‘ರಾಸಾಯನಿಕ ಕೃಷಿ ಪದ್ಧತಿಯಿಂದಾಗಿ ಅಣಬೆಗಳು ಈಗ ಅಪರೂಪವಾಗುತ್ತಿವೆ. ಚಿಗುರಿದ ಸೀಗೆ ಸೊಪ್ಪು, ಗುಡುಗು ಮಳೆಗೆ ಪುಟಿದೇಳುವ ಅಣಬೆ, ಎಳೆಬಿದಿರಿನ ಕಳಲೆ, ಬೇರ ಹಲಸು, ಅಮಟೆಕಾಯಿ ಇವೆಲ್ಲ ಮಳೆಗಾಲದಲ್ಲಿ ಮಾತ್ರ ಸಿಗುವ ಅಪರೂಪದ ತರಕಾರಿಗಳು. ವರ್ಷಕ್ಕೆ ಒಮ್ಮೆ ಅಕ್ಕಿ ರೊಟ್ಟಿ– ಕಳಲೆ ಪಲ್ಯ, ರಾಗಿಮುದ್ದೆ– ಸೀಗೆ ಸೊಪ್ಪಿನ ಸಾರು, ಅಮಟೆ ಉಪ್ಪಿನಕಾಯಿ ಅಡಿಗೆ ಮಾಡಿ ಉಂಡರೆ ರೋಗರುಜಿನ ದೂರವಾಗುತ್ತವೆ’ ಎನ್ನುತ್ತಾರೆ ಹುಣಸಘಟ್ಟ ಗ್ರಾಮದ ಗೃಹಿಣಿ ಗೌರಮ್ಮ.