ದಾವಣಗೆರೆ: ಬುಧವಾರ ಗಾಳಿ ಸಹಿತ ಜೋರಾಗಿ ಬಂದಿದ್ದ ಮಳೆ, ಗುರುವಾರ ಗಾಳಿಯ ಅಬ್ಬರವಿಲ್ಲದೇ ತಣ್ಣಗೆ ಸುರಿದಿದೆ. ಬುಧವಾರದ ಮಳೆಗೆ ಮೆಕ್ಕೆಜೋಳ, ಬಾಳೆ ಇತರ ಬೆಳೆಗಳಿಗೆ ಹಾನಿಯಾಗಿದೆ.
ತಾಲ್ಲೂಕಿನಲ್ಲಿ ಎರಡು ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ₹ 10 ಸಾವಿರ ನಷ್ಟ ಉಂಟಾಗಿದೆ. ಸುಮಾರು 100 ಎಕರೆ ಮೆಕ್ಕೆಜೋಳ, 9 ಎಕರೆ 26 ಗುಂಟೆ ಬಾಳೆ ನೆಲಕಚ್ಚಿವೆ. ₹ 12 ಲಕ್ಷ ನಷ್ಟ ಎಂದು ಅಂದಾಜಿಸಲಾಗಿದೆ.
ಹೊನ್ನಾಳಿ ತಾಲ್ಲೂಕಿನಲ್ಲಿ ಒಂದು ಮನೆಗೆ ಹಾನಿಯಾಗಿದ್ದು, ₹ 40 ಸಾವಿರ ನಷ್ಟವಾಗಿದೆ. ಚನ್ನಗಿರಿ ತಾಲ್ಲೂಕಿನಲ್ಲಿ ನಾಲ್ಕು ಮನೆಗಳಿಗೆ ಹಾನಿ ಉಂಟಾಗಿದೆ. ₹ 1. 35 ಲಕ್ಷ ನಷ್ಟ ಉಂಟಾಗಿದೆ. ಈ ಎಲ್ಲ ಸಂತ್ರಸ್ತರಿಗೆ ಸರ್ಕಾರದ ಮಾರ್ಗಸೂಚಿಯ ಅನ್ವಯ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಲಾಗುವುದುಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.