ವಿಸ್ತಾರಕರು ಮನೆ–ಮನೆಗೆ ಭೇಟಿ ನೀಡಿ ಪ್ರಚಾರ ನಡೆಸಿದ್ದಾರೆ. 2ನೇ ಹಂತದಲ್ಲಿ ಮತ್ತೊಮ್ಮೆ ವಿಸ್ತಾರಕರನ್ನು ಪ್ರತಿ ಮನೆಗೆ ಕಳುಹಿಸುವ ಆಲೋಚನೆ ಇದೆ. ಪಕ್ಷದ ಶಕ್ತಿಯನ್ನು ಒಟ್ಟುಗೂಡಿಸಿ ಕ್ಷೇತ್ರ ಗೆಲ್ಲಲು ಶ್ರಮಿಸಲಾಗುತ್ತಿದೆ
ಎನ್.ರಾಜಶೇಖರ್ ಅಧ್ಯಕ್ಷ ಬಿಜೆಪಿ ಜಿಲ್ಲಾ ಘಟಕ
ದಕ್ಷಿಣ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ. ಶಾಮನೂರು ಶಿವಶಂಕರಪ್ಪ ನಾಲ್ಕು ಬಾರಿ ಗೆಲುವು ಸಾಧಿಸಿದ್ದರು. ಕ್ಷೇತ್ರದಲ್ಲಿ ಪಕ್ಷ ಪ್ರಬಲವಾಗಿದೆ. ಎಲ್ಲ ನಾಯಕರನ್ನು ವಿಶ್ವಾಸಕ್ಕೆ ಪಡೆದು ಕ್ಷೇತ್ರವನ್ನು ಮರಳಿ ಪಡೆಯುತ್ತೇವೆ