ತಮಲೇಹಳ್ಳಿ ನಾಗರಾಜ್ ಅವರ ಅಂಗಡಿ ಮತ್ತು ಮನೆ ಒಂದೇ ಕಟ್ಟಡದಲ್ಲಿದ್ದು, ಮಂಗಳವಾರ ರಾತ್ರಿ ವ್ಯಾಪಾರ ಮುಗಿದ ಮೇಲೆ ಗಲ್ಲಾಪೆಟ್ಟಿಗೆಯಲ್ಲಿ ₹ 38 ಸಾವಿರ ಇಟ್ಟು ಅಂಗಡಿ ಬಾಗಿಲು ಹಾಕಿದ್ದರು. ಬಳಿಕ ಪತ್ನಿ ಮಕ್ಕಳೊಂದಿಗೆ ಊಟ ಮಾಡಿ ಮಲಗಿದ್ದರು. ಮರುದಿನ ನೋಡುವಾಗ ಆ ಹಣ ಇರಲಿಲ್ಲ. ಮನೆಯ ಹೆಂಚು ತೆಗೆದಿರುವುದು ಕಂಡು ಬಂದಿದ್ದು, ಹೆಂಚುತೆಗೆದು ಯಾರೋ ಒಳಗೆ ಬಂದು ಕಳವು ಮಾಡಿದ್ದಾರೆ ಎಂದು ನಾಗರಾಜ್ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.