ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂದಿ ಕಚ್ಚಿ ಬಾಲಕನಿಗೆ ಗಾಯ

Last Updated 7 ಜೂನ್ 2019, 18:33 IST
ಅಕ್ಷರ ಗಾತ್ರ

ದಾವಣಗೆರೆ: ಆಟವಾಡುತ್ತಿದ್ದ ಬಾಲಕನಿಗೆ ಹಂದಿಯೊಂದು ಕಚ್ಚಿದ್ದು, ತೀವ್ರ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಶಿವಕುಮಾರಸ್ವಾಮಿ ಬಡಾವಣೆಯ ಅಶೋಕ್ ಅವರ ಪುತ್ರ ವೇದಾಂತ್‌ ಎ. ಗೌಡ (10) ಗಾಯಗೊಂಡ ಬಾಲಕ. ಗುರುವಾರ ಸಂಜೆ ಆಟವಾಡುತ್ತಿದ್ದ ವೇಳೆ ಚೆಂಡು ಹಂದಿ ಮರಿಗಳು ಇರುವ ಜಾಗಕ್ಕೆ ಹೋಗಿದೆ. ಅದನ್ನು ತೆಗೆದುಕೊಂಡು ಬರಲು ಹೋದಾಗ ಬಾಲಕನ ಬಲ ಭುಜವನ್ನು ಕಚ್ಚಿಕೊಂಡು 10 ಅಡಿ ದೂರ ಎಳೆದುಕೊಂಡು ಹೋಗಿದೆ.

ಹಂದಿ ಎಳೆದುಕೊಂಡ ಹೋದ ರಭಸಕ್ಕೆ ಬಾಲಕನ ಮುಖ ಮೈಯೆಲ್ಲಾ ತರಚಿದ್ದು, ಬಲಗೈನ ಭುಜದ ಮೂಳೆ ಮುರಿದು ಹೋಗಿದೆ. ಈ ವೇಳೆ ಅಲ್ಲಿದ್ದವರು ಬಾಪೂಜಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆಸ್ಪತ್ರೆಯಲ್ಲಿ ಬಾಲಕನಿಗೆ ರೇಬಿಸ್ ಲಸಿಕೆ ನೀಡಿದ್ದು, ನಾಳೆ ಶಸ್ತ್ರ ಚಿಕಿತ್ಸೆ ನಡೆಸುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ವೇದಾಂತ್ ತಂದೆ ಮಯೂರ್ ಎಲೆಕ್ಟ್ರಾನಿಕ್ಸ್‌ ಮಾಲೀಕ ಅಶೋಕ್ ತಿಳಿಸಿದರು.

ಕೆಟಿಜೆ ಠಾಣೆಗೆ ಈ ಕುರಿತು ದೂರು ನೀಡಿದ್ದು, ಹಂದಿಗಳನ್ನು ಸಾಗಿಸುವಂತೆ ಮಾಲೀಕನಿಗೆ ಪೊಲೀಸರು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT