<p><strong>ದಾವಣಗೆರೆ:</strong> ಶಾಲೆ, ಟ್ಯೂಷನ್, ಪರೀಕ್ಷೆ ಮೊದಲಾದ ಒತ್ತಡಗಳು ಕಳೆದು, ಇನ್ನೇನು ಬರಲಿರುವ ಬೇಸಿಗೆರಜೆಯ ಮಜಾ ಅನುಭವಿಸಲು ಚಿಣ್ಣರು ತುದಿಗಾಲಲ್ಲಿ ನಿಂತಿದ್ದಾರೆ. ಈ ಹೊತ್ತಿನಲ್ಲಿ, ಜೆ.ಎಚ್. ಪಟೇಲ್ ನಗರದ ಬಾಲಭವನದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿರುವ ‘ಚಿನ್ನಾರಿ ಎಕ್ಸ್ಪ್ರೆಸ್‘ ಪುಟಾಣಿ ರೈಲು ಮನರಂಜನೆ ನೀಡಲು ಮತ್ತೆ ಸಜ್ಜಾಗುತ್ತಿದೆ. </p>.<p>ಮಕ್ಕಳ ನೆಚ್ಚಿನ ಆಟಿಕೆಯಾಗಿದ್ದ ಪುಟಾಣಿ ರೈಲು, ಕೋವಿಡ್ ಹಾಗೂ ಅದರಿಂದ ವಿಧಿಸಿದ ಲಾಕ್ಡೌನ್ ಕಾರಣದಿಂದ ಕಾರ್ಯಾಚರಣೆ ಸ್ಥಗಿತಗೊಳಿಸಿತ್ತು. ಅಂದಿನಿಂದ ಈವರೆಗೆ ರೈಲು ಓಡಿಲ್ಲ. ಶೆಡ್ ಸೇರಿರುವ ಅದಕ್ಕೆ ಪುನಃಶ್ಚೇತನ ನೀಡಿ ಮತ್ತೆ ಹಳಿಗೆ ತರಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮುಂದಾಗಿದ್ದು, ಏಪ್ರಿಲ್ ಮೊದಲ ವಾರದಲ್ಲಿ ಕಾರ್ಯಾರಂಭ ಮಾಡಲಿದೆ.</p>.<p>ಇಷ್ಟು ದಿನ ನಿಂತಲ್ಲೇ ನಿಂತಿರುವುದರಿಂದ ರೈಲಿನ ಎಂಜಿನ್, ರೈಲ್ವೆ ಟ್ರ್ಯಾಕ್ ಸ್ಲೀಪರ್ (ಹಳಿಯನ್ನು ಅಳವಡಿಸುವ ಸ್ಲ್ಯಾಬ್) ಹಾಳಾಗಿದ್ದು, ಅವುಗಳ ದುರಸ್ತಿ ಕಾರ್ಯ ಈಗಾಗಲೇ ಆರಂಭವಾಗಿದೆ. ಎಂಜಿನ್ನ ಬ್ಯಾಟರಿ ಕೆಲಸ ಮಾಡುತ್ತಿಲ್ಲ. ಸೋಮವಾರ ಅದರ ದುರಸ್ತಿ ಕಾರ್ಯ ಮಾಡಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಜಾನಾಯ್ಕ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಪುಟಾಣಿ ರೈಲನ್ನು ಬಾಲಭವನದ ಆವರಣದ ಶೆಲ್ಟರ್ನಲ್ಲಿ ಸುರಕ್ಷಿತವಾಗಿ ಇರಿಸಲಾಗಿದೆ. ಮಳೆ, ಬಿಸಿಲಿನ ಹೊಡೆತ ಬೀಳದಂತೆ ಸಂರಕ್ಷಿಸಿ ಇಡಲಾಗಿದೆ. ಬೋಗಿಗಳು ಸುಸ್ಥಿತಿಯಲ್ಲಿದ್ದು, ಸ್ವಚ್ಛಗೊಳಿಸಿದರೆ ಕಾರ್ಯಾಚರಣೆಗೆ ಯಾವುದೇ ತೊಂದರೆ ಇಲ್ಲ.</p>.<p>ಇನ್ನು, ಕಬ್ಬಿಣದ ರೈಲು ಹಳಿಗಳ ರಚನೆ ಹಾಗೆಯೇ ಇದೆ. ಆದರೆ, ಅದನ್ನು ಅಳವಡಿಸಿರುವ ಟ್ರ್ಯಾಕ್ ಸ್ಲೀಪರ್ಗಳು ಮರದಿಂದ ತಯಾರಾಗಿದ್ದ ಕಾರಣ ಕಿತ್ತುಹೋಗಿವೆ. ಹೀಗಾಗಿ ಮರದ ಎಲ್ಲ ಸ್ಲೀಪರ್ಗಳನ್ನು ಬದಲಿಸಲು ನಿರ್ಧರಿಸಲಾಗಿದೆ. ಇವುಗಳ ಬದಲಿಗೆ ಸಿಮೆಂಟ್ ಕಾಂಕ್ರೀಟ್ನ ಸ್ಲೀಪರ್ಗಳನ್ನು ಹಳಿಗಳಿಗೆ ಜೋಡಿಸಲಾಗುತ್ತದೆ. ಒಟ್ಟು 400 ಕಾಂಕ್ರೀಟ್ ಸ್ಲೀಪರ್ಗಳ ಅಗತ್ಯವಿದ್ದು, ಈ ಪೈಕಿ 300 ಈಗಾಗಲೇ ತಯಾರಾಗಿವೆ. ಉಳಿದವು ಕೆಲವೇ ದಿನಗಳಲ್ಲಿ ಸಿದ್ಧಗೊಳ್ಳಲಿವೆ. ಅವುಗಳನ್ನು ತಂದು ಅಳವಡಿಸುವ ಕಾಮಗಾರಿ ಮುಗಿಸಿದರೆ, ರೈಲು ಬಹುತೇಕ ಸಿದ್ಧವಾಗಲಿದೆ. </p>.<p>ಕಾರ್ಯಾರಂಭ ಮಾಡಿದ ನಂತರ ರೈಲು ಮತ್ತು ಹಳಿಗಳಿಗೆ ಹಾನಿಯಾಗದಂತೆ ಭದ್ರತಾ ಸಿಬ್ಬಂದಿ ನಿಗಾ ವಹಿಸಲಿದ್ದಾರೆ. ವಾರಾಂತ್ಯದಲ್ಲಿ ಪುಟಾಣಿ ರೈಲು ಓಡಿಸುವ ಉದ್ದೇಶವಿದೆ. ಶುಲ್ಕ ನಿಗದಿ ಅಂತಿಮವಾಗಿಲ್ಲ. ಮಕ್ಕಳಿಗೆ ₹5 ಹಾಗೂ ದೊಡ್ಡವರಿಗೆ ₹10 ಶುಲ್ಕ ವಿಧಿಸುವ ಸಾಧ್ಯತೆಯಿದೆ. </p>.<p>ಈ ಎಲ್ಲ ಕಾಮಗಾರಿ ನಡೆಸಲು ₹13 ಲಕ್ಷ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಸ್ವತಃ ಜಿಲ್ಲಾಧಿಕಾರಿ ಮುತುವರ್ಜಿ ವಹಿಸಿ ರೈಲ್ವೆ ಎಂಜಿನಿಯರ್ಗಳೊಂದಿಗೆ ಮಾತುಕತೆ ನಡೆಸಿದ್ದು, ವೆಚ್ಚ ಭರಿಸಲು ಒಪ್ಪಿಗೆ ಸೂಚಿಸಿದ್ದಾರೆ. </p>.<p>‘ದಾವಣಗೆರೆ- ಚಿತ್ರದುರ್ಗ- ತುಮಕೂರು ರೈಲ್ವೆ ಯೋಜನೆಗೆ ಭೂಸ್ವಾಧೀನ ಮುಗಿದ ನಂತರ ಚಿನ್ನಾರಿ ಎಕ್ಸ್ಪ್ರೆಸ್ ಮರು ಓಡಾಟಕ್ಕೆ ನೆರವು ನೀಡುವಂತೆ ಕೇಳಿದ್ದೆ. ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಅವರೂ ನವೀಕರಣಕ್ಕೆ ಆರ್ಥಿಕ ನೆರವು ನೀಡಲು ಒಪ್ಪಿದ್ದಾರೆ’ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದ್ದಾರೆ.</p>.<div><blockquote>ಪುಟಾಣಿ ರೈಲನ್ನು ಹಳಿಗೆ ತರಲು ಎಲ್ಲ ರೀತಿಯ ಯತ್ನಗಳು ಬಿರುಸಿನಿಂದ ಸಾಗಿವೆ. ಕಾಮಗಾರಿ ನಡೆಯುತ್ತಿದ್ದು ಏಪ್ರಿಲ್ ಮೊದಲ ವಾರದ ಹೊತ್ತಿಗೆ ಹಳಿಗಳ ಮೇಲೆ ಚುಕುಬುಕು ರೈಲು ಸಂಚರಿಸಲಿದೆ</blockquote><span class="attribution">ರಾಜಾನಾಯ್ಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ </span></div>.<p><strong>ಮುದ ನೀಡುತ್ತಿದೆ ಬಾಲಭವನದ ಹಸಿರು</strong> </p><p>ಬಾಲಭವನಕ್ಕೆ ಬರುವವರಿಗೆ ಅಲ್ಲಿನ ವಾತಾವರಣ ಆಹ್ಲಾದಕರವಾಗಿ ಇರುವಂತೆ ನೋಡಿಕೊಳ್ಳಲು ಅಧಿಕಾರಿಗಳು ಸಾಕಷ್ಟು ಶ್ರಮ ಹಾಕಿದ್ದಾರೆ. ಬಿರುಬೇಸಿಗೆಯಲ್ಲೂ ತರಹೇವಾರಿ ಗಿಡಮರಗಳಿಂದ ಆವರಣ ನಳನಳಿಸುತ್ತಿದೆ. ಎಲ್ಲ ಗಿಡಗಳಿಗೂ ಹನಿ ನೀರಾವರಿ ವ್ಯವಸ್ಥೆ ಮೂಲಕ ನೀರುಣಿಸಲಾಗುತ್ತಿದ್ದು ಅಚ್ಚ ಹಸಿರಿನಿಂದ ಕಂಗೊಳಿಸುತ್ತಿವೆ. ‘ಮೊದಲು ನೀರಿನ ಮೂಲ ಇರಲಿಲ್ಲ. ನೀರಿನ ಸಂಪರ್ಕ ಪಡೆಯಲು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಅವರ ಜತೆ ಚರ್ಚಿಸಿ ಮನವರಿಕೆ ಮಾಡಿ ಕೊಟ್ಟಿದ್ದೆ. ಅವರ ಸಹಕಾರದಿಂದ ಬಾಲಭವನದ ಸುತ್ತಲೂ ಹಸಿರು ಹೆಚ್ಚುತ್ತಿದೆ’ ಎಂದು ರಾಜಾನಾಯ್ಕ ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ:</strong> ಶಾಲೆ, ಟ್ಯೂಷನ್, ಪರೀಕ್ಷೆ ಮೊದಲಾದ ಒತ್ತಡಗಳು ಕಳೆದು, ಇನ್ನೇನು ಬರಲಿರುವ ಬೇಸಿಗೆರಜೆಯ ಮಜಾ ಅನುಭವಿಸಲು ಚಿಣ್ಣರು ತುದಿಗಾಲಲ್ಲಿ ನಿಂತಿದ್ದಾರೆ. ಈ ಹೊತ್ತಿನಲ್ಲಿ, ಜೆ.ಎಚ್. ಪಟೇಲ್ ನಗರದ ಬಾಲಭವನದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿರುವ ‘ಚಿನ್ನಾರಿ ಎಕ್ಸ್ಪ್ರೆಸ್‘ ಪುಟಾಣಿ ರೈಲು ಮನರಂಜನೆ ನೀಡಲು ಮತ್ತೆ ಸಜ್ಜಾಗುತ್ತಿದೆ. </p>.<p>ಮಕ್ಕಳ ನೆಚ್ಚಿನ ಆಟಿಕೆಯಾಗಿದ್ದ ಪುಟಾಣಿ ರೈಲು, ಕೋವಿಡ್ ಹಾಗೂ ಅದರಿಂದ ವಿಧಿಸಿದ ಲಾಕ್ಡೌನ್ ಕಾರಣದಿಂದ ಕಾರ್ಯಾಚರಣೆ ಸ್ಥಗಿತಗೊಳಿಸಿತ್ತು. ಅಂದಿನಿಂದ ಈವರೆಗೆ ರೈಲು ಓಡಿಲ್ಲ. ಶೆಡ್ ಸೇರಿರುವ ಅದಕ್ಕೆ ಪುನಃಶ್ಚೇತನ ನೀಡಿ ಮತ್ತೆ ಹಳಿಗೆ ತರಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮುಂದಾಗಿದ್ದು, ಏಪ್ರಿಲ್ ಮೊದಲ ವಾರದಲ್ಲಿ ಕಾರ್ಯಾರಂಭ ಮಾಡಲಿದೆ.</p>.<p>ಇಷ್ಟು ದಿನ ನಿಂತಲ್ಲೇ ನಿಂತಿರುವುದರಿಂದ ರೈಲಿನ ಎಂಜಿನ್, ರೈಲ್ವೆ ಟ್ರ್ಯಾಕ್ ಸ್ಲೀಪರ್ (ಹಳಿಯನ್ನು ಅಳವಡಿಸುವ ಸ್ಲ್ಯಾಬ್) ಹಾಳಾಗಿದ್ದು, ಅವುಗಳ ದುರಸ್ತಿ ಕಾರ್ಯ ಈಗಾಗಲೇ ಆರಂಭವಾಗಿದೆ. ಎಂಜಿನ್ನ ಬ್ಯಾಟರಿ ಕೆಲಸ ಮಾಡುತ್ತಿಲ್ಲ. ಸೋಮವಾರ ಅದರ ದುರಸ್ತಿ ಕಾರ್ಯ ಮಾಡಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಜಾನಾಯ್ಕ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಪುಟಾಣಿ ರೈಲನ್ನು ಬಾಲಭವನದ ಆವರಣದ ಶೆಲ್ಟರ್ನಲ್ಲಿ ಸುರಕ್ಷಿತವಾಗಿ ಇರಿಸಲಾಗಿದೆ. ಮಳೆ, ಬಿಸಿಲಿನ ಹೊಡೆತ ಬೀಳದಂತೆ ಸಂರಕ್ಷಿಸಿ ಇಡಲಾಗಿದೆ. ಬೋಗಿಗಳು ಸುಸ್ಥಿತಿಯಲ್ಲಿದ್ದು, ಸ್ವಚ್ಛಗೊಳಿಸಿದರೆ ಕಾರ್ಯಾಚರಣೆಗೆ ಯಾವುದೇ ತೊಂದರೆ ಇಲ್ಲ.</p>.<p>ಇನ್ನು, ಕಬ್ಬಿಣದ ರೈಲು ಹಳಿಗಳ ರಚನೆ ಹಾಗೆಯೇ ಇದೆ. ಆದರೆ, ಅದನ್ನು ಅಳವಡಿಸಿರುವ ಟ್ರ್ಯಾಕ್ ಸ್ಲೀಪರ್ಗಳು ಮರದಿಂದ ತಯಾರಾಗಿದ್ದ ಕಾರಣ ಕಿತ್ತುಹೋಗಿವೆ. ಹೀಗಾಗಿ ಮರದ ಎಲ್ಲ ಸ್ಲೀಪರ್ಗಳನ್ನು ಬದಲಿಸಲು ನಿರ್ಧರಿಸಲಾಗಿದೆ. ಇವುಗಳ ಬದಲಿಗೆ ಸಿಮೆಂಟ್ ಕಾಂಕ್ರೀಟ್ನ ಸ್ಲೀಪರ್ಗಳನ್ನು ಹಳಿಗಳಿಗೆ ಜೋಡಿಸಲಾಗುತ್ತದೆ. ಒಟ್ಟು 400 ಕಾಂಕ್ರೀಟ್ ಸ್ಲೀಪರ್ಗಳ ಅಗತ್ಯವಿದ್ದು, ಈ ಪೈಕಿ 300 ಈಗಾಗಲೇ ತಯಾರಾಗಿವೆ. ಉಳಿದವು ಕೆಲವೇ ದಿನಗಳಲ್ಲಿ ಸಿದ್ಧಗೊಳ್ಳಲಿವೆ. ಅವುಗಳನ್ನು ತಂದು ಅಳವಡಿಸುವ ಕಾಮಗಾರಿ ಮುಗಿಸಿದರೆ, ರೈಲು ಬಹುತೇಕ ಸಿದ್ಧವಾಗಲಿದೆ. </p>.<p>ಕಾರ್ಯಾರಂಭ ಮಾಡಿದ ನಂತರ ರೈಲು ಮತ್ತು ಹಳಿಗಳಿಗೆ ಹಾನಿಯಾಗದಂತೆ ಭದ್ರತಾ ಸಿಬ್ಬಂದಿ ನಿಗಾ ವಹಿಸಲಿದ್ದಾರೆ. ವಾರಾಂತ್ಯದಲ್ಲಿ ಪುಟಾಣಿ ರೈಲು ಓಡಿಸುವ ಉದ್ದೇಶವಿದೆ. ಶುಲ್ಕ ನಿಗದಿ ಅಂತಿಮವಾಗಿಲ್ಲ. ಮಕ್ಕಳಿಗೆ ₹5 ಹಾಗೂ ದೊಡ್ಡವರಿಗೆ ₹10 ಶುಲ್ಕ ವಿಧಿಸುವ ಸಾಧ್ಯತೆಯಿದೆ. </p>.<p>ಈ ಎಲ್ಲ ಕಾಮಗಾರಿ ನಡೆಸಲು ₹13 ಲಕ್ಷ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಸ್ವತಃ ಜಿಲ್ಲಾಧಿಕಾರಿ ಮುತುವರ್ಜಿ ವಹಿಸಿ ರೈಲ್ವೆ ಎಂಜಿನಿಯರ್ಗಳೊಂದಿಗೆ ಮಾತುಕತೆ ನಡೆಸಿದ್ದು, ವೆಚ್ಚ ಭರಿಸಲು ಒಪ್ಪಿಗೆ ಸೂಚಿಸಿದ್ದಾರೆ. </p>.<p>‘ದಾವಣಗೆರೆ- ಚಿತ್ರದುರ್ಗ- ತುಮಕೂರು ರೈಲ್ವೆ ಯೋಜನೆಗೆ ಭೂಸ್ವಾಧೀನ ಮುಗಿದ ನಂತರ ಚಿನ್ನಾರಿ ಎಕ್ಸ್ಪ್ರೆಸ್ ಮರು ಓಡಾಟಕ್ಕೆ ನೆರವು ನೀಡುವಂತೆ ಕೇಳಿದ್ದೆ. ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಅವರೂ ನವೀಕರಣಕ್ಕೆ ಆರ್ಥಿಕ ನೆರವು ನೀಡಲು ಒಪ್ಪಿದ್ದಾರೆ’ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದ್ದಾರೆ.</p>.<div><blockquote>ಪುಟಾಣಿ ರೈಲನ್ನು ಹಳಿಗೆ ತರಲು ಎಲ್ಲ ರೀತಿಯ ಯತ್ನಗಳು ಬಿರುಸಿನಿಂದ ಸಾಗಿವೆ. ಕಾಮಗಾರಿ ನಡೆಯುತ್ತಿದ್ದು ಏಪ್ರಿಲ್ ಮೊದಲ ವಾರದ ಹೊತ್ತಿಗೆ ಹಳಿಗಳ ಮೇಲೆ ಚುಕುಬುಕು ರೈಲು ಸಂಚರಿಸಲಿದೆ</blockquote><span class="attribution">ರಾಜಾನಾಯ್ಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ </span></div>.<p><strong>ಮುದ ನೀಡುತ್ತಿದೆ ಬಾಲಭವನದ ಹಸಿರು</strong> </p><p>ಬಾಲಭವನಕ್ಕೆ ಬರುವವರಿಗೆ ಅಲ್ಲಿನ ವಾತಾವರಣ ಆಹ್ಲಾದಕರವಾಗಿ ಇರುವಂತೆ ನೋಡಿಕೊಳ್ಳಲು ಅಧಿಕಾರಿಗಳು ಸಾಕಷ್ಟು ಶ್ರಮ ಹಾಕಿದ್ದಾರೆ. ಬಿರುಬೇಸಿಗೆಯಲ್ಲೂ ತರಹೇವಾರಿ ಗಿಡಮರಗಳಿಂದ ಆವರಣ ನಳನಳಿಸುತ್ತಿದೆ. ಎಲ್ಲ ಗಿಡಗಳಿಗೂ ಹನಿ ನೀರಾವರಿ ವ್ಯವಸ್ಥೆ ಮೂಲಕ ನೀರುಣಿಸಲಾಗುತ್ತಿದ್ದು ಅಚ್ಚ ಹಸಿರಿನಿಂದ ಕಂಗೊಳಿಸುತ್ತಿವೆ. ‘ಮೊದಲು ನೀರಿನ ಮೂಲ ಇರಲಿಲ್ಲ. ನೀರಿನ ಸಂಪರ್ಕ ಪಡೆಯಲು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಅವರ ಜತೆ ಚರ್ಚಿಸಿ ಮನವರಿಕೆ ಮಾಡಿ ಕೊಟ್ಟಿದ್ದೆ. ಅವರ ಸಹಕಾರದಿಂದ ಬಾಲಭವನದ ಸುತ್ತಲೂ ಹಸಿರು ಹೆಚ್ಚುತ್ತಿದೆ’ ಎಂದು ರಾಜಾನಾಯ್ಕ ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>