಅದರ ದರವೂ ಹೆಚ್ಚಿದೆ’ ಎಂದು ರೈತರು ಹೇಳಿದರು.</p>.<p>‘ಹಿಂದೆ ಮನೆಯ ಮುಂದೆ, ಹಿತ್ತಿಲಲ್ಲಿ ಸಾರ್ವಜನಿಕರು ಮತ್ತು ಹೊಲಗಳಲ್ಲಿ ರೈತರು ತರಕಾರಿ ಬೆಳೆದುಕೊಳ್ಳುತ್ತಿದ್ದರು. ಆದರೆ, ಈಗ ಆ ವಾತಾವರಣವಿಲ್ಲ. ಎಲ್ಲರೂ ಹಣ ಕೊಟ್ಟು ಕೊಳ್ಳುವವರೇ ಆಗಿರುವುದರಿಂದ ಈ ಬೆಲೆ ಏರಿಕೆ ಆಗಿದೆ’ ಎಂದು ಶಕುಂತಲಮ್ಮ ಮತ್ತು ಸುಶೀಲಮ್ಮ ಬೇಸರ ವ್ಯಕ್ತಪಡಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260512-43-1446398743</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಸವಾಪಟ್ಟಣ:</strong> ಬೇಸಿಗೆ ಅವಧಿಯಲ್ಲಿ (ಏಪ್ರಿಲ್, ಮೇ) ತರಕಾರಿ ಬೆಲೆ ಏರಿಕೆಯಾಗುವುದು ಸಾಮಾನ್ಯ. ಆದರೆ, ಈ ವರ್ಷ ಬಿಸಿಲಿನ ಪ್ರಖರತೆ ಮತ್ತಷ್ಟು ಹೆಚ್ಚಿದ್ದರಿಂದ ತರಕಾರಿ ಉತ್ಪಾದನೆಯೂ ಕುಂಠಿತಗೊಂಡಿದ್ದು, ಬಹುತೇಕ ತರಕಾರಿಗಳ ಬೆಲೆ ಗಗನಮುಖಿಯಾಗಿವೆ.</p>.<p>ಬಿಸಿಲೇರುತ್ತಿದ್ದರೂ ಮದುವೆ, ಮುಂಜಿಗಳ ಸಂಖ್ಯೆಯೂ ಹೆಚ್ಚುತ್ತಲಿದೆ. ಸಾಲು ಸಾಲು ಜಾತ್ರೆ, ಸಭೆ, ಸಮಾರಂಭಗಳಿಗೆ ನೆಂಟರಿಷ್ಟರು ಮನೆಗೆ ಬರುವುದು ಸಹಜ. ಈ ಸಂದರ್ಭದಲ್ಲಿ ಬೆಲೆ ಎಷ್ಟೇ ಏರಿಕೆಯಾದರೂ ತರಕಾರಿ ಕೊಳ್ಳಲೇಬೇಕಾದ ಅನಿವಾರ್ಯತೆಯೂ ಇದ್ದು, ಬೇಡಿಕೆ ಹೆಚ್ಚಿದೆ. ಇದೂ ಬೆಲೆ ಏರಿಕೆಗೆ ಕಾರಣವಾಗಿ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದೆ.</p>.<p>ಪ್ರತಿ ಕೆ.ಜಿ. ಬೀನ್ಸ್ ₹ 200, ಬೆಂಡೆಕಾಯಿ ₹ 80, ಚವಳಿಕಾಯಿ ₹ 80, ಸೌತೆಕಾಯಿ ₹ 70, ನವಿಲುಕೋಸು ₹ 80, ನುಗ್ಗೆಕಾಯಿ ₹ 100, ಹಸಿ ಮೆಣಸಿನಕಾಯಿ ₹ 80, ಬದನೆಕಾಯಿ ₹ 50, ಟೊಮೆಟೊ ₹ 50, ಬೀಟ್ರೂಟ್ ₹ 60ಕ್ಕೆ, ಕರಿಬೇವು, ಕೊತ್ತಂಬರಿ ಚಿಕ್ಕ ಕಟ್ಟಿಗೆ ₹ 10 ಇದ್ದು, ವಿವಿಧ ಬಗೆಯ ಸೊಪ್ಪುಗಳು ಒಂದು ಕಟ್ಟಿಗೆ ₹ 20ದಂತೆ ಮಾರಾಟವಾಗುತ್ತಿವೆ.</p>.<p>‘ನೀರಿನ ಕೊರತೆ, ಕೃಷಿ ಕಾರ್ಮಿಕರ ಕೊರತೆಯಿಂದ ತರಕಾರಿ ಉತ್ಪಾದನೆ ಬೇಸಿಗೆಯಲ್ಲಿ ಕುಂಠಿತವಾಗಿದೆ. ಬೇಸಿಗೆಯಲ್ಲಿ ಹೆಚ್ಚು ಬಳಸುವ ನಿಂಬೆಹಣ್ಣಿನ ಇಳುವರಿ ಕಡಿಮೆಯಾಗಿದ್ದು, ಅದರ ದರವೂ ಹೆಚ್ಚಿದೆ’ ಎಂದು ರೈತರು ಹೇಳಿದರು.</p>.<p>‘ಹಿಂದೆ ಮನೆಯ ಮುಂದೆ, ಹಿತ್ತಿಲಲ್ಲಿ ಸಾರ್ವಜನಿಕರು ಮತ್ತು ಹೊಲಗಳಲ್ಲಿ ರೈತರು ತರಕಾರಿ ಬೆಳೆದುಕೊಳ್ಳುತ್ತಿದ್ದರು. ಆದರೆ, ಈಗ ಆ ವಾತಾವರಣವಿಲ್ಲ. ಎಲ್ಲರೂ ಹಣ ಕೊಟ್ಟು ಕೊಳ್ಳುವವರೇ ಆಗಿರುವುದರಿಂದ ಈ ಬೆಲೆ ಏರಿಕೆ ಆಗಿದೆ’ ಎಂದು ಶಕುಂತಲಮ್ಮ ಮತ್ತು ಸುಶೀಲಮ್ಮ ಬೇಸರ ವ್ಯಕ್ತಪಡಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260512-43-1446398743</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>