<p><strong>ಸಾಸ್ವೆಹಳ್ಳಿ:</strong> ಕೆಲವು ದಿನಗಳಿಂದ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಳಿ ಹಾಗೂ ಶೀತಗಾಳಿಯ ತೀವ್ರತೆ ಹೆಚ್ಚಾಗಿದ್ದು, ಸಾರ್ವಜನಿಕರ ದೈನಂದಿನ ಜೀವನದ ಮೇಲೆ ಪರಿಣಾಮ ಬೀರಿದೆ.</p>.<p>ಹೋಬಳಿ ವ್ಯಾಪ್ತಿಯ ಕುಳಗಟ್ಟೆ, ರಾಂಪುರ, ಬೆನಕನಹಳ್ಳಿ, ಕಮ್ಮಾರಗಟ್ಟೆ, ಕ್ಯಾಸಿನಕೆರೆ, ಹುಣಸಘಟ್ಟ, ಹೊಟ್ಯಾಪುರ, ಬೀರಗೊಂಡನಹಳ್ಳಿ, ಲಿಂಗಾಪುರ, ಹನಗವಾಡಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಬೆಳಿಗ್ಗೆ ಮತ್ತು ಸಂಜೆಯಾಗುತ್ತಿದ್ದಂತೆಯೇ ತಾಪಮಾನ ಕುಸಿಯುತ್ತಿದೆ. ರಾತ್ರಿ ಹಾಗೂ ಬೆಳಗಿನಜಾವ ವೇಳೆ ತೀವ್ರ ಚಳಿ ಇರುವುದರಿಂದ ಜನ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ.</p>.<p>ಸಾಮಾನ್ಯವಾಗಿ ಡಿಸೆಂಬರ್ನಿಂದ ಜನವರಿ ಮೊದಲ ವಾರದವರೆಗೆ ಚಳಿಯ ತೀವ್ರತೆ ಹೆಚ್ಚಿರುತ್ತದೆ. ಬೆಳಿಗ್ಗೆ 5 ಗಂಟೆಗೆ ವಾಯು ವಿಹಾರಕ್ಕೆ ತೆರಳುತ್ತಿದ್ದವರು ಈಗ ಚಳಿಯ ಕಾರಣದಿಂದ 7 ಗಂಟೆಯ ನಂತರ ಹೊರಬರುತ್ತಿದ್ದಾರೆ. ಇನ್ನೂ ಕೆಲವರು ಬೆಳಿಗ್ಗೆ ಬದಲು ಸಂಜೆ ವೇಳೆ ವಾಕಿಂಗ್ ಹೋಗುತ್ತಿದ್ದಾರೆ. ಚಳಿಯಿಂದ ರಕ್ಷಿಸಿಕೊಳ್ಳಲು ಜನ ಸ್ವೆಟರ್, ಜರ್ಕಿನ್ ಹಾಗೂ ಕಂಬಳಿಗಳ ಮೊರೆ ಹೋಗಿದ್ದಾರೆ ಎನ್ನುತ್ತಾರೆ ಸಾಸ್ವೆಹಳ್ಳಿಯ ಪಾರ್ವತಮ್ಮ.</p>.<p>ಬೆಳಿಗ್ಗೆ ಮತ್ತು ಸಂಜೆ ವೇಳೆ ಹಾಲು ಉತ್ಪಾದಕರು ಹೈನುಗಾರಿಕೆ ಚಟುವಟಿಕೆ ನಡೆಸಲು ಪರದಾಡುತ್ತಿದ್ದಾರೆ. ಮಂಜು ಮುಸುಕಿದ ವಾತಾವರಣ ಇರುವುದರಿಂದ ಕುರಿ, ಮೇಕೆಗಳ ಸಾಕಾಣಿಕೆ ಹಾಗೂ ತೋಟಗಳಿಗೆ ನೀರು ಹರಿಸುವ ರೈತರಿಗೆ ತೊಂದರೆಯಾಗಿದೆ. ಗೃಹಿಣಿಯರು ಮುಂಜಾನೆ ಮನೆ ಮುಂದೆ ಕೆಲಸ ಮಾಡಲು ಚಳಿಯಿಂದಾಗಿ ಕಷ್ಟಪಡುವಂತಾಗಿದೆ. ಚಳಿಯಿಂದಾಗಿ ದೈನಂದಿನ ಚಟುವಟಿಕೆಗಳಿಗೆ ಹಿನ್ನೆಡೆಯಾಗಿದೆ ಎನ್ನುತ್ತಾರೆ ರೈತ ಮಲ್ಲೇಶಾಚಾರ್.</p>.<p>ಮುಂಜಾನೆ ದಟ್ಟವಾಗಿ ಇಬ್ಬನಿ ಆವರಿಸುತ್ತಿರುವುದರಿಂದ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಎದುರು ಬರುವ ವಾಹನಗಳು ಕಾಣಿಸದ ಕಾರಣ ವಾಹನ ಸವಾರರು ಪರದಾಡುವಂತಾಗಿದೆ. ಶಾಲೆ–ಕಾಲೇಜು ವಿದ್ಯಾರ್ಥಿಗಳು ಹಾಗೂ ನೌಕರರ ಹಾಜರಾತಿಯ ಮೇಲೂ ಚಳಿ ಪ್ರಭಾವ ಬೀರಿದೆ ಎಂದು ರಾಂಪುರ ಹಾಲೇಶ್ ತಿಳಿಸಿದ್ದಾರೆ.</p>.<p><strong>ಆರೋಗ್ಯದ ಬಗ್ಗೆ ನಿಗಾ ವಹಿಸಿ</strong> </p><p>‘ವಾತಾವರಣದಲ್ಲಿ ಏರುಪೇರು ಆಗಿರುವುದರಿಂದ ನೆಗಡಿ ಕೆಮ್ಮು ಹಾಗೂ ಜ್ವರದಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಸಾರ್ವಜನಿಕರು ಬಿಸಿ ನೀರು ಮತ್ತು ಬಿಸಿಬಿಸಿ ಆಹಾರ ಸೇವಿಸಬೇಕು ಹಾಗೂ ಸ್ವೆಟರ್ಗಳನ್ನು ಧರಿಸಬೇಕು. ವಿಶೇಷವಾಗಿ ಮಕ್ಕಳು ಮತ್ತು ವಯೋವೃದ್ಧರ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು’ ಎಂದು ವೈದ್ಯರಾದ ಮಂಜುನಾಥ್ ಸಲಹೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಾಸ್ವೆಹಳ್ಳಿ:</strong> ಕೆಲವು ದಿನಗಳಿಂದ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಳಿ ಹಾಗೂ ಶೀತಗಾಳಿಯ ತೀವ್ರತೆ ಹೆಚ್ಚಾಗಿದ್ದು, ಸಾರ್ವಜನಿಕರ ದೈನಂದಿನ ಜೀವನದ ಮೇಲೆ ಪರಿಣಾಮ ಬೀರಿದೆ.</p>.<p>ಹೋಬಳಿ ವ್ಯಾಪ್ತಿಯ ಕುಳಗಟ್ಟೆ, ರಾಂಪುರ, ಬೆನಕನಹಳ್ಳಿ, ಕಮ್ಮಾರಗಟ್ಟೆ, ಕ್ಯಾಸಿನಕೆರೆ, ಹುಣಸಘಟ್ಟ, ಹೊಟ್ಯಾಪುರ, ಬೀರಗೊಂಡನಹಳ್ಳಿ, ಲಿಂಗಾಪುರ, ಹನಗವಾಡಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಬೆಳಿಗ್ಗೆ ಮತ್ತು ಸಂಜೆಯಾಗುತ್ತಿದ್ದಂತೆಯೇ ತಾಪಮಾನ ಕುಸಿಯುತ್ತಿದೆ. ರಾತ್ರಿ ಹಾಗೂ ಬೆಳಗಿನಜಾವ ವೇಳೆ ತೀವ್ರ ಚಳಿ ಇರುವುದರಿಂದ ಜನ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ.</p>.<p>ಸಾಮಾನ್ಯವಾಗಿ ಡಿಸೆಂಬರ್ನಿಂದ ಜನವರಿ ಮೊದಲ ವಾರದವರೆಗೆ ಚಳಿಯ ತೀವ್ರತೆ ಹೆಚ್ಚಿರುತ್ತದೆ. ಬೆಳಿಗ್ಗೆ 5 ಗಂಟೆಗೆ ವಾಯು ವಿಹಾರಕ್ಕೆ ತೆರಳುತ್ತಿದ್ದವರು ಈಗ ಚಳಿಯ ಕಾರಣದಿಂದ 7 ಗಂಟೆಯ ನಂತರ ಹೊರಬರುತ್ತಿದ್ದಾರೆ. ಇನ್ನೂ ಕೆಲವರು ಬೆಳಿಗ್ಗೆ ಬದಲು ಸಂಜೆ ವೇಳೆ ವಾಕಿಂಗ್ ಹೋಗುತ್ತಿದ್ದಾರೆ. ಚಳಿಯಿಂದ ರಕ್ಷಿಸಿಕೊಳ್ಳಲು ಜನ ಸ್ವೆಟರ್, ಜರ್ಕಿನ್ ಹಾಗೂ ಕಂಬಳಿಗಳ ಮೊರೆ ಹೋಗಿದ್ದಾರೆ ಎನ್ನುತ್ತಾರೆ ಸಾಸ್ವೆಹಳ್ಳಿಯ ಪಾರ್ವತಮ್ಮ.</p>.<p>ಬೆಳಿಗ್ಗೆ ಮತ್ತು ಸಂಜೆ ವೇಳೆ ಹಾಲು ಉತ್ಪಾದಕರು ಹೈನುಗಾರಿಕೆ ಚಟುವಟಿಕೆ ನಡೆಸಲು ಪರದಾಡುತ್ತಿದ್ದಾರೆ. ಮಂಜು ಮುಸುಕಿದ ವಾತಾವರಣ ಇರುವುದರಿಂದ ಕುರಿ, ಮೇಕೆಗಳ ಸಾಕಾಣಿಕೆ ಹಾಗೂ ತೋಟಗಳಿಗೆ ನೀರು ಹರಿಸುವ ರೈತರಿಗೆ ತೊಂದರೆಯಾಗಿದೆ. ಗೃಹಿಣಿಯರು ಮುಂಜಾನೆ ಮನೆ ಮುಂದೆ ಕೆಲಸ ಮಾಡಲು ಚಳಿಯಿಂದಾಗಿ ಕಷ್ಟಪಡುವಂತಾಗಿದೆ. ಚಳಿಯಿಂದಾಗಿ ದೈನಂದಿನ ಚಟುವಟಿಕೆಗಳಿಗೆ ಹಿನ್ನೆಡೆಯಾಗಿದೆ ಎನ್ನುತ್ತಾರೆ ರೈತ ಮಲ್ಲೇಶಾಚಾರ್.</p>.<p>ಮುಂಜಾನೆ ದಟ್ಟವಾಗಿ ಇಬ್ಬನಿ ಆವರಿಸುತ್ತಿರುವುದರಿಂದ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಎದುರು ಬರುವ ವಾಹನಗಳು ಕಾಣಿಸದ ಕಾರಣ ವಾಹನ ಸವಾರರು ಪರದಾಡುವಂತಾಗಿದೆ. ಶಾಲೆ–ಕಾಲೇಜು ವಿದ್ಯಾರ್ಥಿಗಳು ಹಾಗೂ ನೌಕರರ ಹಾಜರಾತಿಯ ಮೇಲೂ ಚಳಿ ಪ್ರಭಾವ ಬೀರಿದೆ ಎಂದು ರಾಂಪುರ ಹಾಲೇಶ್ ತಿಳಿಸಿದ್ದಾರೆ.</p>.<p><strong>ಆರೋಗ್ಯದ ಬಗ್ಗೆ ನಿಗಾ ವಹಿಸಿ</strong> </p><p>‘ವಾತಾವರಣದಲ್ಲಿ ಏರುಪೇರು ಆಗಿರುವುದರಿಂದ ನೆಗಡಿ ಕೆಮ್ಮು ಹಾಗೂ ಜ್ವರದಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಸಾರ್ವಜನಿಕರು ಬಿಸಿ ನೀರು ಮತ್ತು ಬಿಸಿಬಿಸಿ ಆಹಾರ ಸೇವಿಸಬೇಕು ಹಾಗೂ ಸ್ವೆಟರ್ಗಳನ್ನು ಧರಿಸಬೇಕು. ವಿಶೇಷವಾಗಿ ಮಕ್ಕಳು ಮತ್ತು ವಯೋವೃದ್ಧರ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು’ ಎಂದು ವೈದ್ಯರಾದ ಮಂಜುನಾಥ್ ಸಲಹೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>