ಸ್ಥಳೀಯ ಶಾಸಕರಾಗಿರುವ ಜಿ. ಕರುಣಾಕರ ರೆಡ್ಡಿ ಅವರು ಸೌಜನ್ಯಕ್ಕೂ ಶ್ರೀಧರ್ ಅವರ ಮನೆಗೆ ತೆರಳಿ, ಕುಟುಂಬದವರಿಗೆ ಸಾಂತ್ವನ ಹೇಳುವ ಗೋಜಿಗೆ ಹೋಗಿಲ್ಲ. ಈ ಪ್ರಕರಣಗಳಲ್ಲಿ ನ್ಯಾಯದ ಪರ ನಿಲ್ಲಬೇಕು ಎನ್ನುವ ಕನಿಷ್ಠ ಪ್ರಜ್ಞೆ ಅವರಿಗಿದ್ದರೆ ತಕ್ಷಣವೇ ಅವರ ಮನೆಗೆ ತೆರಳಿ ತಾಯಿ, ಪತ್ನಿ ಮತ್ತು ಮಕ್ಕಳಿಗೆ ಸಾಂತ್ವನ ಹೇಳಬೇಕು. ಶಾಸಕರು ಅವರ ಮನೆಗೆ ಹೋಗದಿದ್ದರೆ, ಶ್ರೀಧರ್ ಹತ್ಯೆಯನ್ನು ಸ್ವಾಗತಿಸಿದಂತೆ ಎಂದು ತಿಳಿಸಿದರು.