ಸಮಾಜದ ಮುಖಂಡ, ಬಿಜೆಪಿ ಯುವ ಮೋರ್ಚಾ (ಉತ್ತರ ವಲಯ) ಅಧ್ಯಕ್ಷ ಸಚಿನ್ ವರ್ಣೇಕರ್, ‘ನಂಜುಂಡಿ ಅವರು ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಸಮಾಜದಲ್ಲಿ ಒಡಕು ಮೂಡಿಸಲು ಯತ್ನಿಸುತ್ತಿದ್ದಾರೆ. ಇದು ಖಂಡನೀಯ. ದೈವಜ್ಞ ಸಮಾಜವನ್ನು ಪ್ರವರ್ಗ 2 ‘ಎ’ ಯಿಂದ ತೆಗೆಯುವಂತೆ ಹೇಳಲು ಅವರಿಗೆ ಏನು ಅಧಿಕಾರವಿದೆ. ಅವರನ್ನು ನಮ್ಮ ನಾಯಕರು ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಉದ್ದೇಶಪೂರ್ವಕವಾಗಿ ಅವರು ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ’ ಎಂದು ದೂರಿದರು.