ದಾವಣಗೆರೆ: ಕೋವಿಡ್-19 ಮಾರ್ಗಸೂಚಿಯಂತೆ ಇಲ್ಲಿನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಬಸ್ ಸಂಚಾರ ಆರಂಭಿಸಲಾಯಿತು. ನಿಲ್ದಾಣದ ಪ್ರವೇಶದ್ವಾರದಿಂದ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಸ್ಯಾನಿಟೈಸರ್ ಹಾಕಿ ನಿಲ್ದಾಣದೊಳಗೆ ಬಿಡಲಾಯಿತು.
ಬೆಂಗಳೂರಿಗೆ ಹೆಚ್ಚು ಬೇಡಿಕೆ ಇದ್ದುದರಿಂದ ಅಲ್ಲಿಗೆ ಅರ್ಧ. ಮುಕ್ಕಾಲು ಗಂಟೆಗಳಿಗೊಮ್ಮೆ ಬಸ್ ವ್ಯವಸ್ಥೆ ಮಾಡಲಾಗಿತ್ತು. ದಾವಣಗೆರೆಯಿಂದ ಹುಬ್ಬಳ್ಳಿ, ಶಿವಮೊಗ್ಗ, ಚಿತ್ರದುರ್ಗ, ರಾಣೆಬೆನ್ನೂರು, ಹರಪನಹಳ್ಳಿ, ಹರಿಹರ, ಚನ್ನಗಿರಿ, ಜಗಳೂರಿಗೆ ಬಸ್ ಸಂಚರಿಸಿದವು.
ಒಂದು ಬಸ್ ನಲ್ಲಿ 30 ಸೀಟುಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ದಾವಣಗೆರೆಯಿಂದ ಹುಬ್ಬಳ್ಳಿ, ಶಿವಮೊಗ್ಗ, ಚಿತ್ರದುರ್ಗ, ರಾಣೆಬೆನ್ನೂರು, ಹರಪನಹಳ್ಳಿ, ಹರಿಹರ, ಚನ್ನಗಿರಿ, ಜಗಳೂರಿಗೆ ಬಸ್ ಸಂಚರಿಸಿದವು. ಒಂದು ಬಸ್ನಲ್ಲಿ 30 ಸೀಟುಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.