<p>ತ್ಯಾವಣಿಗೆ: ಗ್ರಾಮದ ಇತಿಹಾಸ ಪ್ರಸಿದ್ಧ ವೀರಭದ್ರೇಶ್ವರ ಸ್ವಾಮಿಯ ಗುಗ್ಗಳ ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ಮಾರ್ಚ್ 30ರಂದು ಸೋಮವಾರ ಮಹಾರಥೋತ್ಸವ ಜರುಗಲಿದೆ.</p>.<p>ಮುಂಜಾನೆ ಗಂಗಾಪೂಜೆಯೊಂದಿಗೆ ಸ್ವಾಮಿಗೆ ರುದ್ರಾಭಿಷೇಕ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಗ್ರಾಮದ ಕೆರೆ ಮುಂಭಾಗದಿಂದ ಗುಗ್ಗಳ ಆರಂಭವಾಯಿತು. ಹರಕೆ ಹೊತ್ತ ಭಕ್ತರು ಉಪವಾಸದಿಂದ ಗುಗ್ಗಳದ ಕುಂಭ ಹೊತ್ತು ದೇವಸ್ಥಾನದ ಸಮೀಪ ಸಾಗಿದರು.</p>.<p>ಗುಗ್ಗಳ ಸಾಗುತ್ತಿದ್ದಂತೆ ಭಕ್ತರು ಜಯಘೋಷ ಕೂಗಿದರು. ನಂತರ ಗುಗ್ಗಳದ ಕುಂಭಗಳನ್ನು ದೇವಸ್ಥಾನದ ಆವರಣದಲ್ಲಿ ನಿರ್ಮಿಸಿದ್ದ ಕಬ್ಬಿಣದ ಕಂಬಗಳ ಮೇಲೆ ಇರಿಸಲಾಯಿತು. ನಂತರ ಮಹಿಳೆಯರು, ಪುರುಷರು ಗುಗ್ಗಳದ ಕೆಳಗೆ ಸಾಗಿ ಹರಕೆ ಸಲ್ಲಿಸಿದರು.</p>.<p>ಗುಗ್ಗಳ ಸಾಗುವ ಮಾರ್ಗವನ್ನು ತಳಿರು ತೋರಣ ಕಟ್ಟಿ ಸಿಂಗರಿಸಲಾಗಿತ್ತು. ವೀರಗಾಸೆ ಕುಣಿತ ಮಹೋತ್ಸವಕ್ಕೆ ಮೆರುಗು ನೀಡಿತು.</p>.<p>ಗುಗ್ಗಳ ನಂತರ ವೀರಭದ್ರೇಶ್ವರ ಸ್ವಾಮಿಯ ಸಣ್ಣ ರಥೋತ್ಸವ ಜರುಗಿತು. ಭಕ್ತರು ಗ್ರಾಮದ ಆಂಜನೇಯ ಸ್ವಾಮಿ ಬೀರಲಿಂಗೇಶ್ವರ ಸ್ವಾಮಿಯ ಉತ್ಸವ ಮೂರ್ತಿಗಳನ್ನು ಹೊತ್ತು ರಥೋತ್ಸವದ ಜೊತೆ ಸಾಗಿದರು.</p>.<p>ನಂತರ ವೀರಭದ್ರೇಶ್ವರ ಸ್ವಾಮಿ ಹಾಗೂ ಕಾಳಿಕಾ ದೇವಿಗೂ ಕಲ್ಯಾಣಧಾರಣೆ ನಡೆಯಿತು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260330-43-1331239699</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತ್ಯಾವಣಿಗೆ: ಗ್ರಾಮದ ಇತಿಹಾಸ ಪ್ರಸಿದ್ಧ ವೀರಭದ್ರೇಶ್ವರ ಸ್ವಾಮಿಯ ಗುಗ್ಗಳ ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ಮಾರ್ಚ್ 30ರಂದು ಸೋಮವಾರ ಮಹಾರಥೋತ್ಸವ ಜರುಗಲಿದೆ.</p>.<p>ಮುಂಜಾನೆ ಗಂಗಾಪೂಜೆಯೊಂದಿಗೆ ಸ್ವಾಮಿಗೆ ರುದ್ರಾಭಿಷೇಕ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಗ್ರಾಮದ ಕೆರೆ ಮುಂಭಾಗದಿಂದ ಗುಗ್ಗಳ ಆರಂಭವಾಯಿತು. ಹರಕೆ ಹೊತ್ತ ಭಕ್ತರು ಉಪವಾಸದಿಂದ ಗುಗ್ಗಳದ ಕುಂಭ ಹೊತ್ತು ದೇವಸ್ಥಾನದ ಸಮೀಪ ಸಾಗಿದರು.</p>.<p>ಗುಗ್ಗಳ ಸಾಗುತ್ತಿದ್ದಂತೆ ಭಕ್ತರು ಜಯಘೋಷ ಕೂಗಿದರು. ನಂತರ ಗುಗ್ಗಳದ ಕುಂಭಗಳನ್ನು ದೇವಸ್ಥಾನದ ಆವರಣದಲ್ಲಿ ನಿರ್ಮಿಸಿದ್ದ ಕಬ್ಬಿಣದ ಕಂಬಗಳ ಮೇಲೆ ಇರಿಸಲಾಯಿತು. ನಂತರ ಮಹಿಳೆಯರು, ಪುರುಷರು ಗುಗ್ಗಳದ ಕೆಳಗೆ ಸಾಗಿ ಹರಕೆ ಸಲ್ಲಿಸಿದರು.</p>.<p>ಗುಗ್ಗಳ ಸಾಗುವ ಮಾರ್ಗವನ್ನು ತಳಿರು ತೋರಣ ಕಟ್ಟಿ ಸಿಂಗರಿಸಲಾಗಿತ್ತು. ವೀರಗಾಸೆ ಕುಣಿತ ಮಹೋತ್ಸವಕ್ಕೆ ಮೆರುಗು ನೀಡಿತು.</p>.<p>ಗುಗ್ಗಳ ನಂತರ ವೀರಭದ್ರೇಶ್ವರ ಸ್ವಾಮಿಯ ಸಣ್ಣ ರಥೋತ್ಸವ ಜರುಗಿತು. ಭಕ್ತರು ಗ್ರಾಮದ ಆಂಜನೇಯ ಸ್ವಾಮಿ ಬೀರಲಿಂಗೇಶ್ವರ ಸ್ವಾಮಿಯ ಉತ್ಸವ ಮೂರ್ತಿಗಳನ್ನು ಹೊತ್ತು ರಥೋತ್ಸವದ ಜೊತೆ ಸಾಗಿದರು.</p>.<p>ನಂತರ ವೀರಭದ್ರೇಶ್ವರ ಸ್ವಾಮಿ ಹಾಗೂ ಕಾಳಿಕಾ ದೇವಿಗೂ ಕಲ್ಯಾಣಧಾರಣೆ ನಡೆಯಿತು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260330-43-1331239699</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>