ಉಪ ಮೇಯರ್ ಸೌಮ್ಯಾ ನರೇಂದ್ರ ಕುಮಾರ್ ಮಾತನಾಡಿ, ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರು ಪಡೆದ ಸಾಲ, ಎಲ್ಐಸಿ ಹಾಗೂ ಇನ್ನಿತರೆ ಕಂತುಗಳನ್ನು ಮೂರು ತಿಂಗಳವರೆಗೆ ವಿನಾಯಿ ನೀಡಿದೆ. ಎರಡು ತಿಂಗಳಿನಿಂದ ವ್ಯಾಪಾರಿಗಳು ಸಂಕಷ್ಟದಲ್ಲಿದ್ದು, ಟ್ರೇಡ್ ಲೈಸೆನ್ಸ್ ಮಾಡಿಸಿಕೊಳ್ಳಲು ಪಾಲಿಕೆಯಲ್ಲಿ 90 ದಿನಗಳ ಅವಕಾಶ ಕೊಟ್ಟಿದೆ. ಇದನ್ನೂ ಪ್ರತಿಪಕ್ಷಗಳು ವಿರೋಧಿಸುತ್ತಿವೆಜನರ ಪರವಾಗಿದ್ದರೆ ಇಂತಹ ಹೇಳಿಕೆಗಳನ್ನು ನೀಡುತ್ತಿರಲಿಲ್ಲ’ ಎಂದರು.