ಕಳೆದ ತಿಂಗಳು ಮಳೆ ಇದ್ದ ಕಾರಣ ನೀರಿನ ಸಮಸ್ಯೆ ಇರಲಿಲ್ಲ. ಈಗ ನೀರಿನ ಅಗತ್ಯ ಎದುರಾಗಿದೆ. ನಾಲೆಯ ಕೆಲವು ಭಾಗದ ಹೂಳು ಎತ್ತಿಸಿದ್ದರೂ ಮಳೆಗಾಲದಲ್ಲಿ ಕೆಸರು ಮಣ್ಣು, ಹೂಳು ತುಂಬಿದೆ. ನಾಲೆಯಲ್ಲಿ ಗಿಡಗಳು ಬೆಳೆದಿವೆ.ಸಾಕಷ್ಟು ಖರ್ಚು ಮಾಡಿ ಭತ್ತ ಬೆಳೆಯಲಾಗಿದೆ. ಒಂದೆರಡು ದಿನದಲ್ಲಿ ನೀರು ಬರದಿದ್ದರೆ ಬೆಳೆ ಒಣಗಿಹೋಗುತ್ತದೆ ಎಂದು ಕೊಟ್ರೇಶ್, ಬಸವರಾಜಪ್ಪ ಅಳಲು ತೋಡಿಕೊಂಡರು.