<p>ಹರಿಹರ: ‘ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಸೂಪರ್ ಪ್ರಧಾನಿ ಆಗಿದ್ದು, ನರೇಂದ್ರ ಮೋದಿಯವರು ಡಮ್ಮಿ ಪ್ರಧಾನಿಯಾಗಿ ಉಳಿದಿದ್ದಾರೆ’ ಎಂದು ಹರಿಹರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿ ಕಾರ್ಯದರ್ಶಿ ಎಸ್.ವಿಜಯಕುಮಾರ್ ಆರೋಪಿಸಿದರು.</p>.<p>ಹೊರವಲಯದ ಪ್ರೊ.ಬಿ.ಕೃಷ್ಣಪ್ಪ ಭವನದಲ್ಲಿ ಸೋಮವಾರ ಪಕ್ಷದ ಬಿ.ಎಲ್.ಎ– 2ಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.</p>.<p>‘ರಷ್ಯಾದಿಂದ ಕಚ್ಚಾ ತೈಲ ಖರೀದಿಸಬಾರದು ಎಂದು ಟ್ರಂಪ್ ಮಾಡಿದ ಆದೇಶದಂತೆ ಭಾರತ ನಡೆದುಕೊಂಡಿದೆ. ಯುದ್ಧದ ಕಾರಣ ರಷ್ಯಾದಿಂದ 30 ದಿನಗಳವರೆಗೆ ತೈಲ ಖರೀದಿಸಬಹುದೆಂದು ಟ್ರಂಪ್ ಹೇಳಿದ ನಂತರ ತೈಲ ತರಿಸಿಕೊಳ್ಳಲಾಗುತ್ತಿದೆ. ಅಮೆರಿಕ ಅಧ್ಯಕ್ಷರು ಭಾರತಕ್ಕೆ ನೀಡುತ್ತಿರುವ ಆದೇಶಗಳನ್ನು ಗಮನಿಸಿದರೆ ಬ್ರಿಟೀಷರ ದಾಸ್ಯದ ದಿನಗಳು ನೆನಪಿಗೆ ಬರುತ್ತಿವೆ’ ಎಂದು ಹೇಳಿದರು.</p>.<p>‘ಯಾವ ಪ್ರಧಾನಿಯ ಅವಧಿಯಲ್ಲೂ ಭಾರತಕ್ಕೆ ಇಂತದ ದುಃಸ್ಥಿತಿ ಬಂದಿರಲಿಲ್ಲ. ‘ವಿಶ್ವ ಗುರು’ ಎಂದು ಘೋಷಿಸಿಕೊಂಡವರು ದೇಶವನ್ನು ದಾಸ್ಯಕ್ಕೆ ತಳ್ಳಿದ್ದಾರೆ. ಮೋದಿಯವರು ಕೇವಲ ಮಾತಿನಲ್ಲಿ ಅರಮನೆ ಕಟ್ಟುವ ವ್ಯಕ್ತಿ ಎಂಬ ಸತ್ಯನ್ನು ಬಿಜೆಪಿ ಕಾರ್ಯಕರ್ತರು ಈಗಾಗದರೂ ಮನಗಾಣಬೇಕಿದೆ’ ಎಂದು ಹೇಳಿದರು.</p>.<p>‘ಒಂದು ಬೂತ್ ಗೆದ್ದರೆ ಮಾತ್ರ ಪಕ್ಷವು ದೇಶವನ್ನು ಗೆಲ್ಲಲು ಸಾಧ್ಯ. ಬೂತಿನ ಪ್ರತಿ ಮತದಾರನ ಜೊತೆಗೆ ಉತ್ತಮ ಬಾಂಧವ್ಯವನ್ನು ಹೊಂದಿರಬೇಕು. ಬಿಜೆಪಿಯ ಒಡೆದು ಆಳುವ ನೀತಿ, ಉದ್ಯೋಗ ಸೃಷ್ಟಿ ಸೇರಿ ಕೊಟ್ಟ ಭರವಸೆಗಳನ್ನು ಈಡೇರಿಸದ ಕುರಿತು ಜಾಗೃತಿ ಮೂಡಿಸಬೇಕಾಗಿದೆ’ ಎಂದರು.</p>.<p>‘ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳ ಬಗ್ಗೆ ಪ್ರಚಾರ, ಮತದಾರರ ಮ್ಯಾಪಿಂಗ್ ಕಾರ್ಯಕ್ಕೆ ಕೈಜೋಡಿಸಿ. ಸಂಬಧಿಸಿದ ಮೇಲ್ವಿಚಾರಕರ ಕಾರ್ಯವನ್ನು ಪರಿಶೀಲಿಸಿ ಸೂಕ್ತ ಮ್ಯಾಪಿಂಗ್ ಮಾಡಿಸುವುದು ತಮ್ಮ ಜವಾಬ್ದಾರಿಯಾಗಿದೆ’ ಎಂದು ಪ್ರಾಸ್ತಾವಿಕವಾಗಿ ಮಾತನಾಡಿದ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್ ಹೇಳಿದರು.</p>.<p>ಮಾಜಿ ಶಾಸಕ ಎಸ್.ರಾಮಪ್ಪ, ಮುಖಂಡರಾದ ಹಾಲೇಶ್ ಗೌಡ, ಎಲ್.ಬಿ.ಹನುಮಂತಪ್ಪ, ಎಂ.ಬಿ.ಅಬಿದ್ ಅಲಿ, ರುದ್ರಪ್ಪ ಹನಗವಾಡಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹರಿಹರ: ‘ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಸೂಪರ್ ಪ್ರಧಾನಿ ಆಗಿದ್ದು, ನರೇಂದ್ರ ಮೋದಿಯವರು ಡಮ್ಮಿ ಪ್ರಧಾನಿಯಾಗಿ ಉಳಿದಿದ್ದಾರೆ’ ಎಂದು ಹರಿಹರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿ ಕಾರ್ಯದರ್ಶಿ ಎಸ್.ವಿಜಯಕುಮಾರ್ ಆರೋಪಿಸಿದರು.</p>.<p>ಹೊರವಲಯದ ಪ್ರೊ.ಬಿ.ಕೃಷ್ಣಪ್ಪ ಭವನದಲ್ಲಿ ಸೋಮವಾರ ಪಕ್ಷದ ಬಿ.ಎಲ್.ಎ– 2ಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.</p>.<p>‘ರಷ್ಯಾದಿಂದ ಕಚ್ಚಾ ತೈಲ ಖರೀದಿಸಬಾರದು ಎಂದು ಟ್ರಂಪ್ ಮಾಡಿದ ಆದೇಶದಂತೆ ಭಾರತ ನಡೆದುಕೊಂಡಿದೆ. ಯುದ್ಧದ ಕಾರಣ ರಷ್ಯಾದಿಂದ 30 ದಿನಗಳವರೆಗೆ ತೈಲ ಖರೀದಿಸಬಹುದೆಂದು ಟ್ರಂಪ್ ಹೇಳಿದ ನಂತರ ತೈಲ ತರಿಸಿಕೊಳ್ಳಲಾಗುತ್ತಿದೆ. ಅಮೆರಿಕ ಅಧ್ಯಕ್ಷರು ಭಾರತಕ್ಕೆ ನೀಡುತ್ತಿರುವ ಆದೇಶಗಳನ್ನು ಗಮನಿಸಿದರೆ ಬ್ರಿಟೀಷರ ದಾಸ್ಯದ ದಿನಗಳು ನೆನಪಿಗೆ ಬರುತ್ತಿವೆ’ ಎಂದು ಹೇಳಿದರು.</p>.<p>‘ಯಾವ ಪ್ರಧಾನಿಯ ಅವಧಿಯಲ್ಲೂ ಭಾರತಕ್ಕೆ ಇಂತದ ದುಃಸ್ಥಿತಿ ಬಂದಿರಲಿಲ್ಲ. ‘ವಿಶ್ವ ಗುರು’ ಎಂದು ಘೋಷಿಸಿಕೊಂಡವರು ದೇಶವನ್ನು ದಾಸ್ಯಕ್ಕೆ ತಳ್ಳಿದ್ದಾರೆ. ಮೋದಿಯವರು ಕೇವಲ ಮಾತಿನಲ್ಲಿ ಅರಮನೆ ಕಟ್ಟುವ ವ್ಯಕ್ತಿ ಎಂಬ ಸತ್ಯನ್ನು ಬಿಜೆಪಿ ಕಾರ್ಯಕರ್ತರು ಈಗಾಗದರೂ ಮನಗಾಣಬೇಕಿದೆ’ ಎಂದು ಹೇಳಿದರು.</p>.<p>‘ಒಂದು ಬೂತ್ ಗೆದ್ದರೆ ಮಾತ್ರ ಪಕ್ಷವು ದೇಶವನ್ನು ಗೆಲ್ಲಲು ಸಾಧ್ಯ. ಬೂತಿನ ಪ್ರತಿ ಮತದಾರನ ಜೊತೆಗೆ ಉತ್ತಮ ಬಾಂಧವ್ಯವನ್ನು ಹೊಂದಿರಬೇಕು. ಬಿಜೆಪಿಯ ಒಡೆದು ಆಳುವ ನೀತಿ, ಉದ್ಯೋಗ ಸೃಷ್ಟಿ ಸೇರಿ ಕೊಟ್ಟ ಭರವಸೆಗಳನ್ನು ಈಡೇರಿಸದ ಕುರಿತು ಜಾಗೃತಿ ಮೂಡಿಸಬೇಕಾಗಿದೆ’ ಎಂದರು.</p>.<p>‘ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳ ಬಗ್ಗೆ ಪ್ರಚಾರ, ಮತದಾರರ ಮ್ಯಾಪಿಂಗ್ ಕಾರ್ಯಕ್ಕೆ ಕೈಜೋಡಿಸಿ. ಸಂಬಧಿಸಿದ ಮೇಲ್ವಿಚಾರಕರ ಕಾರ್ಯವನ್ನು ಪರಿಶೀಲಿಸಿ ಸೂಕ್ತ ಮ್ಯಾಪಿಂಗ್ ಮಾಡಿಸುವುದು ತಮ್ಮ ಜವಾಬ್ದಾರಿಯಾಗಿದೆ’ ಎಂದು ಪ್ರಾಸ್ತಾವಿಕವಾಗಿ ಮಾತನಾಡಿದ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್ ಹೇಳಿದರು.</p>.<p>ಮಾಜಿ ಶಾಸಕ ಎಸ್.ರಾಮಪ್ಪ, ಮುಖಂಡರಾದ ಹಾಲೇಶ್ ಗೌಡ, ಎಲ್.ಬಿ.ಹನುಮಂತಪ್ಪ, ಎಂ.ಬಿ.ಅಬಿದ್ ಅಲಿ, ರುದ್ರಪ್ಪ ಹನಗವಾಡಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>