<p><strong>ದಾವಣಗೆರೆ:</strong> ಶಿಕ್ಷಣ ಸಚಿವೆಯಾಗಿದ್ದ ನಾಗಮ್ಮ ಕೇಶವಮೂರ್ತಿ 1983ರಲ್ಲಿ ಮಾಯಕೊಂಡ ತೊರೆದು ದಾವಣಗೆರೆ ಕ್ಷೇತ್ರದಲ್ಲಿ ಸ್ಪರ್ಧಿಸಿದಾಗ ಮುಸ್ಲಿಮರ ಅಸಮಾಧಾನ ಸ್ಫೋಟಗೊಂಡಿತು. ಎಚ್.ಮೊಹಮ್ಮದ್ ಇಕ್ಬಾಲ್ ಸಾಬ್ ಕಾಂಗ್ರೆಸ್ ತೊರೆದು ಪಕ್ಷೇತರರಾಗಿ ಕಣಕ್ಕಿಳಿದರು. ‘ಕೈ’ ಪಾಳೆಯದ ಬಂಡಾಯದಲ್ಲಿ ‘ಸಿಪಿಐ’ನ ಪಂಪಾಪತಿ ವಿಜೇತರಾದರು. ನಾಗಮ್ಮ 3ನೇ ಸ್ಥಾನಕ್ಕೆ ಕುಸಿದರು.</p>.<p>ದಾವಣಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಅನುಭವಿಸಿದ ಈ ಸೋಲು ಕಾಂಗ್ರೆಸ್ ನಾಯಕರನ್ನು ದುಃಸ್ವಪ್ನವಾಗಿ ಕಾಡಿದೆ. ಮುಸ್ಲಿಂ ಸಮುದಾಯದ ಬಂಡಾಯದ ತೀವ್ರತೆ ಕಾಂಗ್ರೆಸ್ಗೆ ಒಂದು ಪಾಠದಂತೆ ಇತಿಹಾಸದ ಪುಟ ಸೇರಿದೆ. ಉಪಚುನಾವಣೆಯಲ್ಲಿ ‘ಕೈ’ ಪಡೆ ಇದೇ ರೀತಿಯ ಬಂಡಾಯ, ಅಸಮಾಧಾನ ಎದುರಿಸುತ್ತಿದೆ.</p>.<p>ಗುಂಡೂರಾವ್ ನೇತೃತ್ವದ ಸರ್ಕಾರದಲ್ಲಿ ನಾಗಮ್ಮ ಕೇಶವಮೂರ್ತಿ ಸಚಿವೆಯಾಗಿದ್ದರು. ನಗರಾಭಿವೃದ್ಧಿ ಪ್ರಾಧಿಕಾರದ (ಸಿಐಟಿಬಿ) ಅಧ್ಯಕ್ಷ ಸ್ಥಾನಕ್ಕೆ ಮುಸ್ಲಿಂ ಸಮುದಾಯ ಬೇಡಿಕೆ ಇಟ್ಟಿತ್ತು. ಇದು ಕೈತಪ್ಪಿದ್ದರಿಂದ 1983ರ ಚುನಾವಣೆಯಲ್ಲಿ ಅಸಮಾಧಾನ ಸ್ಫೋಟಗೊಂಡಿತು. ಕಣದಲ್ಲಿದ್ದ 9 ಜನ ಅಭ್ಯರ್ಥಿಗಳಲ್ಲಿ ಮೂವರು ಮುಸ್ಲಿಮರಿದ್ದರು. ಇವರಲ್ಲಿ ಮೊಹಮ್ಮದ್ ಇಕ್ಬಾಲ್ ಅವರ ‘ಒಂಟೆ’ ಗುರುತಿಗೆ ಸಮುದಾಯದ ಬೆಂಬಲವೂ ಸಿಕ್ಕಿತ್ತು. ಇವರಿಗೆ ಶೇ 23.67 ಮತಗಳು ಸಿಕ್ಕರೆ ನಾಗಮ್ಮ ಅವರಿಗೆ ಶೇ 19.22 ಮತಗಳು ದಕ್ಕಿದವು.</p>.<p class="Subhead">45 ಮುಸ್ಲಿಮರ ಸ್ಪರ್ಧೆ: 1957ರಿಂದ ಈವರೆಗೆ ಕ್ಷೇತ್ರಕ್ಕೆ ನಡೆದ 15 ಚುನಾವಣೆಗಳಲ್ಲಿ ಮುಸ್ಲಿಂ ಸಮುದಾಯದ 45 ಜನ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ಆದರೆ, ಯಾರೊಬ್ಬರೂ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. ಬೆರಳೆಣಿಕೆಯ ಜನರನ್ನು ಹೊರತುಪಡಿಸಿ ಬಹುತೇಕರು ಠೇವಣಿ ಕಳೆದುಕೊಂಡಿದ್ದಾರೆ.</p>.<p>1957, 1962, 1967, 1972 ಹಾಗೂ 2004ರಲ್ಲಿ ಯಾವೊಬ್ಬ ಅಲ್ಪಸಂಖ್ಯಾತರೂ ಚುನಾವಣಾ ಅಖಾಡದಲ್ಲಿರಲಿಲ್ಲ. 1978ರಲ್ಲಿ ಖಾಜಾ ಮೊಹಿದ್ದೀನ್ ಸಾಬ್ ಪಕ್ಷೇತರರಾಗಿ ಸ್ಪರ್ಧಿಸಿ ಶೇ 9.46 ಮತಗಳನ್ನು ಪಡೆದಿದ್ದರು. ಅಲ್ಲಿಂದ ಕ್ಷೇತ್ರದ ಮುಸ್ಲಿಂ ನಾಯಕರು ವಿಧಾನಸಭಾ ಚುನಾವಣೆಯ ಕಡೆಗೆ ಹೆಚ್ಚು ಒಲವು ತೋರಿದ್ದಾರೆ.</p>.<p>1985ರಲ್ಲಿ ನಾಲ್ವರು ಅಲ್ಪಸಂಖ್ಯಾತರು ಚುನಾವಣಾ ಕಣದಲ್ಲಿದ್ದರು. ಇದರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಮೊಹಮ್ಮದ್ ಕೊಯಾ ಶೇ 4.97ರಷ್ಟು ಮತ ಪಡೆದಿದ್ದರು. ಇದು ಬಿಜೆಪಿ ಪಡೆದ ಒಟ್ಟು ಮತಗಳ ಎರಡರಷ್ಟಾಗಿತ್ತು. 1989ರಲ್ಲಿ 6 ಜನ ಮುಸ್ಲಿಂ ನಾಯಕರು ಚುನಾವಣಾ ಅಖಾಡಕ್ಕೆ ಇಳಿದಿದ್ದರು. ಇದರಲ್ಲಿ ಜೆಎನ್ಪಿ ಪಕ್ಷದ ಮರ್ದಾನ್ ಸಾಬ್ ಎಂಬುವರು ಶೇ 11 ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಉಳಿದವರು ತಲಾ ಶೇ 0.50 ಮತ ಪಡೆಯಲೂ ಸಾಧ್ಯವಾಗಿರಲಿಲ್ಲ.</p>.<p>1994ರಲ್ಲಿ ಕಣದಲ್ಲಿದ್ದ ಇಬ್ಬರು ಅಲ್ಪಸಂಖ್ಯಾತರ ಪೈಕಿ ಅತಾವುಲ್ಲಾ ಅವರು ಎಸ್.ಬಂಗಾರಪ್ಪ ಸ್ಥಾಪಿಸಿದ್ದ ಕರ್ನಾಟಕ ಕಾಂಗ್ರೆಸ್ ಪಕ್ಷದಿಂದ (ಕೆಸಿಪಿ) ಸ್ಪರ್ಧಿಸಿ ಶೇ 12.75 ಮತ ಪಡೆದಿದ್ದರು. 1999ರಲ್ಲಿ ಇಬ್ಬರು, 2008ರಲ್ಲಿ ಮೂವರು ಅದೃಷ್ಟ ಪರೀಕ್ಷೆಗೆ ಇಳಿದಿದ್ದರು.</p>.<p class="Subhead">ಹುರಿಯಾಳುಗಳ ಸಂಖ್ಯೆ ಹೆಚ್ಚಳ: 2013ರಲ್ಲಿ ಕಣದಲ್ಲಿದ್ದ 15 ಅಭ್ಯರ್ಥಿಗಳಲ್ಲಿ 9 ಜನ ಮುಸ್ಲಿಮರು. ಜೆಡಿಎಸ್ ಅಭ್ಯರ್ಥಿಯಾಗಿದ್ದ ಕೆ.ಸೈಯದ್ ಸೈಫುಲ್ಲಾ ಶೇ 21 ಮತಗಳನ್ನು ಪಡೆದಿದ್ದರು. 2018ರಲ್ಲಿ ಕಣದಲ್ಲಿ ಉಳಿದ 11 ಅಭ್ಯರ್ಥಿಗಳಲ್ಲಿ 7 ಜನ ಉಮೇದುವಾರರು ಮುಸ್ಲಿಮರು. ಜೆಡಿಎಸ್ ಹುರಿಯಾಳಾಗಿದ್ದ ಕೆ.ಅಮಾನುಲ್ಲಾ ಖಾನ್ ಶೇ 4.42 ಮತ ಪಡೆದರು. ಉಳಿದ ಮುಸ್ಲಿಂ ಅಭ್ಯರ್ಥಿಗಳು ನೋಟಾಗಿಂತಲೂ ಕಡಿಮೆ ಮತ ಪಡೆದಿದ್ದಾರೆ.</p>.<p>2023ರಲ್ಲಿ ಕಣದಲ್ಲಿದ್ದ 16 ಅಭ್ಯರ್ಥಿಗಳ ಪೈಕಿ 8 ಜನ ಮುಸ್ಲಿಮರಿದ್ದರು. ವಿಜೇತ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಪರಾಜಿತ ಬಿಜೆಪಿ ಅಭ್ಯರ್ಥಿ ಹೊರತುಪಡಿಸಿ ಯಾರೊಬ್ಬರೂ ಶೇ 1ರಷ್ಟು ಮತ ಪಡೆದಿಲ್ಲ.</p>.<p><strong>ಮೊದಲ ಬಾರಿಗೆ ಅಧಿಕ ನಾಮಪತ್ರ</strong></p><p>ದಕ್ಷಿಣ ವಿಧಾನಸಭಾ ಕ್ಷೇತ್ರದ ಇತಿಹಾಸದಲ್ಲಿ ಮೊದಲ ಬಾರಿಗೆ 45 ನಾಮಪತ್ರಗಳು ಸಲ್ಲಿಕೆಯಾಗಿವೆ. ಕ್ಷೇತ್ರ ಪುನರ್ ವಿಂಗಡಣೆಯ ಬಳಿಕ ನಡೆದ ನಾಲ್ಕು ಸಾರ್ವತ್ರಿಕ ಚುನಾವಣೆಯಲ್ಲಿ ಇಷ್ಟು ಪ್ರಮಾಣದಲ್ಲಿ ಉಮೇದುವಾರಿಕೆಗಳು ಎಂದೂ ಸಲ್ಲಿಕೆಯಾಗಿರಲಿಲ್ಲ.</p><p>2008ರಲ್ಲಿ 17 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದರು. 2013ರಲ್ಲಿ 26, 2018ರಲ್ಲಿ 12 ಹಾಗೂ 2023ರಲ್ಲಿ 23 ಹುರಿಯಾಳುಗಳು ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದ್ದರು. ಉಪಚುನಾವಣೆಯ ಕಾರಣಕ್ಕೆ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.</p>.<p><strong>ಕಾಂಗ್ರೆಸ್ಗೆ ಬಂಡಾಯದ ಬಿಸಿ</strong></p><p>ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ಗೆ ಬಂಡಾಯದ ಬಿಸಿ ಎದುರಾಗಿದೆ. ‘ಬಿ’ ಫಾರಂ ಕೈತಪ್ಪಿದ್ದರಿಂದ ಕಾಂಗ್ರೆಸ್ ಮುಖಂಡ ಸಾದಿಕ್ ಪೈಲ್ವಾನ್ ಪಕ್ಷೇತರರಾಗಿ ಕಣದಲ್ಲಿದ್ದಾರೆ.</p><p>ಇದೇ ಮೊದಲ ಬಾರಿಗೆ ಮುಸ್ಲಿಂ ಸಮುದಾಯದ 22 ಜನ ನಾಮಪತ್ರ ಸಲ್ಲಿಸಿದ್ದರು. ಇವರಲ್ಲಿ ಒಬ್ಬರ ನಾಮಪತ್ರ ತಿರಸ್ಕೃತಗೊಂಡಿದೆ. ನಾಮಪತ್ರ ಹಿಂಪಡೆಯಲು ಮಾರ್ಚ್ 26 ಕೊನೆಯ ದಿನವಾಗಿದ್ದು, 21 ಜನರಲ್ಲಿ ಎಷ್ಟು ಜನ ಕಣದಲ್ಲಿ ಉಳಿಯಲಿದ್ದಾರೆ ಎಂಬ ಕುತೂಹಲ ಮೂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ:</strong> ಶಿಕ್ಷಣ ಸಚಿವೆಯಾಗಿದ್ದ ನಾಗಮ್ಮ ಕೇಶವಮೂರ್ತಿ 1983ರಲ್ಲಿ ಮಾಯಕೊಂಡ ತೊರೆದು ದಾವಣಗೆರೆ ಕ್ಷೇತ್ರದಲ್ಲಿ ಸ್ಪರ್ಧಿಸಿದಾಗ ಮುಸ್ಲಿಮರ ಅಸಮಾಧಾನ ಸ್ಫೋಟಗೊಂಡಿತು. ಎಚ್.ಮೊಹಮ್ಮದ್ ಇಕ್ಬಾಲ್ ಸಾಬ್ ಕಾಂಗ್ರೆಸ್ ತೊರೆದು ಪಕ್ಷೇತರರಾಗಿ ಕಣಕ್ಕಿಳಿದರು. ‘ಕೈ’ ಪಾಳೆಯದ ಬಂಡಾಯದಲ್ಲಿ ‘ಸಿಪಿಐ’ನ ಪಂಪಾಪತಿ ವಿಜೇತರಾದರು. ನಾಗಮ್ಮ 3ನೇ ಸ್ಥಾನಕ್ಕೆ ಕುಸಿದರು.</p>.<p>ದಾವಣಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಅನುಭವಿಸಿದ ಈ ಸೋಲು ಕಾಂಗ್ರೆಸ್ ನಾಯಕರನ್ನು ದುಃಸ್ವಪ್ನವಾಗಿ ಕಾಡಿದೆ. ಮುಸ್ಲಿಂ ಸಮುದಾಯದ ಬಂಡಾಯದ ತೀವ್ರತೆ ಕಾಂಗ್ರೆಸ್ಗೆ ಒಂದು ಪಾಠದಂತೆ ಇತಿಹಾಸದ ಪುಟ ಸೇರಿದೆ. ಉಪಚುನಾವಣೆಯಲ್ಲಿ ‘ಕೈ’ ಪಡೆ ಇದೇ ರೀತಿಯ ಬಂಡಾಯ, ಅಸಮಾಧಾನ ಎದುರಿಸುತ್ತಿದೆ.</p>.<p>ಗುಂಡೂರಾವ್ ನೇತೃತ್ವದ ಸರ್ಕಾರದಲ್ಲಿ ನಾಗಮ್ಮ ಕೇಶವಮೂರ್ತಿ ಸಚಿವೆಯಾಗಿದ್ದರು. ನಗರಾಭಿವೃದ್ಧಿ ಪ್ರಾಧಿಕಾರದ (ಸಿಐಟಿಬಿ) ಅಧ್ಯಕ್ಷ ಸ್ಥಾನಕ್ಕೆ ಮುಸ್ಲಿಂ ಸಮುದಾಯ ಬೇಡಿಕೆ ಇಟ್ಟಿತ್ತು. ಇದು ಕೈತಪ್ಪಿದ್ದರಿಂದ 1983ರ ಚುನಾವಣೆಯಲ್ಲಿ ಅಸಮಾಧಾನ ಸ್ಫೋಟಗೊಂಡಿತು. ಕಣದಲ್ಲಿದ್ದ 9 ಜನ ಅಭ್ಯರ್ಥಿಗಳಲ್ಲಿ ಮೂವರು ಮುಸ್ಲಿಮರಿದ್ದರು. ಇವರಲ್ಲಿ ಮೊಹಮ್ಮದ್ ಇಕ್ಬಾಲ್ ಅವರ ‘ಒಂಟೆ’ ಗುರುತಿಗೆ ಸಮುದಾಯದ ಬೆಂಬಲವೂ ಸಿಕ್ಕಿತ್ತು. ಇವರಿಗೆ ಶೇ 23.67 ಮತಗಳು ಸಿಕ್ಕರೆ ನಾಗಮ್ಮ ಅವರಿಗೆ ಶೇ 19.22 ಮತಗಳು ದಕ್ಕಿದವು.</p>.<p class="Subhead">45 ಮುಸ್ಲಿಮರ ಸ್ಪರ್ಧೆ: 1957ರಿಂದ ಈವರೆಗೆ ಕ್ಷೇತ್ರಕ್ಕೆ ನಡೆದ 15 ಚುನಾವಣೆಗಳಲ್ಲಿ ಮುಸ್ಲಿಂ ಸಮುದಾಯದ 45 ಜನ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ಆದರೆ, ಯಾರೊಬ್ಬರೂ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. ಬೆರಳೆಣಿಕೆಯ ಜನರನ್ನು ಹೊರತುಪಡಿಸಿ ಬಹುತೇಕರು ಠೇವಣಿ ಕಳೆದುಕೊಂಡಿದ್ದಾರೆ.</p>.<p>1957, 1962, 1967, 1972 ಹಾಗೂ 2004ರಲ್ಲಿ ಯಾವೊಬ್ಬ ಅಲ್ಪಸಂಖ್ಯಾತರೂ ಚುನಾವಣಾ ಅಖಾಡದಲ್ಲಿರಲಿಲ್ಲ. 1978ರಲ್ಲಿ ಖಾಜಾ ಮೊಹಿದ್ದೀನ್ ಸಾಬ್ ಪಕ್ಷೇತರರಾಗಿ ಸ್ಪರ್ಧಿಸಿ ಶೇ 9.46 ಮತಗಳನ್ನು ಪಡೆದಿದ್ದರು. ಅಲ್ಲಿಂದ ಕ್ಷೇತ್ರದ ಮುಸ್ಲಿಂ ನಾಯಕರು ವಿಧಾನಸಭಾ ಚುನಾವಣೆಯ ಕಡೆಗೆ ಹೆಚ್ಚು ಒಲವು ತೋರಿದ್ದಾರೆ.</p>.<p>1985ರಲ್ಲಿ ನಾಲ್ವರು ಅಲ್ಪಸಂಖ್ಯಾತರು ಚುನಾವಣಾ ಕಣದಲ್ಲಿದ್ದರು. ಇದರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಮೊಹಮ್ಮದ್ ಕೊಯಾ ಶೇ 4.97ರಷ್ಟು ಮತ ಪಡೆದಿದ್ದರು. ಇದು ಬಿಜೆಪಿ ಪಡೆದ ಒಟ್ಟು ಮತಗಳ ಎರಡರಷ್ಟಾಗಿತ್ತು. 1989ರಲ್ಲಿ 6 ಜನ ಮುಸ್ಲಿಂ ನಾಯಕರು ಚುನಾವಣಾ ಅಖಾಡಕ್ಕೆ ಇಳಿದಿದ್ದರು. ಇದರಲ್ಲಿ ಜೆಎನ್ಪಿ ಪಕ್ಷದ ಮರ್ದಾನ್ ಸಾಬ್ ಎಂಬುವರು ಶೇ 11 ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಉಳಿದವರು ತಲಾ ಶೇ 0.50 ಮತ ಪಡೆಯಲೂ ಸಾಧ್ಯವಾಗಿರಲಿಲ್ಲ.</p>.<p>1994ರಲ್ಲಿ ಕಣದಲ್ಲಿದ್ದ ಇಬ್ಬರು ಅಲ್ಪಸಂಖ್ಯಾತರ ಪೈಕಿ ಅತಾವುಲ್ಲಾ ಅವರು ಎಸ್.ಬಂಗಾರಪ್ಪ ಸ್ಥಾಪಿಸಿದ್ದ ಕರ್ನಾಟಕ ಕಾಂಗ್ರೆಸ್ ಪಕ್ಷದಿಂದ (ಕೆಸಿಪಿ) ಸ್ಪರ್ಧಿಸಿ ಶೇ 12.75 ಮತ ಪಡೆದಿದ್ದರು. 1999ರಲ್ಲಿ ಇಬ್ಬರು, 2008ರಲ್ಲಿ ಮೂವರು ಅದೃಷ್ಟ ಪರೀಕ್ಷೆಗೆ ಇಳಿದಿದ್ದರು.</p>.<p class="Subhead">ಹುರಿಯಾಳುಗಳ ಸಂಖ್ಯೆ ಹೆಚ್ಚಳ: 2013ರಲ್ಲಿ ಕಣದಲ್ಲಿದ್ದ 15 ಅಭ್ಯರ್ಥಿಗಳಲ್ಲಿ 9 ಜನ ಮುಸ್ಲಿಮರು. ಜೆಡಿಎಸ್ ಅಭ್ಯರ್ಥಿಯಾಗಿದ್ದ ಕೆ.ಸೈಯದ್ ಸೈಫುಲ್ಲಾ ಶೇ 21 ಮತಗಳನ್ನು ಪಡೆದಿದ್ದರು. 2018ರಲ್ಲಿ ಕಣದಲ್ಲಿ ಉಳಿದ 11 ಅಭ್ಯರ್ಥಿಗಳಲ್ಲಿ 7 ಜನ ಉಮೇದುವಾರರು ಮುಸ್ಲಿಮರು. ಜೆಡಿಎಸ್ ಹುರಿಯಾಳಾಗಿದ್ದ ಕೆ.ಅಮಾನುಲ್ಲಾ ಖಾನ್ ಶೇ 4.42 ಮತ ಪಡೆದರು. ಉಳಿದ ಮುಸ್ಲಿಂ ಅಭ್ಯರ್ಥಿಗಳು ನೋಟಾಗಿಂತಲೂ ಕಡಿಮೆ ಮತ ಪಡೆದಿದ್ದಾರೆ.</p>.<p>2023ರಲ್ಲಿ ಕಣದಲ್ಲಿದ್ದ 16 ಅಭ್ಯರ್ಥಿಗಳ ಪೈಕಿ 8 ಜನ ಮುಸ್ಲಿಮರಿದ್ದರು. ವಿಜೇತ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಪರಾಜಿತ ಬಿಜೆಪಿ ಅಭ್ಯರ್ಥಿ ಹೊರತುಪಡಿಸಿ ಯಾರೊಬ್ಬರೂ ಶೇ 1ರಷ್ಟು ಮತ ಪಡೆದಿಲ್ಲ.</p>.<p><strong>ಮೊದಲ ಬಾರಿಗೆ ಅಧಿಕ ನಾಮಪತ್ರ</strong></p><p>ದಕ್ಷಿಣ ವಿಧಾನಸಭಾ ಕ್ಷೇತ್ರದ ಇತಿಹಾಸದಲ್ಲಿ ಮೊದಲ ಬಾರಿಗೆ 45 ನಾಮಪತ್ರಗಳು ಸಲ್ಲಿಕೆಯಾಗಿವೆ. ಕ್ಷೇತ್ರ ಪುನರ್ ವಿಂಗಡಣೆಯ ಬಳಿಕ ನಡೆದ ನಾಲ್ಕು ಸಾರ್ವತ್ರಿಕ ಚುನಾವಣೆಯಲ್ಲಿ ಇಷ್ಟು ಪ್ರಮಾಣದಲ್ಲಿ ಉಮೇದುವಾರಿಕೆಗಳು ಎಂದೂ ಸಲ್ಲಿಕೆಯಾಗಿರಲಿಲ್ಲ.</p><p>2008ರಲ್ಲಿ 17 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದರು. 2013ರಲ್ಲಿ 26, 2018ರಲ್ಲಿ 12 ಹಾಗೂ 2023ರಲ್ಲಿ 23 ಹುರಿಯಾಳುಗಳು ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದ್ದರು. ಉಪಚುನಾವಣೆಯ ಕಾರಣಕ್ಕೆ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.</p>.<p><strong>ಕಾಂಗ್ರೆಸ್ಗೆ ಬಂಡಾಯದ ಬಿಸಿ</strong></p><p>ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ಗೆ ಬಂಡಾಯದ ಬಿಸಿ ಎದುರಾಗಿದೆ. ‘ಬಿ’ ಫಾರಂ ಕೈತಪ್ಪಿದ್ದರಿಂದ ಕಾಂಗ್ರೆಸ್ ಮುಖಂಡ ಸಾದಿಕ್ ಪೈಲ್ವಾನ್ ಪಕ್ಷೇತರರಾಗಿ ಕಣದಲ್ಲಿದ್ದಾರೆ.</p><p>ಇದೇ ಮೊದಲ ಬಾರಿಗೆ ಮುಸ್ಲಿಂ ಸಮುದಾಯದ 22 ಜನ ನಾಮಪತ್ರ ಸಲ್ಲಿಸಿದ್ದರು. ಇವರಲ್ಲಿ ಒಬ್ಬರ ನಾಮಪತ್ರ ತಿರಸ್ಕೃತಗೊಂಡಿದೆ. ನಾಮಪತ್ರ ಹಿಂಪಡೆಯಲು ಮಾರ್ಚ್ 26 ಕೊನೆಯ ದಿನವಾಗಿದ್ದು, 21 ಜನರಲ್ಲಿ ಎಷ್ಟು ಜನ ಕಣದಲ್ಲಿ ಉಳಿಯಲಿದ್ದಾರೆ ಎಂಬ ಕುತೂಹಲ ಮೂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>