ಮಾವಿನಕಟ್ಟೆ ಅರಣ್ಯವಲಯಾಧಿಕಾರಿ ಡಿ.ಮಾವಿನಹೊಳೆಯಪ್ಪ, ‘ತಿಂಗಳ ಹಿಂದೆಯಷ್ಟೆ ಚಿಲಾಪುರ ಬಳಿ ಹೆಣ್ಣು ಚಿರತೆಯನ್ನು ಸೆರೆ ಹಿಡಿದು, ಶಿವಮೊಗ್ಗ ಲಯನ್ ಸಫಾರಿಗೆ ಸಾಗಿಸಲಾಗಿತ್ತು. ಹೆಣ್ಣು ಚಿರತೆ ಜತೆಯಲ್ಲಿದ್ದ ಗಂಡು ಚಿರತೆಯು ತಪ್ಪಿಸಿಕೊಂಡು ಅಲ್ಲಲ್ಲಿ ಓಡಾಡುತ್ತಿತ್ತು. ಈ ಚಿರತೆಯು ಕರಡಿ ಕ್ಯಾಂಪ್, ದಿಗ್ಗೇನಹಳ್ಳಿ, ಆದ್ರಹಳ್ಳಿ, ಅರಸನಗಟ್ಟ ತಾಂಡ ಭಾಗದಲ್ಲಿ ಕಾಣಿಸಿಕೊಂಡು ಆಡು, ಕುರಿ, ನಾಯಿಗಳನ್ನು ಹಿಡಿದು ತಿನ್ನುತ್ತಿತ್ತು. ಈ ಬಗ್ಗೆ ದಿಗ್ಗೇನಹಳ್ಳಿ ಗ್ರಾಮಸ್ಥರ ಮನವಿ ಮೇರೆಗೆ ವಾರದ ಹಿಂದೆ ದಿಗ್ಗೇನಹಳ್ಳಿ ಕಾಂಡಂಚಿನ ಸೈದರ ಕಲ್ಲಹಳ್ಳಿ ರಸ್ತೆಯ ಬಲಭಾಗದಲ್ಲಿ ಬೋನು ಅಳವಾಡಿಸಲಾಗಿತ್ತು’ ಎಂದರು.