<p>ಚನ್ನಗಿರಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ಹಲವು ಭಾಗಗಳಲ್ಲಿ ಶನಿವಾರ ರಾತ್ರಿ ಬಿರುಸಿನ ಮಳೆಯಾಗಿದ್ದು, ಅಪಾರ ಹಾನಿ ಉಂಟು ಮಾಡಿದೆ. ತಾಲ್ಲೂಕಿನಲ್ಲಿ ಒಟ್ಟು 510 ಎಕರೆಯಲ್ಲಿ ಬೆಳೆದಿದ್ದ ಭತ್ತದ ಬೆಳೆ ನಾಶವಾಗಿದೆ.</p>.<p>ತ್ಯಾವಣಿಗೆಯಲ್ಲಿ 300 ಎಕರೆ, ನಲ್ಕುದುರೆ 60, ಮೀಯಾಪುರ 50, ದೊಡ್ಡಘಟ್ಟ 50, ಅರೇಹಳ್ಳಿ 25 ಹಾಗೂ ಕತ್ತಲಗೆರೆಯಲ್ಲಿ 25 ಎಕರೆಯಲ್ಲಿ ಭತ್ತ ನೆಲಕಚ್ಚಿವೆ. ವೈಲಿಪುರ ಹಾಗೂ ಶೃಂಗಾರ್ಬಾಗ್ ತಾಂಡಾ ಸೇರಿ 500ಕ್ಕೂ ಹೆಚ್ಚು ಅಡಿಕೆ ಮರಗಳು ಬಿದ್ದಿವೆ. ಅಂದಾಜು ₹1.25 ಕೋಟಿಯಷ್ಟು ನಷ್ಟ ಉಂಟಾಗಿದೆ ಎಂದು ತಹಶೀಲ್ದಾರ್ ಎನ್.ಜೆ. ನಾಗರಾಜ್ ತಿಳಿಸಿದ್ದಾರೆ.</p>.<p>ಶನಿವಾರ ರಾತ್ರಿ ಬೀಸಿದ ಗಾಳಿ ಮಳೆಗೆ ಬಸವಾಪಟ್ಟಣ ಹೋಬಳಿಯ ಶೃಂಗಾರ್ಬಾಗ್ ತಾಂಡಾದಲ್ಲಿ 4, ನಿಲೋಗಲ್ 2, ತ್ಯಾವಣಿಗೆ 3, ಬಸವೇಶ್ವರ ಕ್ಯಾಂಪ್ನಲ್ಲಿ ಒಂದು ಮನೆ ಸೇರಿ ಒಟ್ಟು 10 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಅಂದಾಜು ₹3.50 ಲಕ್ಷ ನಷ್ಟವುಂಟಾಗಿದೆ.</p>.<p>ಶನಿವಾರ ಸಂಜೆ ಚನ್ನಗಿರಿಯಲ್ಲಿ 24 ಮಿ.ಮೀ., ಕತ್ತಲಗೆರೆ 4.4, ಬಸವಾಪಟ್ಟಣ 7.6, ಜೋಳದಹಾಳ್ 26 ಹಾಗೂ ಉಬ್ರಾಣಿ ಗ್ರಾಮದಲ್ಲಿ 19.4 ಮಿ.ಮೀ. ಮಳೆಯಾಗಿದೆ. ಭಾನುವಾರ ಸಂಜೆಯೂ ಕೆಲ ಕಡೆಗಳಲ್ಲಿ ಗುಡುಗು, ಸಿಡಿಲಿನಿಂದ ಕೂಡಿದ ಜಡಿ ಮಳೆಯಾಗಿದೆ.</p>.<p>ಹಾನಿ ಸ್ಥಳಗಳಿಗೆ ತಹಶೀಲ್ದಾರ್ ಎನ್.ಜೆ. ನಾಗರಾಜ್ ಹಾಗೂ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.</p>.<p>ಮಳೆ ಹಾನಿ ಪ್ರದೇಶಕ್ಕೆ ಶಾಸಕರ ಭೇಟಿ (ತ್ಯಾವಣಿಗೆ ವರದಿ): ಆಲಿಕಲ್ಲು ಸಹಿತ ಮಳೆಗೆ 300ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಕಟಾವಿಗೆ ಬಂದಿದ್ದ ಭತ್ತದ ಬೆಳೆ ಸಂಪೂರ್ಣ ನೆಲಕಚ್ಚಿದ್ದು, ಶಾಸಕ ಬಸವಂತಪ್ಪ ಅವರು ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.</p>.<p>‘ರೈತರು ಧೃತಿಗೆಡಬಾರದು. ಪ್ರಾಕೃತಿಕ ವಿಕೋಪದಿಂದ ಉಂಟಾಗಿರುವ ನಷ್ಟವನ್ನು ತುಂಬಿಕೊಡಲು ಸರ್ಕಾರ ಬದ್ಧವಾಗಿದೆ. ಕಂದಾಯ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ತಕ್ಷಣವೇ ಜಂಟಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಕ್ರಮ ಕೈಗೊಳ್ಳಬೇಕು’ ಎಂದು ಸ್ಥಳದಲ್ಲಿದ್ದ ತಹಶೀಲ್ದಾರ್ ನಾಗರಾಜ್ ಅವರಿಗೆ ಸೂಚನೆ ನೀಡಿದರು.</p>.<p>ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಅರುಣ್ ಕುಮಾರ್, ಕಂದಾಯ ನಿರೀಕ್ಷಕ ಬಸಣ್ಣ, ಗ್ರಾಮ ಲೆಕ್ಕಾಧಿಕಾರಿ ಬಸವರಾಜ್, ಕೃಷಿ ಕೇಂದ್ರದ ರಂಗಸ್ವಾಮಿ, ಮುಖಂಡರಾದ ಬಿ.ಎಚ್. ಹಾಲಪ್ಪ, ಅಣ್ಣಪ್ಪ, ಅಂಜಿನಪ್ಪ, ಪರಶುರಾಮ್, ಸಂತೋಷ್ ಹಾಗೂ ಶ್ರೀನಿವಾಸ್ ಸೇರಿದಂತೆ ರೈತರು ಇದ್ದರು.</p>.<p>(ಬಸವಾಪಟ್ಟಣ ವರದಿ): ಮರಗಳು ಬಿದ್ದು, ಮನೆ ಕುಸಿದು ಹಾನಿಯಾಗಿದ್ದ ಇಲ್ಲಿನ ಶೃಂಗಾರ್ಬಾಗ್ ತಾಂಡಾಕ್ಕೆ ಶಾಸಕ ಕೆ.ಎಸ್.ಬಸವಂತಪ್ಪ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.</p>.<p>ಅಪಾರ ಪ್ರಮಾಣದ ಅಡಿಕೆ ಮರಗಳು ಬಿದ್ದು, ರೈತರಿಗೆ ನಷ್ಟವಾಗಿದೆ. ನಷ್ಟದ ಅಂದಾಜು ಪಟ್ಟಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ತೋಟಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಬಸವಂತಪ್ಪ ತಿಳಿಸಿದರು.</p>.<p>ಹಾಳಾದ ಮನೆಗಳಿಗೆ ಸೂಕ್ತ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು.</p>.<p>(ಸಾಸ್ವೆಹಳ್ಳಿ ವರದಿ): ಗಾಳಿ ಹಾಗೂ ಮಳೆಯಿಂದ ಕ್ಯಾಸಿನಕೆರೆ, ಜರಿಕಟ್ಟೆ, ಕುಳಗಟ್ಟೆ, ಹೊಸಹಳ್ಳಿ, ಹುಣಸಘಟ್ಟ, ಬಾಗೇವಾಡಿ, ಲಿಂಗಾಪುರ ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮಗಳಲ್ಲಿ ಸಾವಿರಕ್ಕೂ ಹೆಚ್ಚು ಅಡಿಕೆ ಮರಗಳು ಬುಡಮೇಲಾಗಿವೆ ಎಂದು ತೋಟಗಾರಿಕೆ ಅಧಿಕಾರಿ ರಮೇಶ್ ಮಾಹಿತಿ ನೀಡಿದ್ದಾರೆ.</p>.<p>ಕಟಾವಿಗೆ ಬಂದಿರುವ ಭತ್ತವನ್ನು ರೈತರು ಆದಷ್ಟು ಬೇಗ ಕಟಾವು ಮಾಡಿಸಿಕೊಳ್ಳುವುದು ಸೂಕ್ತ ಎಂದು ಕೃಷಿ ಅಧಿಕಾರಿ ಶಶಿಧರ್ ಸಲಹೆ ನೀಡಿದರು.</p>.<p>ಅಡಿಕೆ ತೋಟಗಳಿಗೆ ವಿಮೆ ಮಾಡಿಸಿರುವ ರೈತರು ತಕ್ಷಣವೇ ಅರ್ಜಿ ಸಲ್ಲಿಸಿ ಪರಿಹಾರದ ಹಣವನ್ನು ಪಡೆದುಕೊಳ್ಳಲು ಅವಕಾಶವಿದೆ. ನಿಯಮಾವಳಿ ಪ್ರಕಾರ ಶೇ 30ರಷ್ಟು ಹಾನಿಯಾಗಿದ್ದರೆ ಸರ್ಕಾರದಿಂದಲೂ ಸೂಕ್ತ ಪರಿಹಾರವನ್ನು ಒದಗಿಸಲಾಗುವುದು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ರಮೇಶ್ ತಿಳಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260518-43-531372228</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚನ್ನಗಿರಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ಹಲವು ಭಾಗಗಳಲ್ಲಿ ಶನಿವಾರ ರಾತ್ರಿ ಬಿರುಸಿನ ಮಳೆಯಾಗಿದ್ದು, ಅಪಾರ ಹಾನಿ ಉಂಟು ಮಾಡಿದೆ. ತಾಲ್ಲೂಕಿನಲ್ಲಿ ಒಟ್ಟು 510 ಎಕರೆಯಲ್ಲಿ ಬೆಳೆದಿದ್ದ ಭತ್ತದ ಬೆಳೆ ನಾಶವಾಗಿದೆ.</p>.<p>ತ್ಯಾವಣಿಗೆಯಲ್ಲಿ 300 ಎಕರೆ, ನಲ್ಕುದುರೆ 60, ಮೀಯಾಪುರ 50, ದೊಡ್ಡಘಟ್ಟ 50, ಅರೇಹಳ್ಳಿ 25 ಹಾಗೂ ಕತ್ತಲಗೆರೆಯಲ್ಲಿ 25 ಎಕರೆಯಲ್ಲಿ ಭತ್ತ ನೆಲಕಚ್ಚಿವೆ. ವೈಲಿಪುರ ಹಾಗೂ ಶೃಂಗಾರ್ಬಾಗ್ ತಾಂಡಾ ಸೇರಿ 500ಕ್ಕೂ ಹೆಚ್ಚು ಅಡಿಕೆ ಮರಗಳು ಬಿದ್ದಿವೆ. ಅಂದಾಜು ₹1.25 ಕೋಟಿಯಷ್ಟು ನಷ್ಟ ಉಂಟಾಗಿದೆ ಎಂದು ತಹಶೀಲ್ದಾರ್ ಎನ್.ಜೆ. ನಾಗರಾಜ್ ತಿಳಿಸಿದ್ದಾರೆ.</p>.<p>ಶನಿವಾರ ರಾತ್ರಿ ಬೀಸಿದ ಗಾಳಿ ಮಳೆಗೆ ಬಸವಾಪಟ್ಟಣ ಹೋಬಳಿಯ ಶೃಂಗಾರ್ಬಾಗ್ ತಾಂಡಾದಲ್ಲಿ 4, ನಿಲೋಗಲ್ 2, ತ್ಯಾವಣಿಗೆ 3, ಬಸವೇಶ್ವರ ಕ್ಯಾಂಪ್ನಲ್ಲಿ ಒಂದು ಮನೆ ಸೇರಿ ಒಟ್ಟು 10 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಅಂದಾಜು ₹3.50 ಲಕ್ಷ ನಷ್ಟವುಂಟಾಗಿದೆ.</p>.<p>ಶನಿವಾರ ಸಂಜೆ ಚನ್ನಗಿರಿಯಲ್ಲಿ 24 ಮಿ.ಮೀ., ಕತ್ತಲಗೆರೆ 4.4, ಬಸವಾಪಟ್ಟಣ 7.6, ಜೋಳದಹಾಳ್ 26 ಹಾಗೂ ಉಬ್ರಾಣಿ ಗ್ರಾಮದಲ್ಲಿ 19.4 ಮಿ.ಮೀ. ಮಳೆಯಾಗಿದೆ. ಭಾನುವಾರ ಸಂಜೆಯೂ ಕೆಲ ಕಡೆಗಳಲ್ಲಿ ಗುಡುಗು, ಸಿಡಿಲಿನಿಂದ ಕೂಡಿದ ಜಡಿ ಮಳೆಯಾಗಿದೆ.</p>.<p>ಹಾನಿ ಸ್ಥಳಗಳಿಗೆ ತಹಶೀಲ್ದಾರ್ ಎನ್.ಜೆ. ನಾಗರಾಜ್ ಹಾಗೂ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.</p>.<p>ಮಳೆ ಹಾನಿ ಪ್ರದೇಶಕ್ಕೆ ಶಾಸಕರ ಭೇಟಿ (ತ್ಯಾವಣಿಗೆ ವರದಿ): ಆಲಿಕಲ್ಲು ಸಹಿತ ಮಳೆಗೆ 300ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಕಟಾವಿಗೆ ಬಂದಿದ್ದ ಭತ್ತದ ಬೆಳೆ ಸಂಪೂರ್ಣ ನೆಲಕಚ್ಚಿದ್ದು, ಶಾಸಕ ಬಸವಂತಪ್ಪ ಅವರು ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.</p>.<p>‘ರೈತರು ಧೃತಿಗೆಡಬಾರದು. ಪ್ರಾಕೃತಿಕ ವಿಕೋಪದಿಂದ ಉಂಟಾಗಿರುವ ನಷ್ಟವನ್ನು ತುಂಬಿಕೊಡಲು ಸರ್ಕಾರ ಬದ್ಧವಾಗಿದೆ. ಕಂದಾಯ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ತಕ್ಷಣವೇ ಜಂಟಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಕ್ರಮ ಕೈಗೊಳ್ಳಬೇಕು’ ಎಂದು ಸ್ಥಳದಲ್ಲಿದ್ದ ತಹಶೀಲ್ದಾರ್ ನಾಗರಾಜ್ ಅವರಿಗೆ ಸೂಚನೆ ನೀಡಿದರು.</p>.<p>ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಅರುಣ್ ಕುಮಾರ್, ಕಂದಾಯ ನಿರೀಕ್ಷಕ ಬಸಣ್ಣ, ಗ್ರಾಮ ಲೆಕ್ಕಾಧಿಕಾರಿ ಬಸವರಾಜ್, ಕೃಷಿ ಕೇಂದ್ರದ ರಂಗಸ್ವಾಮಿ, ಮುಖಂಡರಾದ ಬಿ.ಎಚ್. ಹಾಲಪ್ಪ, ಅಣ್ಣಪ್ಪ, ಅಂಜಿನಪ್ಪ, ಪರಶುರಾಮ್, ಸಂತೋಷ್ ಹಾಗೂ ಶ್ರೀನಿವಾಸ್ ಸೇರಿದಂತೆ ರೈತರು ಇದ್ದರು.</p>.<p>(ಬಸವಾಪಟ್ಟಣ ವರದಿ): ಮರಗಳು ಬಿದ್ದು, ಮನೆ ಕುಸಿದು ಹಾನಿಯಾಗಿದ್ದ ಇಲ್ಲಿನ ಶೃಂಗಾರ್ಬಾಗ್ ತಾಂಡಾಕ್ಕೆ ಶಾಸಕ ಕೆ.ಎಸ್.ಬಸವಂತಪ್ಪ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.</p>.<p>ಅಪಾರ ಪ್ರಮಾಣದ ಅಡಿಕೆ ಮರಗಳು ಬಿದ್ದು, ರೈತರಿಗೆ ನಷ್ಟವಾಗಿದೆ. ನಷ್ಟದ ಅಂದಾಜು ಪಟ್ಟಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ತೋಟಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಬಸವಂತಪ್ಪ ತಿಳಿಸಿದರು.</p>.<p>ಹಾಳಾದ ಮನೆಗಳಿಗೆ ಸೂಕ್ತ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು.</p>.<p>(ಸಾಸ್ವೆಹಳ್ಳಿ ವರದಿ): ಗಾಳಿ ಹಾಗೂ ಮಳೆಯಿಂದ ಕ್ಯಾಸಿನಕೆರೆ, ಜರಿಕಟ್ಟೆ, ಕುಳಗಟ್ಟೆ, ಹೊಸಹಳ್ಳಿ, ಹುಣಸಘಟ್ಟ, ಬಾಗೇವಾಡಿ, ಲಿಂಗಾಪುರ ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮಗಳಲ್ಲಿ ಸಾವಿರಕ್ಕೂ ಹೆಚ್ಚು ಅಡಿಕೆ ಮರಗಳು ಬುಡಮೇಲಾಗಿವೆ ಎಂದು ತೋಟಗಾರಿಕೆ ಅಧಿಕಾರಿ ರಮೇಶ್ ಮಾಹಿತಿ ನೀಡಿದ್ದಾರೆ.</p>.<p>ಕಟಾವಿಗೆ ಬಂದಿರುವ ಭತ್ತವನ್ನು ರೈತರು ಆದಷ್ಟು ಬೇಗ ಕಟಾವು ಮಾಡಿಸಿಕೊಳ್ಳುವುದು ಸೂಕ್ತ ಎಂದು ಕೃಷಿ ಅಧಿಕಾರಿ ಶಶಿಧರ್ ಸಲಹೆ ನೀಡಿದರು.</p>.<p>ಅಡಿಕೆ ತೋಟಗಳಿಗೆ ವಿಮೆ ಮಾಡಿಸಿರುವ ರೈತರು ತಕ್ಷಣವೇ ಅರ್ಜಿ ಸಲ್ಲಿಸಿ ಪರಿಹಾರದ ಹಣವನ್ನು ಪಡೆದುಕೊಳ್ಳಲು ಅವಕಾಶವಿದೆ. ನಿಯಮಾವಳಿ ಪ್ರಕಾರ ಶೇ 30ರಷ್ಟು ಹಾನಿಯಾಗಿದ್ದರೆ ಸರ್ಕಾರದಿಂದಲೂ ಸೂಕ್ತ ಪರಿಹಾರವನ್ನು ಒದಗಿಸಲಾಗುವುದು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ರಮೇಶ್ ತಿಳಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260518-43-531372228</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>