<p><strong>ದಾವಣಗೆರೆ</strong>: ಭೌಗೋಳಿಕವಾಗಿ ದಾವಣಗೆರೆಯ ಜಿಲ್ಲೆಯಲ್ಲಿದ್ದರೂ ಅರಣ್ಯ ಇಲಾಖೆಯ ಭದ್ರಾವತಿ ವಿಭಾಗದ ವ್ಯಾಪ್ತಿಯಲ್ಲಿರುವ ಚನ್ನಗಿರಿ ತಾಲ್ಲೂಕಿನ ಅರಣ್ಯ ಪ್ರದೇಶವನ್ನು ದಾವಣಗೆರೆ ವಿಭಾಗದ ವ್ಯಾಪ್ತಿಗೆ ಸೇರಿಸುವ ಪ್ರಕ್ರಿಯೆಗೆ ಕೊನೆಗೂ ಚಾಲನೆ ಸಿಕ್ಕಿದೆ. ತಾಲ್ಲೂಕಿನ ಜನರ ಬಹುದಿನಗಳ ಬೇಡಿಕೆಗೆ ಸ್ಪಂದಿಸಲು ಅರಣ್ಯ ಇಲಾಖೆ ಮುಂದಾಗಿದೆ.</p>.<p>ಜಿಲ್ಲೆಯ ದಾವಣಗೆರೆ, ಜಗಳೂರು, ಹರಿಹರ, ಹೊನ್ನಾಳಿ ಹಾಗೂ ನ್ಯಾಮತಿ (ಭಾಗಶಃ) ತಾಲ್ಲೂಕುಗಳು ದಾವಣಗೆರೆ ಅರಣ್ಯ ವಿಭಾಗದ ವ್ಯಾಪ್ತಿಯಲ್ಲಿವೆ. ಚನ್ನಗಿರಿ ತಾಲ್ಲೂಕು ಭದ್ರಾವತಿ ವಿಭಾಗಕ್ಕೆ ಹಾಗೂ ನ್ಯಾಮತಿ ತಾಲ್ಲೂಕಿನ ಒಂದಷ್ಟು ಕಾಡು ಅರಣ್ಯ ಇಲಾಖೆಯ ಶಿವಮೊಗ್ಗ ಹಾಗೂ ಸಾಗರ ವಿಭಾಗದ ವ್ಯಾಪ್ತಿಗೆ ಒಳಪಟ್ಟಿವೆ.</p>.<p>ಜಿಲ್ಲೆಯ ಅರಣ್ಯವು ಶಿವಮೊಗ್ಗ ಜಿಲ್ಲೆಯ ವ್ಯಾಪ್ತಿಗೆ ಒಳಪಟ್ಟಿದ್ದರಿಂದ ಆಡಳಿತಾತ್ಮಕ ವಿಚಾರದಲ್ಲಿ ಹಲವು ಸಮಸ್ಯೆಗಳು ತಲೆದೋರಿವೆ. ಜನರಿಗೆ ಉಂಟಾಗುತ್ತಿರುವ ಸಮಸ್ಯೆಗಳನ್ನು ತಪ್ಪಿಸಲು ಚನ್ನಗಿರಿ ತಾಲ್ಲೂಕಿನ ಅರಣ್ಯವನ್ನು ದಾವಣಗೆರೆ ವಿಭಾಗದ ವ್ಯಾಪ್ತಿಗೆ ಸೇರ್ಪಡೆ ಮಾಡುವಂತೆ ಶಾಸಕ ಬಸವರಾಜು ಶಿವಗಂಗಾ ಹಾಗೂ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರನ್ನು ಕೋರಿದ್ದರು.</p>.<p>ಬಳ್ಳಾರಿ ಅರಣ್ಯ ವೃತ್ತಕ್ಕೆ ಒಳಪಟ್ಟಿರುವ ದಾವಣಗೆರೆ ವಿಭಾಗದಲ್ಲಿ ಅತಿ ಕಡಿಮೆ ಅರಣ್ಯವಿದೆ. ದಾವಣಗೆರೆ ಅರಣ್ಯ ವಿಭಾಗದ ವ್ಯಾಪ್ತಿಯಲ್ಲಿ 26,000 ಹೆಕ್ಟೇರ್ ಕಾಡಿದೆ. ಪಶ್ಚಿಮ ಘಟ್ಟದ ಅಂಚಿನಲ್ಲಿರುವ ಚನ್ನಗಿರಿ ತಾಲ್ಲೂಕೊಂದರಲ್ಲೇ 23,000 ಹೆಕ್ಟೇರ್ ಅರಣ್ಯವಿದೆ. ದಾವಣಗೆರೆ ವಿಭಾಗಕ್ಕೆ ಚನ್ನಗಿರಿ ತಾಲ್ಲೂಕು ಒಳಪಟ್ಟರೆ, 49,000 ಹೆಕ್ಟೇರ್ ಪ್ರದೇಶಕ್ಕೆ ಅರಣ್ಯ ವಿಸ್ತರಣೆ ಆಗಲಿದೆ. ಶಿವಮೊಗ್ಗ ಮತ್ತು ಸಾಗರ ವಿಭಾಗದ ವ್ಯಾಪ್ತಿಯಲ್ಲಿರುವ ನ್ಯಾಮತಿ ತಾಲ್ಲೂಕಿನ ಅರಣ್ಯವೂ ಸೇರ್ಪಡೆಯಾದರೆ ದಾವಣಗೆರೆ ಅರಣ್ಯ ವಿಭಾಗ ಇನ್ನಷ್ಟು ಹಿಗ್ಗಲಿದೆ.</p>.<p>‘ಚನ್ನಗಿರಿ ತಾಲ್ಲೂಕಿನ ಜೋಳದಾಳ್ ವ್ಯಾಪ್ತಿಯಲ್ಲಿ ದಟ್ಟ ಅರಣ್ಯವಿದೆ. ಸೂಳೆಕೆರೆ ವಲಯ ವ್ಯಾಪ್ತಿಯಲ್ಲಿ ಕೂಡ ಉತ್ತಮ ಅರಣ್ಯವಿದೆ. ಅಲ್ಲಿ ಚಿರತೆಗಳು ಸೇರಿ ಅಧಿಕ ಸಂಖ್ಯೆಯ ವನ್ಯಜೀವಿಗಳಿವೆ. ಈ ಅರಣ್ಯವನ್ನು ದಾವಣಗೆರೆ ವಿಭಾಗದ ವ್ಯಾಪ್ತಿಗೆ ಸೇರಿಸಿದರೆ ಆಡಳಿತಾತ್ಮಕ ದೃಷ್ಟಿಯಿಂದ ಅನುಕೂಲವಾಗಲಿದೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ಎನ್. ಹರ್ಷವರ್ಧನ್ ವಿವರಿಸಿದರು.</p>.<p><strong>ಅಲೆದಾಟ</strong>: ಚನ್ನಗಿರಿ ತಾಲ್ಲೂಕು ಭದ್ರಾವತಿ ಅರಣ್ಯ ವಿಭಾಗದ ವ್ಯಾಪ್ತಿಗೆ ಒಳಪಟ್ಟಿರುವುದರಿಂದ ಅರಣ್ಯ ಇಲಾಖೆಗೆ ಸಂಬಂಧಿಸಿದ ಕೆಲಸಗಳಿಗೆ ಸಾರ್ವಜನಿಕರು ಶಿವಮೊಗ್ಗ ಜಿಲ್ಲೆಗೆ ಅಲೆದಾಡಬೇಕಿದೆ. ಕಂದಾಯ ವಿಭಾಗ ದಾವಣಗೆರೆ ಜಿಲ್ಲೆಗೆ ಒಳಪಟ್ಟರೂ ಅರಣ್ಯ ವಿಭಾಗ ಭಿನ್ನವಾಗಿರುವುದರಿಂದ ಆಡಳಿತಾತ್ಮಕ ವಿಚಾರದಲ್ಲಿ ಗೊಂದಲಗಳು ಸೃಷ್ಟಿಯಾಗುತ್ತಿವೆ. ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.</p>.<p>‘ಖಾಸಗಿ ಭೂಮಿಯಲ್ಲಿರುವ ಗಿಡ, ಮರಗಳನ್ನು ಕಡಿಯಲು ಅರಣ್ಯ ಇಲಾಖೆಯ ಅನುಮತಿ ಪಡೆಯಬೇಕು. ಇದಕ್ಕೆ ಚನ್ನಗಿರಿ ತಾಲ್ಲೂಕಿನ ಜನರು ಭದ್ರಾವತಿ ಅರಣ್ಯ ವಿಭಾಗವನ್ನು ಸಂಪರ್ಕಿಸಬೇಕಾಗಿದೆ. ಈ ವಾಸ್ತವ ಅರಿಯದೇ ಅನೇಕರು ದಾವಣಗೆರೆ ವಿಭಾಗವನ್ನು ಸಂಪರ್ಕಿಸುತ್ತಿದ್ದಾರೆ’ ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ವಿವರಿಸಿದರು.</p>.<p><strong>ಭೂಮಿ ಹಕ್ಕಿಗೂ ತೊಂದರೆ</strong>: ಹಲವು ದಶಕಗಳ ಹಿಂದೆ ಸರ್ಕಾರ ಮಂಜೂರು ಮಾಡಿದ ದರಖಾಸ್ತು ಜಮೀನು ಪೋಡಿ, ಬಗರ್ ಹುಕುಂ ಸಾಗುವಳಿ ಚೀಟಿ ಪಡೆಯಲು ಚನ್ನಗಿರಿ ತಾಲ್ಲೂಕಿನ ಜನರು ತೊಂದರೆ ಅನುಭವಿಸುವಂತಾಗಿದೆ. ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆಯ ನಡುವೆ ಸಮನ್ವಯ ಏರ್ಪಡದೇ ಅರ್ಜಿ ವಿಲೇವಾರಿಗೂ ತೊಡಕಾಗಿದೆ.</p>.<p>ಚನ್ನಗಿರಿ ತಾಲ್ಲೂಕು ಒಳಗೊಂಡಂತೆ ಜಿಲ್ಲೆಯಲ್ಲಿ 5,000 ಎಕರೆಗೂ ಹೆಚ್ಚು ಅರಣ್ಯ ಪ್ರದೇಶವನ್ನು ಒತ್ತುವರಿ ಎಂಬುದಾಗಿ ಅರಣ್ಯ ಇಲಾಖೆ ಗುರುತಿಸಿದೆ. ಇದರಲ್ಲಿ ಅತಿ ಹೆಚ್ಚು ಅರಣ್ಯ ಒತ್ತುವರಿ ಹಾಗೂ ತೆರವು ಬಾಕಿ ಚನ್ನಗಿರಿ ತಾಲ್ಲೂಕಿನಲ್ಲಿದೆ. ಭದ್ರಾವತಿ ವಿಭಾಗದಿಂದ ದಾವಣಗೆರೆ ವಿಭಾಗದ ವ್ಯಾಪ್ತಿಗೆ ಚನ್ನಗಿರಿ ಒಳಪಟ್ಟರೆ ಒತ್ತುವರಿ ತೆರವಿನ ಪ್ರಕರಣಗಳ ಇತ್ಯರ್ಥ ಚುರುಕುಪಡೆಯಲಿದೆ.</p>.<div><blockquote>ಚನ್ನಗಿರಿ ತಾಲ್ಲೂಕು ದಾವಣಗೆರೆ ಅರಣ್ಯ ವಿಭಾಗಕ್ಕೆ ಒಳಪಡಬೇಕು ಎಂಬುದು ಬಹುದಿನಗಳ ಬೇಡಿಕೆ. ಜನಪ್ರತಿನಿಧಿಗಳ ಕೋರಿಕೆಯ ಮೇರೆಗೆ ಪ್ರಕ್ರಿಯೆ ಆರಂಭಗೊಂಡಿದೆ.</blockquote><span class="attribution">– ಪಿ.ಎನ್. ಹರ್ಷವರ್ಧನ್, ಉಪ ಅರಣ್ಯ ಸಂರಕ್ಷಣಾಧಿಕಾರಿ ದಾವಣಗೆರೆ ವಿಭಾಗ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ</strong>: ಭೌಗೋಳಿಕವಾಗಿ ದಾವಣಗೆರೆಯ ಜಿಲ್ಲೆಯಲ್ಲಿದ್ದರೂ ಅರಣ್ಯ ಇಲಾಖೆಯ ಭದ್ರಾವತಿ ವಿಭಾಗದ ವ್ಯಾಪ್ತಿಯಲ್ಲಿರುವ ಚನ್ನಗಿರಿ ತಾಲ್ಲೂಕಿನ ಅರಣ್ಯ ಪ್ರದೇಶವನ್ನು ದಾವಣಗೆರೆ ವಿಭಾಗದ ವ್ಯಾಪ್ತಿಗೆ ಸೇರಿಸುವ ಪ್ರಕ್ರಿಯೆಗೆ ಕೊನೆಗೂ ಚಾಲನೆ ಸಿಕ್ಕಿದೆ. ತಾಲ್ಲೂಕಿನ ಜನರ ಬಹುದಿನಗಳ ಬೇಡಿಕೆಗೆ ಸ್ಪಂದಿಸಲು ಅರಣ್ಯ ಇಲಾಖೆ ಮುಂದಾಗಿದೆ.</p>.<p>ಜಿಲ್ಲೆಯ ದಾವಣಗೆರೆ, ಜಗಳೂರು, ಹರಿಹರ, ಹೊನ್ನಾಳಿ ಹಾಗೂ ನ್ಯಾಮತಿ (ಭಾಗಶಃ) ತಾಲ್ಲೂಕುಗಳು ದಾವಣಗೆರೆ ಅರಣ್ಯ ವಿಭಾಗದ ವ್ಯಾಪ್ತಿಯಲ್ಲಿವೆ. ಚನ್ನಗಿರಿ ತಾಲ್ಲೂಕು ಭದ್ರಾವತಿ ವಿಭಾಗಕ್ಕೆ ಹಾಗೂ ನ್ಯಾಮತಿ ತಾಲ್ಲೂಕಿನ ಒಂದಷ್ಟು ಕಾಡು ಅರಣ್ಯ ಇಲಾಖೆಯ ಶಿವಮೊಗ್ಗ ಹಾಗೂ ಸಾಗರ ವಿಭಾಗದ ವ್ಯಾಪ್ತಿಗೆ ಒಳಪಟ್ಟಿವೆ.</p>.<p>ಜಿಲ್ಲೆಯ ಅರಣ್ಯವು ಶಿವಮೊಗ್ಗ ಜಿಲ್ಲೆಯ ವ್ಯಾಪ್ತಿಗೆ ಒಳಪಟ್ಟಿದ್ದರಿಂದ ಆಡಳಿತಾತ್ಮಕ ವಿಚಾರದಲ್ಲಿ ಹಲವು ಸಮಸ್ಯೆಗಳು ತಲೆದೋರಿವೆ. ಜನರಿಗೆ ಉಂಟಾಗುತ್ತಿರುವ ಸಮಸ್ಯೆಗಳನ್ನು ತಪ್ಪಿಸಲು ಚನ್ನಗಿರಿ ತಾಲ್ಲೂಕಿನ ಅರಣ್ಯವನ್ನು ದಾವಣಗೆರೆ ವಿಭಾಗದ ವ್ಯಾಪ್ತಿಗೆ ಸೇರ್ಪಡೆ ಮಾಡುವಂತೆ ಶಾಸಕ ಬಸವರಾಜು ಶಿವಗಂಗಾ ಹಾಗೂ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರನ್ನು ಕೋರಿದ್ದರು.</p>.<p>ಬಳ್ಳಾರಿ ಅರಣ್ಯ ವೃತ್ತಕ್ಕೆ ಒಳಪಟ್ಟಿರುವ ದಾವಣಗೆರೆ ವಿಭಾಗದಲ್ಲಿ ಅತಿ ಕಡಿಮೆ ಅರಣ್ಯವಿದೆ. ದಾವಣಗೆರೆ ಅರಣ್ಯ ವಿಭಾಗದ ವ್ಯಾಪ್ತಿಯಲ್ಲಿ 26,000 ಹೆಕ್ಟೇರ್ ಕಾಡಿದೆ. ಪಶ್ಚಿಮ ಘಟ್ಟದ ಅಂಚಿನಲ್ಲಿರುವ ಚನ್ನಗಿರಿ ತಾಲ್ಲೂಕೊಂದರಲ್ಲೇ 23,000 ಹೆಕ್ಟೇರ್ ಅರಣ್ಯವಿದೆ. ದಾವಣಗೆರೆ ವಿಭಾಗಕ್ಕೆ ಚನ್ನಗಿರಿ ತಾಲ್ಲೂಕು ಒಳಪಟ್ಟರೆ, 49,000 ಹೆಕ್ಟೇರ್ ಪ್ರದೇಶಕ್ಕೆ ಅರಣ್ಯ ವಿಸ್ತರಣೆ ಆಗಲಿದೆ. ಶಿವಮೊಗ್ಗ ಮತ್ತು ಸಾಗರ ವಿಭಾಗದ ವ್ಯಾಪ್ತಿಯಲ್ಲಿರುವ ನ್ಯಾಮತಿ ತಾಲ್ಲೂಕಿನ ಅರಣ್ಯವೂ ಸೇರ್ಪಡೆಯಾದರೆ ದಾವಣಗೆರೆ ಅರಣ್ಯ ವಿಭಾಗ ಇನ್ನಷ್ಟು ಹಿಗ್ಗಲಿದೆ.</p>.<p>‘ಚನ್ನಗಿರಿ ತಾಲ್ಲೂಕಿನ ಜೋಳದಾಳ್ ವ್ಯಾಪ್ತಿಯಲ್ಲಿ ದಟ್ಟ ಅರಣ್ಯವಿದೆ. ಸೂಳೆಕೆರೆ ವಲಯ ವ್ಯಾಪ್ತಿಯಲ್ಲಿ ಕೂಡ ಉತ್ತಮ ಅರಣ್ಯವಿದೆ. ಅಲ್ಲಿ ಚಿರತೆಗಳು ಸೇರಿ ಅಧಿಕ ಸಂಖ್ಯೆಯ ವನ್ಯಜೀವಿಗಳಿವೆ. ಈ ಅರಣ್ಯವನ್ನು ದಾವಣಗೆರೆ ವಿಭಾಗದ ವ್ಯಾಪ್ತಿಗೆ ಸೇರಿಸಿದರೆ ಆಡಳಿತಾತ್ಮಕ ದೃಷ್ಟಿಯಿಂದ ಅನುಕೂಲವಾಗಲಿದೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ಎನ್. ಹರ್ಷವರ್ಧನ್ ವಿವರಿಸಿದರು.</p>.<p><strong>ಅಲೆದಾಟ</strong>: ಚನ್ನಗಿರಿ ತಾಲ್ಲೂಕು ಭದ್ರಾವತಿ ಅರಣ್ಯ ವಿಭಾಗದ ವ್ಯಾಪ್ತಿಗೆ ಒಳಪಟ್ಟಿರುವುದರಿಂದ ಅರಣ್ಯ ಇಲಾಖೆಗೆ ಸಂಬಂಧಿಸಿದ ಕೆಲಸಗಳಿಗೆ ಸಾರ್ವಜನಿಕರು ಶಿವಮೊಗ್ಗ ಜಿಲ್ಲೆಗೆ ಅಲೆದಾಡಬೇಕಿದೆ. ಕಂದಾಯ ವಿಭಾಗ ದಾವಣಗೆರೆ ಜಿಲ್ಲೆಗೆ ಒಳಪಟ್ಟರೂ ಅರಣ್ಯ ವಿಭಾಗ ಭಿನ್ನವಾಗಿರುವುದರಿಂದ ಆಡಳಿತಾತ್ಮಕ ವಿಚಾರದಲ್ಲಿ ಗೊಂದಲಗಳು ಸೃಷ್ಟಿಯಾಗುತ್ತಿವೆ. ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.</p>.<p>‘ಖಾಸಗಿ ಭೂಮಿಯಲ್ಲಿರುವ ಗಿಡ, ಮರಗಳನ್ನು ಕಡಿಯಲು ಅರಣ್ಯ ಇಲಾಖೆಯ ಅನುಮತಿ ಪಡೆಯಬೇಕು. ಇದಕ್ಕೆ ಚನ್ನಗಿರಿ ತಾಲ್ಲೂಕಿನ ಜನರು ಭದ್ರಾವತಿ ಅರಣ್ಯ ವಿಭಾಗವನ್ನು ಸಂಪರ್ಕಿಸಬೇಕಾಗಿದೆ. ಈ ವಾಸ್ತವ ಅರಿಯದೇ ಅನೇಕರು ದಾವಣಗೆರೆ ವಿಭಾಗವನ್ನು ಸಂಪರ್ಕಿಸುತ್ತಿದ್ದಾರೆ’ ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ವಿವರಿಸಿದರು.</p>.<p><strong>ಭೂಮಿ ಹಕ್ಕಿಗೂ ತೊಂದರೆ</strong>: ಹಲವು ದಶಕಗಳ ಹಿಂದೆ ಸರ್ಕಾರ ಮಂಜೂರು ಮಾಡಿದ ದರಖಾಸ್ತು ಜಮೀನು ಪೋಡಿ, ಬಗರ್ ಹುಕುಂ ಸಾಗುವಳಿ ಚೀಟಿ ಪಡೆಯಲು ಚನ್ನಗಿರಿ ತಾಲ್ಲೂಕಿನ ಜನರು ತೊಂದರೆ ಅನುಭವಿಸುವಂತಾಗಿದೆ. ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆಯ ನಡುವೆ ಸಮನ್ವಯ ಏರ್ಪಡದೇ ಅರ್ಜಿ ವಿಲೇವಾರಿಗೂ ತೊಡಕಾಗಿದೆ.</p>.<p>ಚನ್ನಗಿರಿ ತಾಲ್ಲೂಕು ಒಳಗೊಂಡಂತೆ ಜಿಲ್ಲೆಯಲ್ಲಿ 5,000 ಎಕರೆಗೂ ಹೆಚ್ಚು ಅರಣ್ಯ ಪ್ರದೇಶವನ್ನು ಒತ್ತುವರಿ ಎಂಬುದಾಗಿ ಅರಣ್ಯ ಇಲಾಖೆ ಗುರುತಿಸಿದೆ. ಇದರಲ್ಲಿ ಅತಿ ಹೆಚ್ಚು ಅರಣ್ಯ ಒತ್ತುವರಿ ಹಾಗೂ ತೆರವು ಬಾಕಿ ಚನ್ನಗಿರಿ ತಾಲ್ಲೂಕಿನಲ್ಲಿದೆ. ಭದ್ರಾವತಿ ವಿಭಾಗದಿಂದ ದಾವಣಗೆರೆ ವಿಭಾಗದ ವ್ಯಾಪ್ತಿಗೆ ಚನ್ನಗಿರಿ ಒಳಪಟ್ಟರೆ ಒತ್ತುವರಿ ತೆರವಿನ ಪ್ರಕರಣಗಳ ಇತ್ಯರ್ಥ ಚುರುಕುಪಡೆಯಲಿದೆ.</p>.<div><blockquote>ಚನ್ನಗಿರಿ ತಾಲ್ಲೂಕು ದಾವಣಗೆರೆ ಅರಣ್ಯ ವಿಭಾಗಕ್ಕೆ ಒಳಪಡಬೇಕು ಎಂಬುದು ಬಹುದಿನಗಳ ಬೇಡಿಕೆ. ಜನಪ್ರತಿನಿಧಿಗಳ ಕೋರಿಕೆಯ ಮೇರೆಗೆ ಪ್ರಕ್ರಿಯೆ ಆರಂಭಗೊಂಡಿದೆ.</blockquote><span class="attribution">– ಪಿ.ಎನ್. ಹರ್ಷವರ್ಧನ್, ಉಪ ಅರಣ್ಯ ಸಂರಕ್ಷಣಾಧಿಕಾರಿ ದಾವಣಗೆರೆ ವಿಭಾಗ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>