ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ ಹರಿದು ಬೈಕ್‌ ಸವಾರರ ಸಾವು

Last Updated 17 ಡಿಸೆಂಬರ್ 2019, 10:35 IST
ಅಕ್ಷರ ಗಾತ್ರ

ದಾವಣಗೆರೆ: ಇಲ್ಲಿನ ಅರುಣ ಚಿತ್ರಮಂದಿರದ ಬಳಿ ಸೋಮವಾರ ಸಿಗ್ನಲ್‌ನಲ್ಲಿ ನಿಂತಿದ್ದ ಬಸ್‌ ಚಾಲಕನ ಧಾವಂತಕ್ಕೆ ಬೈಕ್‌ ಸವಾರರಿಬ್ಬರು ಬಲಿಯಾಗಿದ್ದಾರೆ.

ಹರಪನಹಳ್ಳಿ ತಾಲ್ಲೂಕು ಜಂಗಮ ತುಂಬಿಗೆರೆಯಲ್ಲಿ ಶಿಕ್ಷಕನಾಗಿರುವ, ಇಲ್ಲಿನ ಎಸ್‌ಎಸ್‌ ಲೇಔಟ್‌ ಬಿ ಬ್ಲಾಕ್‌ ನಿವಾಸಿ ಬಸವರಾಜಪ್ಪ (42) ಮತ್ತು ಅಪೂರ್ವ ರೆಸಾರ್ಡ್‌ನಲ್ಲಿ ಕೆಲಸ ಮಾಡುವ ವಿನೋಬನಗರ ನಿವಾಸಿ ಸ್ವಾಮಿ ಜೆ.ಎಂ. (60) ಮೃತಪಟ್ಟವರು. ಇಬ್ಬರೂ ತಮ್ಮ ತಮ್ಮ ಬೈಕ್‌ಗಳಲ್ಲಿ ಬಂದಿದ್ದು ಸಿಗ್ನಲ್‌ ಬಿದ್ದಿದ್ದರಿಂದ ನಿಲ್ಲಿಸಿದ್ದರು. ಪಕ್ಕದಲ್ಲಿ ಸ್ಟೀಲ್‌ ಫ್ಯಾಕ್ಟರಿ ಕಾರ್ಖಾನೆಯೊಂದರ ಕಾರ್ಮಿಕರನ್ನು ಒಯ್ಯುವ ಬಸ್‌ ನಿಂತಿತ್ತು. ಹಸಿರು ಸಿಗ್ನಲ್‌ ಬರುತ್ತಿದ್ದಂತೆ ಬಸ್‌ ಚಾಲಕ ಒಮ್ಮೆಲೇ ಮುಂದಕ್ಕೆ ಚಲಾಯಿಸಲು ನೋಡಿದ್ದು, ಎದುರು ಇದ್ದ ಆಟೊಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ‌ಎಡಕ್ಕೆ ನುಗ್ಗಿಸಿದ್ದರಿಂದ ಎರಡೂ ಬೈಕ್‌ಗಳ ಮೇಲೆ ಬಸ್‌ ಹರಿದಿದೆ. ಇಬ್ಬರೂ ಮೃತಪಟ್ಟಿದ್ದಾರೆ. ದಕ್ಷಿಣ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT