ಗ್ರಾಮಸ್ಥರ ಆರೋಪ: ಗ್ರಾಮಾಡಳಿತ ಕಳೆದ ವರ್ಷ ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆ ಹೂಳು ತೆಗೆಯುವ ಕಾಮಗಾರಿಗೆ ಜೆಸಿಬಿಗಳನ್ನು ಬಳಸಿಕೊಂಡಿತ್ತು. ಹೀಗಾಗಿ, ಕೆರೆಯ ಅಂಗಳದಲ್ಲಿ ಎಲ್ಲೆಂದರಲ್ಲಿ ಆಳವಾಗಿ ಗುಂಡಿಗಳು ನಿರ್ಮಾಣವಾಗಿವೆ. ಈಗ ನೀರು ತುಂಬಿರುವ ಕೆರೆಯಲ್ಲಿ ಎಲ್ಲಿ ಗುಂಡಿಗಳಿವೆ ಎಂದು ತಿಳಿಯದಾಗಿದೆ. ಹೀಗಾಗಿ, ಅನಾಹುತಗಳು ಸಂಭವಿಸುತ್ತಿವೆ ಎಂದು ಗ್ರಾಮಸ್ಥರು ದೂರಿದರು.