ಅರ್ಜಿಯಲ್ಲಿ ಏನಿದೆ?: ‘ಉಡುಪಿಯ ಹಾಜಿ ಅಬ್ದುಲ್ ಅವರು, ₹ 250 ಕೋಟಿ ವೆಚ್ಚದಲ್ಲಿ ಹೆರಿಗೆ ಆಸ್ಪತ್ರೆಯನ್ನು ಹಾಗೂ ₹ 475 ಕೋಟಿ ವೆಚ್ಚದಲ್ಲಿ ಜೋಗ ಜಲಪಾತ ಪ್ರದೇಶ ಅಭಿವೃದ್ಧಿಪಡಿಸುವ ಸಂಬಂಧ ರಾಜ್ಯ ಸರ್ಕಾರ ಮತ್ತು ಉದ್ಯಮಿ ಬಿ.ಆರ್. ಶೆಟ್ಟಿ ನಡುವೆ ಒಪ್ಪಂದವಾಗಿದೆ. ಇದಕ್ಕೆ ಡಾ.ಗಿರೀಶ್ ಚಂದ್ರ ವರ್ಮ ಮಧ್ಯವರ್ತಿಯಾಗಿದ್ದಾರೆ. ಈ ಒಪ್ಪಂದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ಅವರಿಗೆ ದುಬಾರಿ ಮೌಲ್ಯದ ಹ್ಯೂಬ್ಲೊ ವಾಚ್ ಉಡುಗೊರೆ ನೀಡಲಾಗಿದೆ’ ಎಂದು ದೂರಲಾಗಿದೆ.