<p><strong>ಚನ್ನಗಿರಿ:</strong> ‘ಹಣ್ಣುಗಳ ರಾಜ’ ಮಾವಿನ ಇಳುವರಿ ಹಾಗೂ ದರ ಕುಸಿತದಿಂದಾಗಿ ಮಾವು ಬೆಳೆಗಾರರು ಈ ಬಾರಿ ಸಂಕಷ್ಟವನ್ನು ಎದುರಿಸುವಂತಾಗಿದೆ.</p>.<p>ತಾಲ್ಲೂಕಿನಲ್ಲಿ 2,250 ಎಕರೆ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ‘ಉತ್ಕೃಷ್ಟ ದರ್ಜೆ’ ಎಂಬ ಕಾರಣಕ್ಕೆ ಇಲ್ಲಿನ ಹಣ್ಣುಗಳನ್ನು ನೆರೆಯ ರಾಜ್ಯಗಳಿಗೆ ಪ್ರತಿ ವರ್ಷ ರವಾನೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ನೆರೆಯ ರಾಜ್ಯಗಳಲ್ಲಿ ಮಾವಿನಹಣ್ಣನ್ನು ಖರೀದಿಸಲು ವರ್ತಕರು ಹಿಂದೇಟು ಹಾಕಿದ್ದು, ಮಾವಿನಹಣ್ಣು ರವಾನೆಯಾಗುತ್ತಿಲ್ಲ. ಅಂತೆಯೇ ಖರೀದಿದಾರರು ರಸ್ತೆಯ ಬದಿಗಳಲ್ಲಿ ರಾಶಿ ಹಾಕಿಕೊಂಡು ಮಾವಿನ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದಾರೆ.</p>.<p>ಮಂಡಿಗಳಲ್ಲಿನ ವರ್ತಕರಿಂದ ಕೆ.ಜಿಗೆ ₹ 20ರಂತೆ ಖರೀದಿಸುವ ಚಿಲ್ಲರೆ ಮಾರಾಟಗಾರರು ರಸ್ತೆ ಬದಿಗಳಲ್ಲಿ ರಾಶಿ ಹಾಕಿಕೊಂಡು ₹ 100ಕ್ಕೆ 2 ಕೆ.ಜಿ.ಯಂತೆ ಮಾರಾಟ ಮಾಡುತ್ತಿದ್ದಾರೆ.</p>.<p>‘ಫೆಬ್ರುವರಿಯಲ್ಲಿ ನಿರಂತರ ಮಂಜು ಸುರಿದ ಕಾರಣ ಮಾವಿನ ಮರಗಳಲ್ಲಿನ ಹೂವು ಹಾಗೂ ಹೀಚು ಉದುರಿ ಹೋಗಿದ್ದವು. ಜತೆಗೆ ಬೂದಿ, ಅಂಟುರೋಗಗಳಿಂದಲೂ ಮತ್ತು ಬಿಸಿಲಿನ ತಾಪವೂ ಹೆಚ್ಚಿದ್ದರಿಂದ ಈ ಬಾರಿ ಇಳುವರಿ ಕುಸಿತವಾಗಿದೆ’ ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಶ್ರೀಕಾಂತ್ ತಿಳಿಸಿದರು.</p>.<p>‘ಮಧ್ಯಪ್ರಾಚ್ಯ ದೇಶಗಳಿಗೆ ನಮ್ಮ ದೇಶದ ಮಾವಿನಹಣ್ಣುಗಳು ಹೆಚ್ಚಿನ ಪ್ರಮಾಣದಲ್ಲಿ ರಫ್ತು ಆಗುತ್ತಿದ್ದವು. ಅಲ್ಲಿ ಯುದ್ಧದ ಕಾರಣ ಈ ಬಾರಿ ಮಾವಿನಹಣ್ಣುಗಳ ರಫ್ತು ಆಗಿಲ್ಲ. ಇದೇ ಕಾರಣಕ್ಕೆ ನೆರೆಯ ರಾಜ್ಯಗಳ ಖರೀದಿದಾರರು ಮಾವಿನಹಣ್ಣುಗಳನ್ನು ಖರೀದಿಸಲು ಮುಂದಾಗುತ್ತಿಲ್ಲ. ಇದರಿಂದಾಗಿ ದರ ಕುಸಿತವಾಗಿದೆ’ ಎಂದು ಅವರು ತಿಳಿಸಿದರು.</p>.<p>‘ರಸ್ತೆ ಬದಿಯಲ್ಲಿಯೇ ಹಣ್ಣುಗಳನ್ನು ರಾಶಿ ಹಾಕಿಕೊಂಡು ಮಾರಾಟ ಮಾಡುವಂತಹ ಅನಿವಾರ್ಯ ಪರಿಸ್ಥಿತಿ ಉಂಟಾಗಿದೆ. ಈ ಬಾರಿ ಮಾವಿನ ತೋಟಗಳ ಕೇಣಿದಾರರು ಅಧಿಕ ಪ್ರಮಾಣದಲ್ಲಿ ನಷ್ಟ ಅನುಭವಿಸುವಂತಾಗಿದೆ’ ಎನ್ನುತ್ತಾರೆ ಮಾವಿನಹಣ್ಣುಗಳ ವ್ಯಾಪಾರಿ ಮನ್ಸೂರ್.</p>.<p>ತಾಲ್ಲೂಕಿನ ಸೂಳೆಕೆರೆ, ಹೊಸೂರು, ಕೆರೆಬಿಳಚಿ, ನಲ್ಲೂರು, ಸಂತೇಬೆನ್ನೂರು, ಕಾಕನೂರು, ನುಗ್ಗಿಹಳ್ಳಿ, ತಾವರೆಕೆರೆ, ಗರಗ ಕ್ರಾಸ್, ಚಿತ್ರದುರ್ಗ ರಸ್ತೆ ಮುಂತಾದ ಕಡೆಗಳಲ್ಲಿ ಹೆದ್ದಾರಿ ಬದಿಗಳಲ್ಲಿ ಮಾವಿನಹಣ್ಣುಗಳ ಮಾರಾಟ ನಡೆಯುತ್ತಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260521-43-1655123352</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚನ್ನಗಿರಿ:</strong> ‘ಹಣ್ಣುಗಳ ರಾಜ’ ಮಾವಿನ ಇಳುವರಿ ಹಾಗೂ ದರ ಕುಸಿತದಿಂದಾಗಿ ಮಾವು ಬೆಳೆಗಾರರು ಈ ಬಾರಿ ಸಂಕಷ್ಟವನ್ನು ಎದುರಿಸುವಂತಾಗಿದೆ.</p>.<p>ತಾಲ್ಲೂಕಿನಲ್ಲಿ 2,250 ಎಕರೆ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ‘ಉತ್ಕೃಷ್ಟ ದರ್ಜೆ’ ಎಂಬ ಕಾರಣಕ್ಕೆ ಇಲ್ಲಿನ ಹಣ್ಣುಗಳನ್ನು ನೆರೆಯ ರಾಜ್ಯಗಳಿಗೆ ಪ್ರತಿ ವರ್ಷ ರವಾನೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ನೆರೆಯ ರಾಜ್ಯಗಳಲ್ಲಿ ಮಾವಿನಹಣ್ಣನ್ನು ಖರೀದಿಸಲು ವರ್ತಕರು ಹಿಂದೇಟು ಹಾಕಿದ್ದು, ಮಾವಿನಹಣ್ಣು ರವಾನೆಯಾಗುತ್ತಿಲ್ಲ. ಅಂತೆಯೇ ಖರೀದಿದಾರರು ರಸ್ತೆಯ ಬದಿಗಳಲ್ಲಿ ರಾಶಿ ಹಾಕಿಕೊಂಡು ಮಾವಿನ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದಾರೆ.</p>.<p>ಮಂಡಿಗಳಲ್ಲಿನ ವರ್ತಕರಿಂದ ಕೆ.ಜಿಗೆ ₹ 20ರಂತೆ ಖರೀದಿಸುವ ಚಿಲ್ಲರೆ ಮಾರಾಟಗಾರರು ರಸ್ತೆ ಬದಿಗಳಲ್ಲಿ ರಾಶಿ ಹಾಕಿಕೊಂಡು ₹ 100ಕ್ಕೆ 2 ಕೆ.ಜಿ.ಯಂತೆ ಮಾರಾಟ ಮಾಡುತ್ತಿದ್ದಾರೆ.</p>.<p>‘ಫೆಬ್ರುವರಿಯಲ್ಲಿ ನಿರಂತರ ಮಂಜು ಸುರಿದ ಕಾರಣ ಮಾವಿನ ಮರಗಳಲ್ಲಿನ ಹೂವು ಹಾಗೂ ಹೀಚು ಉದುರಿ ಹೋಗಿದ್ದವು. ಜತೆಗೆ ಬೂದಿ, ಅಂಟುರೋಗಗಳಿಂದಲೂ ಮತ್ತು ಬಿಸಿಲಿನ ತಾಪವೂ ಹೆಚ್ಚಿದ್ದರಿಂದ ಈ ಬಾರಿ ಇಳುವರಿ ಕುಸಿತವಾಗಿದೆ’ ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಶ್ರೀಕಾಂತ್ ತಿಳಿಸಿದರು.</p>.<p>‘ಮಧ್ಯಪ್ರಾಚ್ಯ ದೇಶಗಳಿಗೆ ನಮ್ಮ ದೇಶದ ಮಾವಿನಹಣ್ಣುಗಳು ಹೆಚ್ಚಿನ ಪ್ರಮಾಣದಲ್ಲಿ ರಫ್ತು ಆಗುತ್ತಿದ್ದವು. ಅಲ್ಲಿ ಯುದ್ಧದ ಕಾರಣ ಈ ಬಾರಿ ಮಾವಿನಹಣ್ಣುಗಳ ರಫ್ತು ಆಗಿಲ್ಲ. ಇದೇ ಕಾರಣಕ್ಕೆ ನೆರೆಯ ರಾಜ್ಯಗಳ ಖರೀದಿದಾರರು ಮಾವಿನಹಣ್ಣುಗಳನ್ನು ಖರೀದಿಸಲು ಮುಂದಾಗುತ್ತಿಲ್ಲ. ಇದರಿಂದಾಗಿ ದರ ಕುಸಿತವಾಗಿದೆ’ ಎಂದು ಅವರು ತಿಳಿಸಿದರು.</p>.<p>‘ರಸ್ತೆ ಬದಿಯಲ್ಲಿಯೇ ಹಣ್ಣುಗಳನ್ನು ರಾಶಿ ಹಾಕಿಕೊಂಡು ಮಾರಾಟ ಮಾಡುವಂತಹ ಅನಿವಾರ್ಯ ಪರಿಸ್ಥಿತಿ ಉಂಟಾಗಿದೆ. ಈ ಬಾರಿ ಮಾವಿನ ತೋಟಗಳ ಕೇಣಿದಾರರು ಅಧಿಕ ಪ್ರಮಾಣದಲ್ಲಿ ನಷ್ಟ ಅನುಭವಿಸುವಂತಾಗಿದೆ’ ಎನ್ನುತ್ತಾರೆ ಮಾವಿನಹಣ್ಣುಗಳ ವ್ಯಾಪಾರಿ ಮನ್ಸೂರ್.</p>.<p>ತಾಲ್ಲೂಕಿನ ಸೂಳೆಕೆರೆ, ಹೊಸೂರು, ಕೆರೆಬಿಳಚಿ, ನಲ್ಲೂರು, ಸಂತೇಬೆನ್ನೂರು, ಕಾಕನೂರು, ನುಗ್ಗಿಹಳ್ಳಿ, ತಾವರೆಕೆರೆ, ಗರಗ ಕ್ರಾಸ್, ಚಿತ್ರದುರ್ಗ ರಸ್ತೆ ಮುಂತಾದ ಕಡೆಗಳಲ್ಲಿ ಹೆದ್ದಾರಿ ಬದಿಗಳಲ್ಲಿ ಮಾವಿನಹಣ್ಣುಗಳ ಮಾರಾಟ ನಡೆಯುತ್ತಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260521-43-1655123352</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>