<p><strong>ದಾವಣಗೆರೆ:</strong> ಮಧ್ಯ ಕರ್ನಾಟಕದ ಪ್ರಮುಖ ನಗರವಾಗಿರುವ ದಾವಣಗೆರೆಯಲ್ಲಿ ನೈರುತ್ಯ ರೈಲ್ವೆ ವಲಯಕ್ಕೆ ಸೇರಿದ ರೈಲು ನಿಲ್ದಾಣದಿಂದ ನಿತ್ಯವೂ 80 ರೈಲುಗಳು ಸಂಚರಿಸುತ್ತವೆ. ಇದು ಮೈಸೂರು ವಲಯದಲ್ಲಿ ಅತಿಹೆಚ್ಚು ಆದಾಯ ತಂದುಕೊಡುವ ನಿಲ್ದಾಣವಾಗಿದ್ದರೂ, ಅಗತ್ಯ ಮೂಲ ಸೌಲಭ್ಯಗಳನ್ನು ಪ್ರಯಾಣಿಕರು ಎದುರು ನೋಡುತ್ತಿದ್ದಾರೆ.</p>.<p>ಹಲವು ರೀತಿಯ ಪ್ರಯಾಣಿಕಸ್ನೇಹಿ ಕ್ರಮಗಳನ್ನು ಈ ನಿಲ್ದಾಣದಲ್ಲಿ ಕೈಗೊಂಡಿದ್ದರೂ, ಅವೆಲ್ಲವೂ ಮೊದಲ ಪ್ಲಾಟ್ಫಾರಂಗೆ ಸೀಮಿತವಾಗಿವೆ.</p>.<p>ರೈಲು ನಿಲ್ದಾಣದ ಮುಖ್ಯದ್ವಾರದಿಂದ ಪ್ರವೇಶಿಸಿದರೆ ಸಿಗುವ 1ನೇ ಪ್ಲಾಟ್ಫಾರಂನಿಂದ ಹುಬ್ಬಳ್ಳಿ ಕಡೆಗೆ ರೈಲುಗಳು ಸಂಚರಿಸುತ್ತವೆ. 1ನೇ ಪ್ಲಾಟ್ಫಾರಂ ಎದುರಿಗಿರುವ ಎರಡನೇ ಪ್ಲಾಟ್ಫಾರಂ ಮೂಲಕ ಬೆಂಗಳೂರು ಕಡೆಗೆ ರೈಲುಗಳು ಸಂಚರಿಸುತ್ತವೆ. ಆದರೆ ಅಲ್ಲಿರುವ ಮೂಲ ಸೌಕರ್ಯಗಳು ನಿರೀಕ್ಷೆಗೆ ತಕ್ಕಷ್ಟು ಇಲ್ಲ ಎಂದು ಪ್ರಯಾಣಿಕರು ಅಭಿಪ್ರಾಯಪಡುತ್ತಾರೆ.</p>.<p>ಮೆಟಲ್ ಡಿಟೆಕ್ಟರ್, ಲಗೇಜ್ ಸ್ಕ್ಯಾನರ್ ಯಂತ್ರ, ಕ್ಯಾಂಟೀನ್ ಸೌಲಭ್ಯ, ಪ್ರಯಾಣಿಕರ ಲಾಂಜ್, ಲಾಕರ್ ಸೌಲಭ್ಯ, ಮಕ್ಕಳಿಗೆ ಹಾಲುಣಿಸುವ ಫೀಡಿಂಗ್ ಕೊಠಡಿಗಳು ಮೊದಲನೇ ಪ್ಲಾಟ್ಫಾರಂನಲ್ಲಿ ಮಾತ್ರ ಕಾಣಸಿಗುತ್ತವೆ. ಆದರೆ, ಎದುರಿನ ಪ್ಲಾಟ್ಫಾರಂನಲ್ಲಿ ಈ ಸೌಲಭ್ಯಗಳನ್ನು ಒದಗಿಸದೇ ನಿರ್ಲಕ್ಷಿಸಲಾಗಿದೆ ಎಂದು ಪ್ರಯಾಣಿಕರು ಹೇಳುತ್ತಾರೆ.</p>.<p>2ನೇ ಪ್ಲಾಟ್ಫಾರಂನಲ್ಲಿ ಶೌಚಾಲಯ, ಕುಡಿಯುವ ನೀರಿನ ಸೌಲಭ್ಯಕ್ಕೆ ತೊಂದರೆಯಿಲ್ಲ. ಬೇಸಿಗೆಯ ಬೇಗೆ ತಣಿಸಲು ಫ್ಯಾನ್ಗಳ್ನು ಅಳವಡಿಸಲಾಗಿದೆ. ಆದರೆ ಪ್ರವೇಶದ್ವಾರದಲ್ಲಿ ಸುರಕ್ಷತೆಯ ಪ್ರಶ್ನೆ ಎದುರಾಗಿದೆ. ಇಲ್ಲಿ ಒಂದು ಮೆಟಲ್ ಡಿಟೆಕ್ಟರ್ ಯಂತ್ರವನ್ನು ಅಳವಡಿಸಲಾಗಿದೆಯಾದರೂ ಅದನ್ನು ಯಾರೂ ಬಳಸುವುದಿಲ್ಲ. ಅದನ್ನು ಚಾಲನಾ ಸ್ಥಿತಿಯಲ್ಲಿ ಇರಿಸಿಲ್ಲ. ಅದರ ಮೂಲಕವೇ ಪ್ರಯಾಣಿಕರು ಒಳಗೆ ಪ್ರವೇಶಿಸುವಂತೆ ನೋಡಿಕೊಳ್ಳಬೇಕಾದ ಭದ್ರತಾ ಸಿಬ್ಬಂದಿ ಅಲ್ಲಿಲ್ಲ.</p>.<p>ರೈಲು ಬಂದು ಹೋಗುವ ಸಮಯಕ್ಕೆ ಸರಿಯಾಗಿ ಕೆಲವು ಭದ್ರತಾ ಸಿಬ್ಬಂದಿ ಇಲ್ಲಿಗೆ ಬಂದು ಹೋಗುತ್ತಾರೆ. ಆ ನಂತರ ಯಾರೂ ಇರುವುದಿಲ್ಲ ಎಂದು ಪ್ರಯಾಣಿಕ ನಾಗರಾಜಪ್ಪ ಹೇಳಿದರು.</p>.<p>ಪ್ರಯಾಣಿಕರು ನಿಲ್ದಾಣಕ್ಕೆ ಹೊತ್ತು ತರುವ ಬ್ಯಾಗೇಜ್ಗಳನ್ನು ಪರಿಶೀಲಿಸುವ ಸ್ಕ್ಯಾನರ್ ಯಂತ್ರ ಇಲ್ಲಿಲ್ಲ. ಹೀಗಾಗಿ ನಿಲ್ದಾಣದ ಒಳಗೆ ಯಾವುದೇ ಲೋಹದ ವಸ್ತುಗಳನ್ನು ಅಥವಾ ಅಕ್ರಮವಾಗಿ ಏನಾದರೂ ಸಾಗಣೆ ಮಾಡಬಯಸುವವರು ಸುಲಭವಾಗಿ ತರಬಹುದಾದ ಅವಕಾಶವಿದ್ದು, ಇದು ಅಪಾಯವನ್ನು ಒಡ್ಡುವಂತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.</p>.<p>ಆದರೆ, ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ ಕೊರತೆಯಿದೆ ಎಂದು ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.</p>.<p>‘ನೈಋತ್ಯ ರೈಲ್ವೆ ಮೈಸೂರು ವಿಭಾಗದಲ್ಲಿ ಹೆಚ್ಚು ಆದಾಯ ತಂದು ಕೊಡುವ ದಾವಣಗೆರೆ ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಇನ್ನಷ್ಟು ಸೌಲಭ್ಯ ಕಲ್ಪಿಸಬೇಕು’ ಎಂದು ನೈರುತ್ಯ ರೈಲು ಪ್ರಯಾಣಿಕರ ಸಂಘದ ಕಾರ್ಯದರ್ಶಿ ರೋಹಿತ್ ಎಸ್. ಜೈನ್ ಒತ್ತಾಯಿಸಿದರು.</p>.<p>ಅಂಗವಿಕಲರು ನಿಲ್ದಾಣದ ಪ್ರವೇಶದ್ವಾರದಿಂದ ಬೋಗಿಯನ್ನು ತಲುಪಲು ವಾಹನ ಸೌಲಭ್ಯ, ಹಿರಿಯ ನಾಗರಿಕರಿಗೆ ಬ್ಯಾಟರಿ ಚಾಲಿತ ವಾಹನ ಸೌಲಭ್ಯ ಕಲ್ಪಿಸಬೇಕು. ರಾತ್ರಿ ವೇಳೆ ಅತಿಹೆಚ್ಚು ಜನರು ಬಂದಿಳಿಯುವ 2ನೇ ಪ್ಲಾಟ್ಫಾರಂನಲ್ಲಿ ರೆಸ್ಟೋರೆಂಟ್ ತೆರೆಯಬೇಕು ಎಂದು ಅವರು ಆಗ್ರಹಿಸಿದರು.</p>.<div><blockquote>2ನೇ ಪ್ಲಾಟ್ಫಾರಂಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸುವ ಸಂಬಂಧ ರೈಲ್ವೆ ಮುಖ್ಯ ಎಂಜಿನಿಯರ್ ಜೊತೆ ಚರ್ಚಿಸುತ್ತೇನೆ. ಪ್ರಯಾಣಿಕರಿಗೆ ಸುರಕ್ಷತೆಗೆ ಆದ್ಯತೆ ನೀಡಲಾಗುವುದು</blockquote><span class="attribution">ಎಚ್.ಎಸ್. ಲಿಂಗರಾಜು, ವಲಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯ, ದಾವಣಗೆರೆ</span></div>.<p><strong>ಹೊರ ಆವರಣದ ಶೌಚಾಲಯಕ್ಕೆ ಬೀಗ</strong></p><p>ಹಳೆ ದಾವಣಗೆರೆ ಕಡೆಯಿಂದ ರೈಲು ನಿಲ್ದಾಣವನ್ನು ಪ್ರವೇಶಿಸುವ ಜಾಗದ ಸಮೀಪದಲ್ಲಿ ಪಾವತಿ ಬಳಸುವ ಸೌಲಭ್ಯದ ಸುಸಜ್ಜಿತ ಶೌಚಾಲಯ ಇದೆ. ಆದರೆ ಇದರ ಸ್ಥಿತಿಯನ್ನು ನೋಡಿದರೆ ವಾಕರಿಗೆ ಬರುವಂತಿದೆ.</p><p>ಶೌಚಾಲಯ ವರ್ಷದಿಂದ ಬಾಗಿಲು ತೆರೆದಿಲ್ಲ. ಗ್ರಿಲ್ ಮಾದರಿಯ ಪ್ರವೇಶದ್ವಾರವನ್ನು ಬಂದ್ ಮಾಡಿದ್ದರೂ, ಕುಡುಕರು ಮದ್ಯದ ಪೌಚ್ ಹಾಗೂ ಬಾಟಲಿಗಳನ್ನು ಅದರ ಒಳಗೆ ಎಸೆದು ಗಲೀಜು ಮಾಡಿದ್ದಾರೆ. ಕಾರ್ ಪಾರ್ಕಿಂಗ್ ಸಮೀಪದಲ್ಲಿ ಇರುವ ಈ ಶೌಚಾಲಯ ಈ ಹಿಂದೆ ಕಾರ್ಯ ನಿರ್ವಹಿಸುತ್ತಿತ್ತು. ರೈಲ್ವೆ ಪ್ರಯಾಣಿಕರಿಗಿಂತ ಹೆಚ್ಚಾಗಿ ಹೊರಗಿನವರೇ ಬಳಕೆ ಮಾಡಿಕೊಳ್ಳುತ್ತಿದ್ದರು ಎಂದು ಸ್ಥಳೀಯರೊಬ್ಬರು ಹೇಳಿದರು.</p><p>ಶೌಚಾಲಯ ನಿರ್ವಹಣೆಯನ್ನು ಏಜೆನ್ಸಿಯವರಿಗೆ ವಹಿಸಲು ಯತ್ನಿಸಿದ್ದು, ಯಾರೂ ಮುಂದೆ ಬರುತ್ತಿಲ್ಲ ಎಂದು ಅಧಿಕಾರಿಯೊಬ್ಬರು ಸ್ಪಷ್ಟನೆ ನೀಡಿದರು.</p><p>‘ಶೌಚಾಲಯವನ್ನು ಮತ್ತೆ ಪ್ರಯಾಣಿಕರ ಬಳಕೆಗೆ ಮುಕ್ತಗೊಳಿಸುವ ಕುರಿತು ಚರ್ಚಿಸುತ್ತೇನೆ’ ಎಂದು ದಾವಣಗೆರೆಯ ವಲಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯ ಎಚ್.ಎಸ್. ಲಿಂಗರಾಜು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p><strong>ಲಿಫ್ಟ್, ಎ.ಸಿ. ತಂಗುದಾಣ, ಅಂಗವಿಕಲರಿಗೆ ಶೌಚಾಲಯ</strong></p><p>ರೈಲು ನಿಲ್ದಾಣವನ್ನು ಇನ್ನಷ್ಟು ಜನಸ್ನೇಹಿ ಆಗಿಸಲು ನೈರುತ್ಯ ರೈಲ್ವೆ ಮುಂದಾಗಿದೆ. ಅಂಗವಿಕಲರಿಗಾಗಿ ಪ್ರತ್ಯೇಕ ಶೌಚಾಲಯ ನಿರ್ಮಾಣ ಹಂತದಲ್ಲಿದೆ. ನಿಲ್ದಾಣದಲ್ಲಿ ಶೌಚಾಲಯಗಳಿದ್ದರೂ ಅವು ಅಂಗವಿಕಲರಿಗೆ ಅನುಕೂಲಕರವಾಗಿ ಇಲ್ಲ. ಹೀಗಾಗಿ ಅವರಿಗೆ ಪ್ರತ್ಯೇಕ ಶೌಚಾಲಯ ನಿರ್ಮಾಣ ಮಾಡಲಾಗುತ್ತಿದೆ. ಸದ್ಯದಲ್ಲೇ ಅದು ಬಳಕೆಗೆ ಲಭ್ಯವಾಗಲಿದೆ. </p><p>ಮೊದಲ ಪ್ಲಾಟ್ಫಾರಂನಿಂದ ಎರಡನೇ ಪ್ಲಾಟ್ಫಾರಂಗೆ ತೆರಳಲು ಎಸ್ಕಲೇಟರ್ ಸೌಲಭ್ಯವನ್ನು ಈಗಾಗಲೇ ಕಲ್ಪಿಸಲಾಗಿದೆ. ಆದರೆ ವಯಸ್ಸಾದವರು, ಗರ್ಭಿಣಿಯರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸುಲಭವಾಗಿ ತೆರಳಲು ಅನುಕೂಲವಾಗುವಂತೆ ಲಿಫ್ಟ್ ನಿರ್ಮಾಣಕ್ಕೆ ಇಲಾಖೆ ಮುಂದಾಗಿದೆ. ಈಗಾಗಲೇ ಕಾಮಗಾರಿ ಪ್ರಗತಿಯಲ್ಲಿದ್ದು, ಎರಡು–ಮೂರು ತಿಂಗಳಲ್ಲಿ ಅದು ಕಾರ್ಯಾರಂಭ ಮಾಡಲಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. </p><p>ಶುಲ್ಕಸಹಿತ ಹವಾ ನಿಯಂತ್ರಿತ ಲಾಂಜ್ ನಿರ್ಮಾಣ ಮಾಡಲಾಗುತ್ತಿದೆ. ಇಲ್ಲಿ ಅಂದಾಜು 20 ಜನರು ಏಕಕಾಲದಲ್ಲಿ ಕುಳಿತು ವಿಶ್ರಾಂತಿ ಪಡೆಯಬಹುದು. ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ಶೌಚಾಲಯ ಇರಲಿವೆ. ಹಣ ಪಾವತಿಸಿ, ಇಂತಿಷ್ಟು ಗಂಟೆ ವಿಶ್ರಾಂತಿ ಪಡೆಯಲು ಇಲ್ಲಿ ಅವಕಾಶವಿದೆ. ವಿಐಪಿ ಲಾಂಜ್ ಪಕ್ಕದಲ್ಲೇ ಇದು ನಿರ್ಮಾಣವಾಗುತ್ತಿದೆ. </p><p>ರೈಲು ನಿಲ್ದಾಣದ ಪ್ರವೇಶದ್ವಾರದ ಆರಂಭದಲ್ಲಿ ಪ್ರಧಾನಮಂತ್ರಿ ಜನೌಷಧಿ ಕೇಂದ್ರ ಇದ್ದು, ಭಾನುವಾರ ಹೊರತುಪಡಿಸಿ ಉಳಿದ ದಿನ ತೆರೆದಿರುತ್ತದೆ. ಪ್ರಯಾಣಿಕರನ್ನು ಆಕರ್ಷಿಸಲು ಇನ್ನಷ್ಟು ಮಳಿಗೆಗಳನ್ನು ತೆರಯುವ ಚಿಂತನೆ ಇದ್ದರೂ, ಜಾಗದ ಕೊರತೆ ಇದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ:</strong> ಮಧ್ಯ ಕರ್ನಾಟಕದ ಪ್ರಮುಖ ನಗರವಾಗಿರುವ ದಾವಣಗೆರೆಯಲ್ಲಿ ನೈರುತ್ಯ ರೈಲ್ವೆ ವಲಯಕ್ಕೆ ಸೇರಿದ ರೈಲು ನಿಲ್ದಾಣದಿಂದ ನಿತ್ಯವೂ 80 ರೈಲುಗಳು ಸಂಚರಿಸುತ್ತವೆ. ಇದು ಮೈಸೂರು ವಲಯದಲ್ಲಿ ಅತಿಹೆಚ್ಚು ಆದಾಯ ತಂದುಕೊಡುವ ನಿಲ್ದಾಣವಾಗಿದ್ದರೂ, ಅಗತ್ಯ ಮೂಲ ಸೌಲಭ್ಯಗಳನ್ನು ಪ್ರಯಾಣಿಕರು ಎದುರು ನೋಡುತ್ತಿದ್ದಾರೆ.</p>.<p>ಹಲವು ರೀತಿಯ ಪ್ರಯಾಣಿಕಸ್ನೇಹಿ ಕ್ರಮಗಳನ್ನು ಈ ನಿಲ್ದಾಣದಲ್ಲಿ ಕೈಗೊಂಡಿದ್ದರೂ, ಅವೆಲ್ಲವೂ ಮೊದಲ ಪ್ಲಾಟ್ಫಾರಂಗೆ ಸೀಮಿತವಾಗಿವೆ.</p>.<p>ರೈಲು ನಿಲ್ದಾಣದ ಮುಖ್ಯದ್ವಾರದಿಂದ ಪ್ರವೇಶಿಸಿದರೆ ಸಿಗುವ 1ನೇ ಪ್ಲಾಟ್ಫಾರಂನಿಂದ ಹುಬ್ಬಳ್ಳಿ ಕಡೆಗೆ ರೈಲುಗಳು ಸಂಚರಿಸುತ್ತವೆ. 1ನೇ ಪ್ಲಾಟ್ಫಾರಂ ಎದುರಿಗಿರುವ ಎರಡನೇ ಪ್ಲಾಟ್ಫಾರಂ ಮೂಲಕ ಬೆಂಗಳೂರು ಕಡೆಗೆ ರೈಲುಗಳು ಸಂಚರಿಸುತ್ತವೆ. ಆದರೆ ಅಲ್ಲಿರುವ ಮೂಲ ಸೌಕರ್ಯಗಳು ನಿರೀಕ್ಷೆಗೆ ತಕ್ಕಷ್ಟು ಇಲ್ಲ ಎಂದು ಪ್ರಯಾಣಿಕರು ಅಭಿಪ್ರಾಯಪಡುತ್ತಾರೆ.</p>.<p>ಮೆಟಲ್ ಡಿಟೆಕ್ಟರ್, ಲಗೇಜ್ ಸ್ಕ್ಯಾನರ್ ಯಂತ್ರ, ಕ್ಯಾಂಟೀನ್ ಸೌಲಭ್ಯ, ಪ್ರಯಾಣಿಕರ ಲಾಂಜ್, ಲಾಕರ್ ಸೌಲಭ್ಯ, ಮಕ್ಕಳಿಗೆ ಹಾಲುಣಿಸುವ ಫೀಡಿಂಗ್ ಕೊಠಡಿಗಳು ಮೊದಲನೇ ಪ್ಲಾಟ್ಫಾರಂನಲ್ಲಿ ಮಾತ್ರ ಕಾಣಸಿಗುತ್ತವೆ. ಆದರೆ, ಎದುರಿನ ಪ್ಲಾಟ್ಫಾರಂನಲ್ಲಿ ಈ ಸೌಲಭ್ಯಗಳನ್ನು ಒದಗಿಸದೇ ನಿರ್ಲಕ್ಷಿಸಲಾಗಿದೆ ಎಂದು ಪ್ರಯಾಣಿಕರು ಹೇಳುತ್ತಾರೆ.</p>.<p>2ನೇ ಪ್ಲಾಟ್ಫಾರಂನಲ್ಲಿ ಶೌಚಾಲಯ, ಕುಡಿಯುವ ನೀರಿನ ಸೌಲಭ್ಯಕ್ಕೆ ತೊಂದರೆಯಿಲ್ಲ. ಬೇಸಿಗೆಯ ಬೇಗೆ ತಣಿಸಲು ಫ್ಯಾನ್ಗಳ್ನು ಅಳವಡಿಸಲಾಗಿದೆ. ಆದರೆ ಪ್ರವೇಶದ್ವಾರದಲ್ಲಿ ಸುರಕ್ಷತೆಯ ಪ್ರಶ್ನೆ ಎದುರಾಗಿದೆ. ಇಲ್ಲಿ ಒಂದು ಮೆಟಲ್ ಡಿಟೆಕ್ಟರ್ ಯಂತ್ರವನ್ನು ಅಳವಡಿಸಲಾಗಿದೆಯಾದರೂ ಅದನ್ನು ಯಾರೂ ಬಳಸುವುದಿಲ್ಲ. ಅದನ್ನು ಚಾಲನಾ ಸ್ಥಿತಿಯಲ್ಲಿ ಇರಿಸಿಲ್ಲ. ಅದರ ಮೂಲಕವೇ ಪ್ರಯಾಣಿಕರು ಒಳಗೆ ಪ್ರವೇಶಿಸುವಂತೆ ನೋಡಿಕೊಳ್ಳಬೇಕಾದ ಭದ್ರತಾ ಸಿಬ್ಬಂದಿ ಅಲ್ಲಿಲ್ಲ.</p>.<p>ರೈಲು ಬಂದು ಹೋಗುವ ಸಮಯಕ್ಕೆ ಸರಿಯಾಗಿ ಕೆಲವು ಭದ್ರತಾ ಸಿಬ್ಬಂದಿ ಇಲ್ಲಿಗೆ ಬಂದು ಹೋಗುತ್ತಾರೆ. ಆ ನಂತರ ಯಾರೂ ಇರುವುದಿಲ್ಲ ಎಂದು ಪ್ರಯಾಣಿಕ ನಾಗರಾಜಪ್ಪ ಹೇಳಿದರು.</p>.<p>ಪ್ರಯಾಣಿಕರು ನಿಲ್ದಾಣಕ್ಕೆ ಹೊತ್ತು ತರುವ ಬ್ಯಾಗೇಜ್ಗಳನ್ನು ಪರಿಶೀಲಿಸುವ ಸ್ಕ್ಯಾನರ್ ಯಂತ್ರ ಇಲ್ಲಿಲ್ಲ. ಹೀಗಾಗಿ ನಿಲ್ದಾಣದ ಒಳಗೆ ಯಾವುದೇ ಲೋಹದ ವಸ್ತುಗಳನ್ನು ಅಥವಾ ಅಕ್ರಮವಾಗಿ ಏನಾದರೂ ಸಾಗಣೆ ಮಾಡಬಯಸುವವರು ಸುಲಭವಾಗಿ ತರಬಹುದಾದ ಅವಕಾಶವಿದ್ದು, ಇದು ಅಪಾಯವನ್ನು ಒಡ್ಡುವಂತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.</p>.<p>ಆದರೆ, ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ ಕೊರತೆಯಿದೆ ಎಂದು ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.</p>.<p>‘ನೈಋತ್ಯ ರೈಲ್ವೆ ಮೈಸೂರು ವಿಭಾಗದಲ್ಲಿ ಹೆಚ್ಚು ಆದಾಯ ತಂದು ಕೊಡುವ ದಾವಣಗೆರೆ ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಇನ್ನಷ್ಟು ಸೌಲಭ್ಯ ಕಲ್ಪಿಸಬೇಕು’ ಎಂದು ನೈರುತ್ಯ ರೈಲು ಪ್ರಯಾಣಿಕರ ಸಂಘದ ಕಾರ್ಯದರ್ಶಿ ರೋಹಿತ್ ಎಸ್. ಜೈನ್ ಒತ್ತಾಯಿಸಿದರು.</p>.<p>ಅಂಗವಿಕಲರು ನಿಲ್ದಾಣದ ಪ್ರವೇಶದ್ವಾರದಿಂದ ಬೋಗಿಯನ್ನು ತಲುಪಲು ವಾಹನ ಸೌಲಭ್ಯ, ಹಿರಿಯ ನಾಗರಿಕರಿಗೆ ಬ್ಯಾಟರಿ ಚಾಲಿತ ವಾಹನ ಸೌಲಭ್ಯ ಕಲ್ಪಿಸಬೇಕು. ರಾತ್ರಿ ವೇಳೆ ಅತಿಹೆಚ್ಚು ಜನರು ಬಂದಿಳಿಯುವ 2ನೇ ಪ್ಲಾಟ್ಫಾರಂನಲ್ಲಿ ರೆಸ್ಟೋರೆಂಟ್ ತೆರೆಯಬೇಕು ಎಂದು ಅವರು ಆಗ್ರಹಿಸಿದರು.</p>.<div><blockquote>2ನೇ ಪ್ಲಾಟ್ಫಾರಂಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸುವ ಸಂಬಂಧ ರೈಲ್ವೆ ಮುಖ್ಯ ಎಂಜಿನಿಯರ್ ಜೊತೆ ಚರ್ಚಿಸುತ್ತೇನೆ. ಪ್ರಯಾಣಿಕರಿಗೆ ಸುರಕ್ಷತೆಗೆ ಆದ್ಯತೆ ನೀಡಲಾಗುವುದು</blockquote><span class="attribution">ಎಚ್.ಎಸ್. ಲಿಂಗರಾಜು, ವಲಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯ, ದಾವಣಗೆರೆ</span></div>.<p><strong>ಹೊರ ಆವರಣದ ಶೌಚಾಲಯಕ್ಕೆ ಬೀಗ</strong></p><p>ಹಳೆ ದಾವಣಗೆರೆ ಕಡೆಯಿಂದ ರೈಲು ನಿಲ್ದಾಣವನ್ನು ಪ್ರವೇಶಿಸುವ ಜಾಗದ ಸಮೀಪದಲ್ಲಿ ಪಾವತಿ ಬಳಸುವ ಸೌಲಭ್ಯದ ಸುಸಜ್ಜಿತ ಶೌಚಾಲಯ ಇದೆ. ಆದರೆ ಇದರ ಸ್ಥಿತಿಯನ್ನು ನೋಡಿದರೆ ವಾಕರಿಗೆ ಬರುವಂತಿದೆ.</p><p>ಶೌಚಾಲಯ ವರ್ಷದಿಂದ ಬಾಗಿಲು ತೆರೆದಿಲ್ಲ. ಗ್ರಿಲ್ ಮಾದರಿಯ ಪ್ರವೇಶದ್ವಾರವನ್ನು ಬಂದ್ ಮಾಡಿದ್ದರೂ, ಕುಡುಕರು ಮದ್ಯದ ಪೌಚ್ ಹಾಗೂ ಬಾಟಲಿಗಳನ್ನು ಅದರ ಒಳಗೆ ಎಸೆದು ಗಲೀಜು ಮಾಡಿದ್ದಾರೆ. ಕಾರ್ ಪಾರ್ಕಿಂಗ್ ಸಮೀಪದಲ್ಲಿ ಇರುವ ಈ ಶೌಚಾಲಯ ಈ ಹಿಂದೆ ಕಾರ್ಯ ನಿರ್ವಹಿಸುತ್ತಿತ್ತು. ರೈಲ್ವೆ ಪ್ರಯಾಣಿಕರಿಗಿಂತ ಹೆಚ್ಚಾಗಿ ಹೊರಗಿನವರೇ ಬಳಕೆ ಮಾಡಿಕೊಳ್ಳುತ್ತಿದ್ದರು ಎಂದು ಸ್ಥಳೀಯರೊಬ್ಬರು ಹೇಳಿದರು.</p><p>ಶೌಚಾಲಯ ನಿರ್ವಹಣೆಯನ್ನು ಏಜೆನ್ಸಿಯವರಿಗೆ ವಹಿಸಲು ಯತ್ನಿಸಿದ್ದು, ಯಾರೂ ಮುಂದೆ ಬರುತ್ತಿಲ್ಲ ಎಂದು ಅಧಿಕಾರಿಯೊಬ್ಬರು ಸ್ಪಷ್ಟನೆ ನೀಡಿದರು.</p><p>‘ಶೌಚಾಲಯವನ್ನು ಮತ್ತೆ ಪ್ರಯಾಣಿಕರ ಬಳಕೆಗೆ ಮುಕ್ತಗೊಳಿಸುವ ಕುರಿತು ಚರ್ಚಿಸುತ್ತೇನೆ’ ಎಂದು ದಾವಣಗೆರೆಯ ವಲಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯ ಎಚ್.ಎಸ್. ಲಿಂಗರಾಜು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p><strong>ಲಿಫ್ಟ್, ಎ.ಸಿ. ತಂಗುದಾಣ, ಅಂಗವಿಕಲರಿಗೆ ಶೌಚಾಲಯ</strong></p><p>ರೈಲು ನಿಲ್ದಾಣವನ್ನು ಇನ್ನಷ್ಟು ಜನಸ್ನೇಹಿ ಆಗಿಸಲು ನೈರುತ್ಯ ರೈಲ್ವೆ ಮುಂದಾಗಿದೆ. ಅಂಗವಿಕಲರಿಗಾಗಿ ಪ್ರತ್ಯೇಕ ಶೌಚಾಲಯ ನಿರ್ಮಾಣ ಹಂತದಲ್ಲಿದೆ. ನಿಲ್ದಾಣದಲ್ಲಿ ಶೌಚಾಲಯಗಳಿದ್ದರೂ ಅವು ಅಂಗವಿಕಲರಿಗೆ ಅನುಕೂಲಕರವಾಗಿ ಇಲ್ಲ. ಹೀಗಾಗಿ ಅವರಿಗೆ ಪ್ರತ್ಯೇಕ ಶೌಚಾಲಯ ನಿರ್ಮಾಣ ಮಾಡಲಾಗುತ್ತಿದೆ. ಸದ್ಯದಲ್ಲೇ ಅದು ಬಳಕೆಗೆ ಲಭ್ಯವಾಗಲಿದೆ. </p><p>ಮೊದಲ ಪ್ಲಾಟ್ಫಾರಂನಿಂದ ಎರಡನೇ ಪ್ಲಾಟ್ಫಾರಂಗೆ ತೆರಳಲು ಎಸ್ಕಲೇಟರ್ ಸೌಲಭ್ಯವನ್ನು ಈಗಾಗಲೇ ಕಲ್ಪಿಸಲಾಗಿದೆ. ಆದರೆ ವಯಸ್ಸಾದವರು, ಗರ್ಭಿಣಿಯರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸುಲಭವಾಗಿ ತೆರಳಲು ಅನುಕೂಲವಾಗುವಂತೆ ಲಿಫ್ಟ್ ನಿರ್ಮಾಣಕ್ಕೆ ಇಲಾಖೆ ಮುಂದಾಗಿದೆ. ಈಗಾಗಲೇ ಕಾಮಗಾರಿ ಪ್ರಗತಿಯಲ್ಲಿದ್ದು, ಎರಡು–ಮೂರು ತಿಂಗಳಲ್ಲಿ ಅದು ಕಾರ್ಯಾರಂಭ ಮಾಡಲಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. </p><p>ಶುಲ್ಕಸಹಿತ ಹವಾ ನಿಯಂತ್ರಿತ ಲಾಂಜ್ ನಿರ್ಮಾಣ ಮಾಡಲಾಗುತ್ತಿದೆ. ಇಲ್ಲಿ ಅಂದಾಜು 20 ಜನರು ಏಕಕಾಲದಲ್ಲಿ ಕುಳಿತು ವಿಶ್ರಾಂತಿ ಪಡೆಯಬಹುದು. ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ಶೌಚಾಲಯ ಇರಲಿವೆ. ಹಣ ಪಾವತಿಸಿ, ಇಂತಿಷ್ಟು ಗಂಟೆ ವಿಶ್ರಾಂತಿ ಪಡೆಯಲು ಇಲ್ಲಿ ಅವಕಾಶವಿದೆ. ವಿಐಪಿ ಲಾಂಜ್ ಪಕ್ಕದಲ್ಲೇ ಇದು ನಿರ್ಮಾಣವಾಗುತ್ತಿದೆ. </p><p>ರೈಲು ನಿಲ್ದಾಣದ ಪ್ರವೇಶದ್ವಾರದ ಆರಂಭದಲ್ಲಿ ಪ್ರಧಾನಮಂತ್ರಿ ಜನೌಷಧಿ ಕೇಂದ್ರ ಇದ್ದು, ಭಾನುವಾರ ಹೊರತುಪಡಿಸಿ ಉಳಿದ ದಿನ ತೆರೆದಿರುತ್ತದೆ. ಪ್ರಯಾಣಿಕರನ್ನು ಆಕರ್ಷಿಸಲು ಇನ್ನಷ್ಟು ಮಳಿಗೆಗಳನ್ನು ತೆರಯುವ ಚಿಂತನೆ ಇದ್ದರೂ, ಜಾಗದ ಕೊರತೆ ಇದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>