‘ನಾನು ಸೇವೆ ಸಲ್ಲಿಸುತ್ತಿದ್ದ ಪ್ರಸೂತಿ ಕೇಂದ್ರವು ಬಡ ಕೂಲಿ ಕಾರ್ಮಿಕರು ವಾಸ ಮಾಡುವಂತಹ ಪ್ರದೇಶವಾಗಿದ್ದು, ಬಹಳಷ್ಟು ಜನರು ಇಲ್ಲಿಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರ್ಯ ಅವಧಿಗಿಂತ ಮೀರಿ ಹೆಚ್ಚಿನ ಸಮಯ ಸೇವೆಯನ್ನು ಸಲ್ಲಿಸುತ್ತಿದ್ದೆ. ದುರಾದೃಷ್ಟವಶಾತ್ ಯಾರೋ ಒಬ್ಬ ರೋಗಿಯಿಂದ ನನಗೆ ಕೋವಿಡ್-19 ಸೊಂಕು ತಗಲಿದ್ದು, ಇಡೀ ದಾವಣಗೆರೆ ನಗರದಲ್ಲಿ ದೊಡ್ಡ ಮಟ್ಟದಲ್ಲಿ ನನ್ನ ಹೆಸರನ್ನು ಉಲ್ಲೇಖಿಸಿ ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟ ಹೇಳಿಕೆಗಳು ಹರಿದಾಡಿವೆ’ ಎಂದು ಸ್ಟ್ಯಾಫ್ ನರ್ಸ್ ದೂರಿನಲ್ಲಿ ಅಳಲು ತೋಡಿಕೊಂಡಿದ್ದಾರೆ.