ಕ್ಯಾನ್ಸರ್ ಗೆದ್ದಿರುವ ದಾವಣಗೆರೆಯ ಹಿರಿಯ ಕಲಾವಿದ ಆರ್.ಟಿ. ಅರುಣ್ಕುಮಾರ್ ಅವರು ಕಳೆದ 10 ವರ್ಷಗಳಿಂದ ಜಾಗೃತಿ ಮೂಡಿಸುತ್ತಿದ್ದಾರೆ. ಇದೇ ರೀತಿ ಕ್ಯಾನ್ಸರ್ನಿಂದ ಗುಣವಾದವರು ತಮ್ಮ ಅನುಭವಗಳನ್ನು ಜನರ ಮುಂದೆ ತೆರೆದಿಟ್ಟಾಗ ಉಳಿದವರಿಗೂ ಈ ಕಾಯಿಲೆಯ ಲಕ್ಷಣಗಳು, ಚಿಕಿತ್ಸೆಯ ವಿವರ, ಧೈರ್ಯದಿಂದ ಎದುರಿಸುವ ವಿಧಾನ ತಿಳಿಯುತ್ತದೆ. ನಿಯಮಿತ ಆರೋಗ್ಯ ತಪಾಸಣೆ ಮೂಲಕ ಈ ರೋಗವನ್ನು ದೂರವಿಡಲು ಎಲ್ಲರೂ ಪ್ರಯತ್ನಿಸಬೇಕಿದೆ. ಕ್ಯಾನ್ಸರ್ ರೋಗಿಗಳಲ್ಲಿ ಮಾನಸಿಕ ಸಿದ್ಧತೆ ತುಂಬಾ ಅಗತ್ಯವಾಗಿರುವುದರಿಂದ ‘ಪ್ರಜಾವಾಣಿ’ ಪತ್ರಿಕಾ ಸಮೂಹ ಆಯೋಜಿಸಿರುವ ಈ ಜಾಥಾ ಸ್ಫೂರ್ತಿ ತುಂಬುವುದಕ್ಕಾಗಿ
ಸಹಾಯವಾಗಲಿದೆ.