<p><strong>ದಾವಣಗೆರೆ:</strong> ‘ಪಂಚಮಸಾಲಿ ಗುರುಪೀಠದ ಟ್ರಸ್ಟಿಗಳು ಹಾಗೂ ಅವರ ಹಿಂಬಾಲಕರು ಖಾಲಿ ಕುರ್ಚಿಗಳಿಗೆ ಲೆಕ್ಕ ಒಪ್ಪಿಸಿದ್ದಾರೆ. ಟ್ರಸ್ಟಿಗಳು ಸಮುದಾಯದವರನ್ನು ಕುಡುಕರು ಎಂಬಂತೆ ಬಿಂಬಿಸಿ ಪೊಲೀಸರಿಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಕ್ಷಮೆ ಕೋರದಿದ್ದರೆ ಅವರು ಹೋಗುವ ಸಭೆ, ಸಮಾರಂಭಗಳಲ್ಲಿ ಅವರನ್ನು ಪ್ರಶ್ನಿಸುವಂತೆ ಸಮುದಾಯದವರಿಗೆ ಕರೆ ನೀಡುತ್ತೇವೆ’ ಎಂದು ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ಹೇಳಿದರು.</p>.<p>‘ಟ್ರಸ್ಟಿಗಳು ಕಪ್ಪುಹಣವನ್ನು ಬಿಳಿ ಹಣವನ್ನಾಗಿ ಬದಲಿಸಿಕೊಳ್ಳಲು ಗುರುಪೀಠವನ್ನು ಬಳಸಿಕೊಂಡಿರುವ ಅನುಮಾನ ಇದೆ. ಸಹಿ ಫೋರ್ಜರಿ ಮಾಡಿ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಿಕೊಂಡಿದ್ದಾರೆ. ಈ ಬಗ್ಗೆ ದಾಖಲೆ ಸಮೇತ ಆದಾಯ ತೆರಿಗೆ (ಐಟಿ), ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ದೂರು ನೀಡುತ್ತೇವೆ. ಮೇ 20ರ ವರೆಗೆ ಗಡುವು ನೀಡುತ್ತೇವೆ. ಕ್ಷಮೆ ಕೋರಿ ಸಮುದಾಯದವರ ಮುಂದೆ ತಲೆ ಬಾಗದಿದ್ದರೆ ಚಳವಳಿ ಪ್ರಾರಂಭಿಸುತ್ತೇವೆ’ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.</p>.<p>‘ಮೊದಲ ಹಂತದಲ್ಲಿ ಕೊಟ್ಟೂರು, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ ತಾಲ್ಲೂಕುಗಳಲ್ಲಿ ಸಮಿತಿ ರಚಿಸಿ ಭಕ್ತರು ನೀಡಿದ ದೇಣಿಗೆ ಮೊತ್ತದ ವಿವರ ಸಂಗ್ರಹಿಸುತ್ತೇವೆ’ ಎಂದು ತಿಳಿಸಿದರು.</p>.<p>‘ಮಠದಲ್ಲಿ ಪ್ರತಿಭಾ ಪುರಸ್ಕಾರ ಸೇರಿ ಹಲವು ಕಾರ್ಯಕ್ರಮಗಳು ನಡೆಯಬೇಕಿದೆ. ಈ ಕಾರಣಕ್ಕೆ ಜಿಲ್ಲಾಡಳಿತ ನಿಷೇಧಾಜ್ಞೆಯನ್ನು ವಾಪಸ್ ಪಡೆಯಬೇಕು. ಸ್ವಾಮೀಜಿ ಸಮುದಾಯದಿಂದ ದೇಣಿಗೆ ಸಂಗ್ರಹಿಸಿದ್ದರೆ ಅವರೂ ಲೆಕ್ಕ ಒಪ್ಪಿಸಬೇಕು’ ಎಂದು ಹೇಳಿದರು.</p>.<p>ಮುಖಂಡರಾದ ಆನಂದ ಜರ್ಲಿ, ವೀರಾಪುರ ಬಸವರಾಜ, ಶಂಕರಗೌಡ ಬ್ಯಾಡಗಿ, ಸೋಮಣ್ಣ ಬೇವಿನಮರದ, ಸಿದ್ದಣ್ಣ ಚಿಕ್ಕಬಿದರಿ, ಬಾಬಣ್ಣ ಹಾಗೂ ಇನ್ನಿತರರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260511-43-242263</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ:</strong> ‘ಪಂಚಮಸಾಲಿ ಗುರುಪೀಠದ ಟ್ರಸ್ಟಿಗಳು ಹಾಗೂ ಅವರ ಹಿಂಬಾಲಕರು ಖಾಲಿ ಕುರ್ಚಿಗಳಿಗೆ ಲೆಕ್ಕ ಒಪ್ಪಿಸಿದ್ದಾರೆ. ಟ್ರಸ್ಟಿಗಳು ಸಮುದಾಯದವರನ್ನು ಕುಡುಕರು ಎಂಬಂತೆ ಬಿಂಬಿಸಿ ಪೊಲೀಸರಿಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಕ್ಷಮೆ ಕೋರದಿದ್ದರೆ ಅವರು ಹೋಗುವ ಸಭೆ, ಸಮಾರಂಭಗಳಲ್ಲಿ ಅವರನ್ನು ಪ್ರಶ್ನಿಸುವಂತೆ ಸಮುದಾಯದವರಿಗೆ ಕರೆ ನೀಡುತ್ತೇವೆ’ ಎಂದು ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ಹೇಳಿದರು.</p>.<p>‘ಟ್ರಸ್ಟಿಗಳು ಕಪ್ಪುಹಣವನ್ನು ಬಿಳಿ ಹಣವನ್ನಾಗಿ ಬದಲಿಸಿಕೊಳ್ಳಲು ಗುರುಪೀಠವನ್ನು ಬಳಸಿಕೊಂಡಿರುವ ಅನುಮಾನ ಇದೆ. ಸಹಿ ಫೋರ್ಜರಿ ಮಾಡಿ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಿಕೊಂಡಿದ್ದಾರೆ. ಈ ಬಗ್ಗೆ ದಾಖಲೆ ಸಮೇತ ಆದಾಯ ತೆರಿಗೆ (ಐಟಿ), ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ದೂರು ನೀಡುತ್ತೇವೆ. ಮೇ 20ರ ವರೆಗೆ ಗಡುವು ನೀಡುತ್ತೇವೆ. ಕ್ಷಮೆ ಕೋರಿ ಸಮುದಾಯದವರ ಮುಂದೆ ತಲೆ ಬಾಗದಿದ್ದರೆ ಚಳವಳಿ ಪ್ರಾರಂಭಿಸುತ್ತೇವೆ’ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.</p>.<p>‘ಮೊದಲ ಹಂತದಲ್ಲಿ ಕೊಟ್ಟೂರು, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ ತಾಲ್ಲೂಕುಗಳಲ್ಲಿ ಸಮಿತಿ ರಚಿಸಿ ಭಕ್ತರು ನೀಡಿದ ದೇಣಿಗೆ ಮೊತ್ತದ ವಿವರ ಸಂಗ್ರಹಿಸುತ್ತೇವೆ’ ಎಂದು ತಿಳಿಸಿದರು.</p>.<p>‘ಮಠದಲ್ಲಿ ಪ್ರತಿಭಾ ಪುರಸ್ಕಾರ ಸೇರಿ ಹಲವು ಕಾರ್ಯಕ್ರಮಗಳು ನಡೆಯಬೇಕಿದೆ. ಈ ಕಾರಣಕ್ಕೆ ಜಿಲ್ಲಾಡಳಿತ ನಿಷೇಧಾಜ್ಞೆಯನ್ನು ವಾಪಸ್ ಪಡೆಯಬೇಕು. ಸ್ವಾಮೀಜಿ ಸಮುದಾಯದಿಂದ ದೇಣಿಗೆ ಸಂಗ್ರಹಿಸಿದ್ದರೆ ಅವರೂ ಲೆಕ್ಕ ಒಪ್ಪಿಸಬೇಕು’ ಎಂದು ಹೇಳಿದರು.</p>.<p>ಮುಖಂಡರಾದ ಆನಂದ ಜರ್ಲಿ, ವೀರಾಪುರ ಬಸವರಾಜ, ಶಂಕರಗೌಡ ಬ್ಯಾಡಗಿ, ಸೋಮಣ್ಣ ಬೇವಿನಮರದ, ಸಿದ್ದಣ್ಣ ಚಿಕ್ಕಬಿದರಿ, ಬಾಬಣ್ಣ ಹಾಗೂ ಇನ್ನಿತರರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260511-43-242263</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>