ದೇವಸ್ಥಾನದ ಸಮೀಪ ಇರುವ ಸೀಮೆ ಎಣ್ಣೆ ಬಂಕ್ ಬಳಿ ಈ ಬಲಿ ನಡೆದಿದೆ ಎನ್ನಲಾಗಿದೆ. ಕೋಣ ಬಲಿ ನೀಡಿದರಷ್ಟೇ ದೇವಿ ಸಂತೃಪ್ತಗೊಳ್ಳುವಳುಎಂಬ ನಂಬಿಕೆ ಇಲ್ಲಿನ ಭಕ್ತರಲ್ಲಿದೆ. ಕೋಣ ಬಲಿ ತಪ್ಪಿಸಲೇಬೇಕು ಎಂದು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಹಿತ ವಿವಿಧ ಅಧಿಕಾರಿಗಳು ರಾತ್ರಿ ನಿದ್ದೆ ಮಾಡದೇ ಕಾದಿದ್ದರು. ದೇವಸ್ಥಾನದ ನೂರು ಮೀಟರ್ ವ್ಯಾಪ್ತಿಯಲ್ಲಿ ಎಲ್ಲೂ ಬಲಿ ನಡೆಯದಂತೆ ವ್ಯವಸ್ಥೆ ಮಾಡಲಾಗಿತ್ತು. ಭಕ್ತರೂ ಅಷ್ಟೇ, ಆ ವ್ಯಾಪ್ತಿಯಲ್ಲಿ ಬಲಿ ಕೊಡದೇ ಸ್ವಲ್ಪ ದೂರದಲ್ಲಿ ಬಲಿ ನೀಡಿದ್ದಾರೆ. ಕೋಣದ ರಕ್ತಕ್ಕೆ ಚರಗ (ಬಿಳಿಜೋಳ) ಹಾಕಿದ್ದಾರೆ ಎನ್ನಲಾಗಿದೆ.