<p><strong>ದಾವಣಗೆರೆ:</strong> ಜಿಲ್ಲೆ ವ್ಯಾಪ್ತಿಯಲ್ಲಿ 1,200 ಕಿ.ಮೀ. ಉದ್ದದವರೆಗೆ ಹಾದು ಹೋಗಿರುವ ಭದ್ರಾ ನಾಲೆಗಳಿಗೆ ಅಲ್ಲಲ್ಲಿ ಅಕ್ವಾಡೆಕ್ಟ್ಗಳು ಹಾಗೂ ಅಡ್ಡಲಾಗಿ ಸೇತುವೆಗಳನ್ನು ನಿರ್ಮಿಸಲಾಗಿದೆ. ಇವು ಕಾಯಕಲ್ಪಕ್ಕೆ ಕಾದಿವೆ.</p>.<p>60 ವರ್ಷಗಳ ಹಿಂದೆ ನಿರ್ಮಿಸಿರುವ ಈ ಅಕ್ವಾಡೆಕ್ಟ್ಗಳು ಹಾಗೂ ಸೇತುವೆಗಳು ಅಲ್ಲಲ್ಲಿ ಶಿಥಿಲಗೊಂಡಿದ್ದು, ಕೆಲವು ಈಗಾಗಲೇ ಒಡೆದಿವೆ. ಇದರಿಂದ ನೀರು ಪೋಲಾಗುತ್ತಿದ್ದು, ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ಪ್ರದೇಶಗಳಿಗೆ ನಾಲೆ ನೀರು ತಲುಪುತ್ತಲೇ ಇಲ್ಲ. ಇವುಗಳನ್ನು ನಿರ್ಮಿಸಿದ ನಂತರ ಯಾವುದೇ ಅಭಿವೃದ್ಧಿ ಕಾಮಗಾರಿ ಕೈಗೊಂಡಿಲ್ಲ. ಇದು ಆಡಳಿತದ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿ.</p>.<p>1965ರಲ್ಲಿ ಭದ್ರಾ ನಾಲೆಗಳಿಗೆ ನೀರು ಹರಿಸಲಾಗಿತ್ತು. ಇದಕ್ಕೂ ಮುನ್ನ, ಅಂದರೆ 1960–62ರ ಅವಧಿಯಲ್ಲಿ ಸೇತುವೆ, ನಾಲೆ ಹಾಗೂ ಅಕ್ವಾಡೆಕ್ಟ್ಗಳು ನಿರ್ಮಾಣಗೊಂಡಿದ್ದವು. ಇವುಗಳು ಒಡೆದು ಭಾರಿ ಪ್ರಮಾಣದಲ್ಲಿ ನೀರು ಹರಿದಿದ್ದರಿಂದ ಬೆಳೆಗಳು ನಾಶವಾಗಿದ್ದವು. ಆ ಸಂದರ್ಭದಲ್ಲಿ ಸಣ್ಣಪುಟ್ಟ ದುರಸ್ತಿ ಕಾರ್ಯ ಕೈಗೊಂಡಿದ್ದು ಬಿಟ್ಟರೆ, ಸಮಗ್ರ ನವೀಕರಣ ಕಾಮಗಾರಿ ನಡೆಸಿಲ್ಲ. ನೀರಿನ ಹೊಡೆತಕ್ಕೆ ಇವು ಕ್ರಮೇಣ ಶಿಥಿಲಗೊಂಡಿವೆ. ಕೆಲವೆಡೆ ರೈತರು ನೀರು ಹರಿಸಿಕೊಳ್ಳಲು ಒಡೆದ ಪರಿಣಾಮವೂ ಇವು ಹಾಳಾಗಿವೆ.</p>.<p>2007–08ರಲ್ಲಿ ಭದ್ರಾ ನಾಲೆಗಳ ಆಧುನೀಕರಣ ನಡೆದಿತ್ತು. ಆ ನಂತರದಲ್ಲಿ ನಾಲೆಗಳು, ಸೇತುವೆಗಳು, ಅಕ್ವಾಡೆಕ್ಟ್ಗಳು, ಉಪ ನಾಲೆ, ಶಾಖಾ ನಾಲೆ, ಹೊಲಗಾಲುವೆಗಳು, ತೂಬು, ಗೇಟು ಹಾಗೂ ಪೈಪ್ ಔಟ್ಲೆಟ್ಗಳು ದುರಸ್ತಿ ಭಾಗ್ಯ ಕಂಡಿಲ್ಲ.</p>.<p>ಮಾಯಕೊಂಡ ಸಮೀಪದ ನಲ್ಕುಂದ ಗ್ರಾಮದಲ್ಲಿ ಭದ್ರಾ ನಾಲೆಗೆ ನಿರ್ಮಿಸಿದ್ದ ‘ನಲ್ಕುಂದ ತೊಟ್ಟಿಲು ಸೇತುವೆ’ ಕುಸಿದು ಅಪಾರ ಪ್ರಮಾಣದಲ್ಲಿ ಬೆಳೆ ನಾಶವಾಗಿತ್ತು. ಅದನ್ನು 2022ರಲ್ಲಿ ದುರಸ್ತಿ ಮಾಡಲಾಗಿತ್ತು. ಬಸವಾಪಟ್ಟಣದಲ್ಲಿನ ಭದ್ರಾ ನಾಲೆ ಒಡೆದಿದ್ದಾಗಲೂ ಇದೇ ಪರಿಸ್ಥಿತಿ ಎದುರಾಗಿತ್ತು. ಬಳಿಕ ಅದರ ದುರಸ್ತಿಯನ್ನೂ ಕೈಗೊಳ್ಳಲಾಗಿತ್ತು. </p>.<p>ಆದರೆ, ಜಿಲ್ಲೆ ವ್ಯಾಪ್ತಿಯ ದಾವಣಗೆರೆ, ಚನ್ನಗಿರಿ, ಹರಿಹರ, ಮಲೇಬೆನ್ನೂರು ಭಾಗದಲ್ಲಿನ ಭದ್ರಾ ಉಪನಾಲೆ, ಸೇತುವೆಗಳು ಹಾಳಾದ ಸಂದರ್ಭದಲ್ಲಿ ಶಾಶ್ವತ ಅಭಿವೃದ್ಧಿ ಕಾಮಗಾರಿ ಕೈಗೊಳ್ಳದ ಅಧಿಕಾರಿಗಳು ಮರಳಿನ ಚೀಲ ತಂದಿಟ್ಟು ಕಣ್ಣೊರೆಸುವ ತಂತ್ರ ಅನುಸರಿಸಿದ್ದರು. </p>.<p>ಕಣ್ಮನ ಸೆಳೆವ ಅಕ್ವಾಡೆಕ್ಟ್ಗಳಿಗೆ ಬೇಕಿದೆ ಕಾಯಕಲ್ಪ:</p>.<p>ಜಿಲ್ಲೆಯ ಬಸವಾಪಟ್ಟಣದ ‘ಬಡಾಸಾಬ್’ ಅಕ್ವಾಡೆಕ್ಟ್, ಚನ್ನಗಿರಿ ತಾಲ್ಲೂಕಿನ ಮಾಡಾಳ್, ಮಲೇಬೆನ್ನೂರು ಸಮೀಪದ ಕೊಮಾರನಹಳ್ಳಿಯ ಅಕ್ವಾಡಕ್ಟ್, ಹಿರೇಮಳಲಿ ಬಳಿಯ ಭದ್ರಾ ಸುರಂಗ, ಸೂಳೆಕೆರೆ ಸಮೀಪದ ಅಕ್ವಾಡೆಕ್ಟ್ಗಳು ಕಾಯಕಲ್ಪಕ್ಕೆ ಕಾದಿವೆ.</p>.<p>‘ಇವುಗಳು ಅಲ್ಲಲ್ಲಿ ಒಡೆದಿವೆ. ಇವುಗಳ ಬೇರಿಂಗ್ಗಳೂ ಸಡಿಲಗೊಳ್ಳುತ್ತಿವೆ. ಶಿಥಿಲಗೊಂಡಿರುವ ಇವು ಅಪಾಯವನ್ನೂ ಆಹ್ವಾನಿಸುತ್ತಿವೆ. ಕಣ್ಮನ ಸೆಳೆಯುತ್ತಿರುವ ಇವುಗಳನ್ನು ದುರಸ್ತಿ ಮಾಡಿದರೆ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯಬಹುದು’ ಎನ್ನುತ್ತಾರೆ ಹೊಳೆಸಿರಿಗೆರೆಯ ರೈತ ಹಾಲೇಶಪ್ಪ. </p>.<p>ಪ್ರವಾಸಿಗರ ಕೈಬೀಸಿ ಕರೆವ ಸೂಳೆಕೆರೆ ಅಕ್ವಾಡೆಕ್ಟ್:</p>.<p>ಸೂಳೆಕೆರೆಯ ಬಳಿ ನಿರ್ಮಿಸಿರುವ ಅಕ್ವಾಡೆಕ್ಟ್, ಎರಡು ಗುಡ್ಡಗಳ ನಡುವಣ ಸಂಪರ್ಕ ಸೇತುವೆಯಂತಿದೆ. ಅಂದಾಜು 12 ಅಡಿ ಆಳದಲ್ಲಿ ನೀರು ಹರಿವ ತೊಟ್ಟಿಗಳನ್ನು ಬೃಹತ್ ಸ್ತಂಭಗಳ ಮೇಲೆ ನಿರ್ಮಿಸಲಾಗಿದೆ. ಇದು ಅಂದಾಜು 1 ಕಿ.ಮೀ. ಉದ್ದ ಇದೆ. ಇದರ ಮುಖಾಂತರ ನೀರು ದಾವಣಗೆರೆ ಭಾಗಕ್ಕೆ ಹರಿಯುತ್ತದೆ. ಸೂಳೆಕೆರೆ ವೀಕ್ಷಣೆಗೆ ಬರುವ ಪ್ರವಾಸಿಗರು ಇದನ್ನು ನೋಡದೇ ಹೋಗುವುದಿಲ್ಲ.</p>.<p>‘ಅಕ್ವಾಡೆಕ್ಟ್ನ ಮೇಲ್ಭಾಗದಲ್ಲಿ ಪಾದಚಾರಿ ಮಾರ್ಗ ಇದೆ. ಇದರ ಎರಡೂ ಮಗ್ಗುಲಲ್ಲಿ ಲೋಹದ ಸರಳುಗಳ ತಡೆಗೋಡೆ ಇತ್ತು. ಆದರೆ ಕಿಡಿಗೇಡಿಗಳು ಈ ಸರಳುಗಳನ್ನು ಕತ್ತರಿಸಿದ್ದಾರೆ’ ಎಂದು ಸ್ಥಳೀಯರಾದ ಪ್ರವೀಣ್ ಹೇಳಿದರು.</p>.<p>‘ನಾಲೆ ನಿರ್ಮಾಣವಾಗಿ 50ಕ್ಕೂ ಹೆಚ್ಚು ವರ್ಷಗಳಾಗಿವೆ. ಸೇತುವೆಗಳು, ಅಕ್ವಾಡೆಕ್ಟ್ಗಳು ಬಿರುಕು ಬಿಡುತ್ತಿವೆ. ಸಂಬಂಧಪಟ್ಟವರು ಆಧುನಿಕ ತಂತ್ರಜ್ಞಾನದ ಮೂಲಕ ಇವುಗಳನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಬೇಕು’ ಎಂಬುದು ರೈತರ ಒತ್ತಾಯ.</p>.<p>ಜಿಲ್ಲೆಯಲ್ಲಿನ ಅಂದಾಜು 855 ಭದ್ರಾ ಕಾಲುವೆಗಳಲ್ಲಿ ಮುಖ್ಯ ನಾಲೆ ಹೊರತುಪಡಿಸಿದರೆ ಉಳಿದವುಗಳನ್ನು ಅಭಿವೃದ್ಧಿ ಪಡಿಸುವ ಅಗತ್ಯ ಹೆಚ್ಚಿದೆ.</p>.<p>‘ನಾಲೆಗಳು ಹಾಗೂ ಸಂಬಂಧಿಸಿದ ಸೇತುವೆ, ಅಕ್ವಾಡೆಕ್ಟ್ಗಳನ್ನು ಅಭಿವೃದ್ಧಿಪಡಿಸುವುದು ಯಾವಾಗ? ಎಂದು ಕೇಳಿದರೆ ಅಧಿಕಾರಿಗಳು ಇಲಾಖೆಗೆ ಅನುದಾನವೇ ಬರುತ್ತಿಲ್ಲ ಎನ್ನುತ್ತಾರೆ. ಅನುದಾನ ತರಲು ಪ್ರಯತ್ನಿಸಬೇಕು. ಸುಮ್ಮನೆ ನೆಪ ಹೇಳಿದರೆ ಹೇಗೆ? ಜನಪ್ರತಿನಿಧಿಗಳಿಗೆ ಇದರ ಪರಿವೇ ಇಲ್ಲ’ ಎಂದು ದೂರುತ್ತಾರೆ ರೈತ ಪರಶುರಾಮಪ್ಪ. </p>.<p>ಭದ್ರಾ ನಾಲೆ ಆಧುನೀಕರಣದ ಸಂದರ್ಭದಲ್ಲಿನ ಕಳಪೆ ಕಾಮಗಾರಿಯಿಂದ ರೈತರಿಗೆ ನಷ್ಟವಾದರೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಜೇಬು ತುಂಬಿತು. ಇಂತಹ ಲೂಟಿ ತಪ್ಪಿಸಲೆಂದೇ ಇಲಾಖೆಗೆ ಅನುದಾನ ನೀಡುತ್ತಿಲ್ಲ ಎಂಬ ಆರೋಪವೂ ಇದೆ.</p>.<p> <strong>ಸಿಬ್ಬಂದಿ ಕೊರತೆ; ನಡೆಯದ ಮಾಪನ</strong> </p><p>ಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿ ದಶಕಗಳ ನಂತರ ಹಿಗ್ಗಿದೆ. ಆದರೆ ಎಷ್ಟು ವಿಸ್ತೀರ್ಣದ ಪ್ರದೇಶ ಹೆಚ್ಚಿದೆ ಎಂಬುದರ ಕುರಿತು ಮಾಪನವೇ ಆಗಿಲ್ಲ. ಜಲಾಶಯ ನಿರ್ಮಿಸುವಾಗ ಇದ್ದ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯನ್ನು ಆಧರಿಸಿಯೇ ನೀರು ಬಿಡುವುದು ನಿರ್ಧಾರವಾಗುತ್ತಿದೆ. ಪೈಪ್ ಔಟ್ಲೆಟ್ಗಳು ಬಿದ್ದು ಹೋಗಿವೆ. ಕಾಲುವೆ ಉಪ ಕಾಲುವೆಗಳು ಅಗಲವಾಗಿವೆ. ಇನ್ನು ಜಲಸಂಪನ್ಮೂಲ ಇಲಾಖೆಯಲ್ಲಿ ಮೊದಲಿನಂತೆ ನೌಕರರು ಇಲ್ಲ. ಹಿರಿಯ ಕಿರಿಯ ಕೆಲಸ ನಿರೀಕ್ಷಕರು ಸೌಡಿಗಳು ಎಂಜಿನಿಯರ್ಗಳ ನೇಮಕಾತಿ ನಡೆಯುತ್ತಿಲ್ಲ. ವಾಹನ ಚಾಲಕರೇ ಇಲ್ಲ. ಎಲ್ಲ ಹೊರಗುತ್ತಿಗೆ ಆಧಾರದಲ್ಲಿ ನಡೆಯಬೇಕು. ಈ ಕಾರಣ ರೈತರೇ ನಾಲೆಗಳ ನಿರ್ವಹಣೆ ಮಾಡುವಂತಿದೆ. ಇಲ್ಲದಿದ್ದರೆ ಅವು ಹಾಳುಬೀಳುತ್ತವೆ ಎಂದು ಜರೇಕಟ್ಟೆಯ ರೈತ ಕುಬೇರಪ್ಪ ಬೇಸರಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ:</strong> ಜಿಲ್ಲೆ ವ್ಯಾಪ್ತಿಯಲ್ಲಿ 1,200 ಕಿ.ಮೀ. ಉದ್ದದವರೆಗೆ ಹಾದು ಹೋಗಿರುವ ಭದ್ರಾ ನಾಲೆಗಳಿಗೆ ಅಲ್ಲಲ್ಲಿ ಅಕ್ವಾಡೆಕ್ಟ್ಗಳು ಹಾಗೂ ಅಡ್ಡಲಾಗಿ ಸೇತುವೆಗಳನ್ನು ನಿರ್ಮಿಸಲಾಗಿದೆ. ಇವು ಕಾಯಕಲ್ಪಕ್ಕೆ ಕಾದಿವೆ.</p>.<p>60 ವರ್ಷಗಳ ಹಿಂದೆ ನಿರ್ಮಿಸಿರುವ ಈ ಅಕ್ವಾಡೆಕ್ಟ್ಗಳು ಹಾಗೂ ಸೇತುವೆಗಳು ಅಲ್ಲಲ್ಲಿ ಶಿಥಿಲಗೊಂಡಿದ್ದು, ಕೆಲವು ಈಗಾಗಲೇ ಒಡೆದಿವೆ. ಇದರಿಂದ ನೀರು ಪೋಲಾಗುತ್ತಿದ್ದು, ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ಪ್ರದೇಶಗಳಿಗೆ ನಾಲೆ ನೀರು ತಲುಪುತ್ತಲೇ ಇಲ್ಲ. ಇವುಗಳನ್ನು ನಿರ್ಮಿಸಿದ ನಂತರ ಯಾವುದೇ ಅಭಿವೃದ್ಧಿ ಕಾಮಗಾರಿ ಕೈಗೊಂಡಿಲ್ಲ. ಇದು ಆಡಳಿತದ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿ.</p>.<p>1965ರಲ್ಲಿ ಭದ್ರಾ ನಾಲೆಗಳಿಗೆ ನೀರು ಹರಿಸಲಾಗಿತ್ತು. ಇದಕ್ಕೂ ಮುನ್ನ, ಅಂದರೆ 1960–62ರ ಅವಧಿಯಲ್ಲಿ ಸೇತುವೆ, ನಾಲೆ ಹಾಗೂ ಅಕ್ವಾಡೆಕ್ಟ್ಗಳು ನಿರ್ಮಾಣಗೊಂಡಿದ್ದವು. ಇವುಗಳು ಒಡೆದು ಭಾರಿ ಪ್ರಮಾಣದಲ್ಲಿ ನೀರು ಹರಿದಿದ್ದರಿಂದ ಬೆಳೆಗಳು ನಾಶವಾಗಿದ್ದವು. ಆ ಸಂದರ್ಭದಲ್ಲಿ ಸಣ್ಣಪುಟ್ಟ ದುರಸ್ತಿ ಕಾರ್ಯ ಕೈಗೊಂಡಿದ್ದು ಬಿಟ್ಟರೆ, ಸಮಗ್ರ ನವೀಕರಣ ಕಾಮಗಾರಿ ನಡೆಸಿಲ್ಲ. ನೀರಿನ ಹೊಡೆತಕ್ಕೆ ಇವು ಕ್ರಮೇಣ ಶಿಥಿಲಗೊಂಡಿವೆ. ಕೆಲವೆಡೆ ರೈತರು ನೀರು ಹರಿಸಿಕೊಳ್ಳಲು ಒಡೆದ ಪರಿಣಾಮವೂ ಇವು ಹಾಳಾಗಿವೆ.</p>.<p>2007–08ರಲ್ಲಿ ಭದ್ರಾ ನಾಲೆಗಳ ಆಧುನೀಕರಣ ನಡೆದಿತ್ತು. ಆ ನಂತರದಲ್ಲಿ ನಾಲೆಗಳು, ಸೇತುವೆಗಳು, ಅಕ್ವಾಡೆಕ್ಟ್ಗಳು, ಉಪ ನಾಲೆ, ಶಾಖಾ ನಾಲೆ, ಹೊಲಗಾಲುವೆಗಳು, ತೂಬು, ಗೇಟು ಹಾಗೂ ಪೈಪ್ ಔಟ್ಲೆಟ್ಗಳು ದುರಸ್ತಿ ಭಾಗ್ಯ ಕಂಡಿಲ್ಲ.</p>.<p>ಮಾಯಕೊಂಡ ಸಮೀಪದ ನಲ್ಕುಂದ ಗ್ರಾಮದಲ್ಲಿ ಭದ್ರಾ ನಾಲೆಗೆ ನಿರ್ಮಿಸಿದ್ದ ‘ನಲ್ಕುಂದ ತೊಟ್ಟಿಲು ಸೇತುವೆ’ ಕುಸಿದು ಅಪಾರ ಪ್ರಮಾಣದಲ್ಲಿ ಬೆಳೆ ನಾಶವಾಗಿತ್ತು. ಅದನ್ನು 2022ರಲ್ಲಿ ದುರಸ್ತಿ ಮಾಡಲಾಗಿತ್ತು. ಬಸವಾಪಟ್ಟಣದಲ್ಲಿನ ಭದ್ರಾ ನಾಲೆ ಒಡೆದಿದ್ದಾಗಲೂ ಇದೇ ಪರಿಸ್ಥಿತಿ ಎದುರಾಗಿತ್ತು. ಬಳಿಕ ಅದರ ದುರಸ್ತಿಯನ್ನೂ ಕೈಗೊಳ್ಳಲಾಗಿತ್ತು. </p>.<p>ಆದರೆ, ಜಿಲ್ಲೆ ವ್ಯಾಪ್ತಿಯ ದಾವಣಗೆರೆ, ಚನ್ನಗಿರಿ, ಹರಿಹರ, ಮಲೇಬೆನ್ನೂರು ಭಾಗದಲ್ಲಿನ ಭದ್ರಾ ಉಪನಾಲೆ, ಸೇತುವೆಗಳು ಹಾಳಾದ ಸಂದರ್ಭದಲ್ಲಿ ಶಾಶ್ವತ ಅಭಿವೃದ್ಧಿ ಕಾಮಗಾರಿ ಕೈಗೊಳ್ಳದ ಅಧಿಕಾರಿಗಳು ಮರಳಿನ ಚೀಲ ತಂದಿಟ್ಟು ಕಣ್ಣೊರೆಸುವ ತಂತ್ರ ಅನುಸರಿಸಿದ್ದರು. </p>.<p>ಕಣ್ಮನ ಸೆಳೆವ ಅಕ್ವಾಡೆಕ್ಟ್ಗಳಿಗೆ ಬೇಕಿದೆ ಕಾಯಕಲ್ಪ:</p>.<p>ಜಿಲ್ಲೆಯ ಬಸವಾಪಟ್ಟಣದ ‘ಬಡಾಸಾಬ್’ ಅಕ್ವಾಡೆಕ್ಟ್, ಚನ್ನಗಿರಿ ತಾಲ್ಲೂಕಿನ ಮಾಡಾಳ್, ಮಲೇಬೆನ್ನೂರು ಸಮೀಪದ ಕೊಮಾರನಹಳ್ಳಿಯ ಅಕ್ವಾಡಕ್ಟ್, ಹಿರೇಮಳಲಿ ಬಳಿಯ ಭದ್ರಾ ಸುರಂಗ, ಸೂಳೆಕೆರೆ ಸಮೀಪದ ಅಕ್ವಾಡೆಕ್ಟ್ಗಳು ಕಾಯಕಲ್ಪಕ್ಕೆ ಕಾದಿವೆ.</p>.<p>‘ಇವುಗಳು ಅಲ್ಲಲ್ಲಿ ಒಡೆದಿವೆ. ಇವುಗಳ ಬೇರಿಂಗ್ಗಳೂ ಸಡಿಲಗೊಳ್ಳುತ್ತಿವೆ. ಶಿಥಿಲಗೊಂಡಿರುವ ಇವು ಅಪಾಯವನ್ನೂ ಆಹ್ವಾನಿಸುತ್ತಿವೆ. ಕಣ್ಮನ ಸೆಳೆಯುತ್ತಿರುವ ಇವುಗಳನ್ನು ದುರಸ್ತಿ ಮಾಡಿದರೆ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯಬಹುದು’ ಎನ್ನುತ್ತಾರೆ ಹೊಳೆಸಿರಿಗೆರೆಯ ರೈತ ಹಾಲೇಶಪ್ಪ. </p>.<p>ಪ್ರವಾಸಿಗರ ಕೈಬೀಸಿ ಕರೆವ ಸೂಳೆಕೆರೆ ಅಕ್ವಾಡೆಕ್ಟ್:</p>.<p>ಸೂಳೆಕೆರೆಯ ಬಳಿ ನಿರ್ಮಿಸಿರುವ ಅಕ್ವಾಡೆಕ್ಟ್, ಎರಡು ಗುಡ್ಡಗಳ ನಡುವಣ ಸಂಪರ್ಕ ಸೇತುವೆಯಂತಿದೆ. ಅಂದಾಜು 12 ಅಡಿ ಆಳದಲ್ಲಿ ನೀರು ಹರಿವ ತೊಟ್ಟಿಗಳನ್ನು ಬೃಹತ್ ಸ್ತಂಭಗಳ ಮೇಲೆ ನಿರ್ಮಿಸಲಾಗಿದೆ. ಇದು ಅಂದಾಜು 1 ಕಿ.ಮೀ. ಉದ್ದ ಇದೆ. ಇದರ ಮುಖಾಂತರ ನೀರು ದಾವಣಗೆರೆ ಭಾಗಕ್ಕೆ ಹರಿಯುತ್ತದೆ. ಸೂಳೆಕೆರೆ ವೀಕ್ಷಣೆಗೆ ಬರುವ ಪ್ರವಾಸಿಗರು ಇದನ್ನು ನೋಡದೇ ಹೋಗುವುದಿಲ್ಲ.</p>.<p>‘ಅಕ್ವಾಡೆಕ್ಟ್ನ ಮೇಲ್ಭಾಗದಲ್ಲಿ ಪಾದಚಾರಿ ಮಾರ್ಗ ಇದೆ. ಇದರ ಎರಡೂ ಮಗ್ಗುಲಲ್ಲಿ ಲೋಹದ ಸರಳುಗಳ ತಡೆಗೋಡೆ ಇತ್ತು. ಆದರೆ ಕಿಡಿಗೇಡಿಗಳು ಈ ಸರಳುಗಳನ್ನು ಕತ್ತರಿಸಿದ್ದಾರೆ’ ಎಂದು ಸ್ಥಳೀಯರಾದ ಪ್ರವೀಣ್ ಹೇಳಿದರು.</p>.<p>‘ನಾಲೆ ನಿರ್ಮಾಣವಾಗಿ 50ಕ್ಕೂ ಹೆಚ್ಚು ವರ್ಷಗಳಾಗಿವೆ. ಸೇತುವೆಗಳು, ಅಕ್ವಾಡೆಕ್ಟ್ಗಳು ಬಿರುಕು ಬಿಡುತ್ತಿವೆ. ಸಂಬಂಧಪಟ್ಟವರು ಆಧುನಿಕ ತಂತ್ರಜ್ಞಾನದ ಮೂಲಕ ಇವುಗಳನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಬೇಕು’ ಎಂಬುದು ರೈತರ ಒತ್ತಾಯ.</p>.<p>ಜಿಲ್ಲೆಯಲ್ಲಿನ ಅಂದಾಜು 855 ಭದ್ರಾ ಕಾಲುವೆಗಳಲ್ಲಿ ಮುಖ್ಯ ನಾಲೆ ಹೊರತುಪಡಿಸಿದರೆ ಉಳಿದವುಗಳನ್ನು ಅಭಿವೃದ್ಧಿ ಪಡಿಸುವ ಅಗತ್ಯ ಹೆಚ್ಚಿದೆ.</p>.<p>‘ನಾಲೆಗಳು ಹಾಗೂ ಸಂಬಂಧಿಸಿದ ಸೇತುವೆ, ಅಕ್ವಾಡೆಕ್ಟ್ಗಳನ್ನು ಅಭಿವೃದ್ಧಿಪಡಿಸುವುದು ಯಾವಾಗ? ಎಂದು ಕೇಳಿದರೆ ಅಧಿಕಾರಿಗಳು ಇಲಾಖೆಗೆ ಅನುದಾನವೇ ಬರುತ್ತಿಲ್ಲ ಎನ್ನುತ್ತಾರೆ. ಅನುದಾನ ತರಲು ಪ್ರಯತ್ನಿಸಬೇಕು. ಸುಮ್ಮನೆ ನೆಪ ಹೇಳಿದರೆ ಹೇಗೆ? ಜನಪ್ರತಿನಿಧಿಗಳಿಗೆ ಇದರ ಪರಿವೇ ಇಲ್ಲ’ ಎಂದು ದೂರುತ್ತಾರೆ ರೈತ ಪರಶುರಾಮಪ್ಪ. </p>.<p>ಭದ್ರಾ ನಾಲೆ ಆಧುನೀಕರಣದ ಸಂದರ್ಭದಲ್ಲಿನ ಕಳಪೆ ಕಾಮಗಾರಿಯಿಂದ ರೈತರಿಗೆ ನಷ್ಟವಾದರೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಜೇಬು ತುಂಬಿತು. ಇಂತಹ ಲೂಟಿ ತಪ್ಪಿಸಲೆಂದೇ ಇಲಾಖೆಗೆ ಅನುದಾನ ನೀಡುತ್ತಿಲ್ಲ ಎಂಬ ಆರೋಪವೂ ಇದೆ.</p>.<p> <strong>ಸಿಬ್ಬಂದಿ ಕೊರತೆ; ನಡೆಯದ ಮಾಪನ</strong> </p><p>ಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿ ದಶಕಗಳ ನಂತರ ಹಿಗ್ಗಿದೆ. ಆದರೆ ಎಷ್ಟು ವಿಸ್ತೀರ್ಣದ ಪ್ರದೇಶ ಹೆಚ್ಚಿದೆ ಎಂಬುದರ ಕುರಿತು ಮಾಪನವೇ ಆಗಿಲ್ಲ. ಜಲಾಶಯ ನಿರ್ಮಿಸುವಾಗ ಇದ್ದ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯನ್ನು ಆಧರಿಸಿಯೇ ನೀರು ಬಿಡುವುದು ನಿರ್ಧಾರವಾಗುತ್ತಿದೆ. ಪೈಪ್ ಔಟ್ಲೆಟ್ಗಳು ಬಿದ್ದು ಹೋಗಿವೆ. ಕಾಲುವೆ ಉಪ ಕಾಲುವೆಗಳು ಅಗಲವಾಗಿವೆ. ಇನ್ನು ಜಲಸಂಪನ್ಮೂಲ ಇಲಾಖೆಯಲ್ಲಿ ಮೊದಲಿನಂತೆ ನೌಕರರು ಇಲ್ಲ. ಹಿರಿಯ ಕಿರಿಯ ಕೆಲಸ ನಿರೀಕ್ಷಕರು ಸೌಡಿಗಳು ಎಂಜಿನಿಯರ್ಗಳ ನೇಮಕಾತಿ ನಡೆಯುತ್ತಿಲ್ಲ. ವಾಹನ ಚಾಲಕರೇ ಇಲ್ಲ. ಎಲ್ಲ ಹೊರಗುತ್ತಿಗೆ ಆಧಾರದಲ್ಲಿ ನಡೆಯಬೇಕು. ಈ ಕಾರಣ ರೈತರೇ ನಾಲೆಗಳ ನಿರ್ವಹಣೆ ಮಾಡುವಂತಿದೆ. ಇಲ್ಲದಿದ್ದರೆ ಅವು ಹಾಳುಬೀಳುತ್ತವೆ ಎಂದು ಜರೇಕಟ್ಟೆಯ ರೈತ ಕುಬೇರಪ್ಪ ಬೇಸರಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>