ಸ್ವಚ್ಛ ಭಾರತ್ ನಗರಗಳ ಪಟ್ಟಿಯಲ್ಲಿದಾವಣಗೆರೆ 200ನೇ ಸ್ಥಾನದಲ್ಲಿದೆ. ಅದನ್ನು ಎರಡಂಕೆಯೊಳಗೆ ತರವುದೂ ಸೇರಿ ಹಲವು ಕನಸುಗಳಿವೆ. ಹಾಗಾಗಿ ಯಾರೂ ನನ್ನನ್ನು ಅಭಿನಂದಿಸಲು ಕರೆಯಬೇಡಿ. ಕೆಲಸ ಇದ್ದರೆ ಕರೆಯಿರಿ ಎಂದು ನೂತನ ಮೇಯರ್ ಬಿ.ಜಿ. ಅಜಯ ಕುಮಾರ್ ಹೇಳಿದರು. ಮೇಯರ್ ಆಗಿ ಆಯ್ಕೆಯಾದ ನಂತರ ಸುದ್ದಿಗಾರರ ಜತೆ ಮಾತನಾಡಿದರು.