ದಾವಣಗೆರೆ: ‘ಮಹಾನಗರ ಪಾಲಿಕೆಯಲ್ಲಿ ಜಿಜೆಪಿ ಆಡಳಿತ ನಡಸಲಿದೆ’ ಎಂದು ಜಿಜೆಪಿ ಜಿಲ್ಲಾಧ್ಯಕ್ಷ ಯಶವಂತ್ರಾವ್ ಜಾಧವ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ದುರಾಡಳಿತಕ್ಕೆ ಜನರು ಬೇಸತ್ತು 39ರಿಂದ 17 ಸ್ಥಾನ ನೀಡಿದ್ದಾರೆ. ಜೆಡಿಎಸ್ ಪಕ್ಷದ ಪಾಲಿಕೆ ಸದಸ್ಯ ನಮ್ಮನ್ನು ಬೆಂಬಲಿಸುವ ಭರವಸೆ ನೀಡಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಪಾಲಿಕೆ ಸದಸ್ಯರಾದ ರಾಕೇಶ್ ಜಾಧವ್, ಗೋಣಪ್ಪ, ಶಾಂತಕುಮಾರ್ ಸೋಗಿ, ಗಾಯಿತ್ರಿ ಬಾಯಿ, ಆನಂದ್, ಕರಿಬಸಪ್ಪ, ಗುರು ಸೋಗಿ, ಗೌತಮ್ ಜೈನ್ ಅವರೂ ಇದ್ದರು.