ಯೂನಿಯನ್ ಪ್ರಧಾನ ಕಾರ್ಯದರ್ಶಿ ಕರಿಬಸಪ್ಪ ಮಾತನಾಡಿ, ‘ಮನುಷ್ಯರನ್ನು ಕೊಂದು ಧರ್ಮದ ರಕ್ಷಣೆ ಮಾಡುವುದಕ್ಕಿಂತ ಧರ್ಮವನ್ನೆ ಕೊಂದು ಮನುಷ್ಯರನ್ನು ರಕ್ಷಣೆ ಮಾಡಿ, ಯಾಕಂದರೇ ಮನುಷ್ಯತ್ವವೆ ನೈಜ ಧರ್ಮ ಎಂದು ಬುದ್ಧ ಹೇಳಿದ್ದ. ಇವತ್ತು ಇನ್ನೊಬ್ಬರನ್ನು ಕೊಂದೇ, ಹಿಂಸೆ ದೌರ್ಜನ್ಯವನ್ನು ಕೊಟ್ಟೇ ಬದುಕುತ್ತೇವೆ. ಧರ್ಮಗಳನ್ನು ಉಳಿಸುತ್ತೇವೆ ಎನ್ನುವವರು ಹೆಚ್ಚಾಗಿದ್ದಾರೆ’ ಎಂದು ವಿಷಾದಿಸಿದರು.