<p><strong>ದಾವಣಗೆರೆ:</strong> ಜವಾಬ್ದಾರಿ ಅರಿತು ಸರ್ಕಾರದ ನಿಯಮಗಳ ಪ್ರಕಾರ ಕರ್ತವ್ಯ ನಿರ್ವಹಿಸುವಲ್ಲಿ ವಿಫಲರಾಗಿರುವ ಹಾಗೂ ಹಣ ದುರುಪಯೋಗ ಸೇರಿದಂತೆ ಹಲವು ಸೇವಾ ಲೋಪ ಎಸಗಿದ ಆರೋಪದ ಮೇರೆಗೆ ಮಲೇಬೆನ್ನೂರು ಪುರಸಭೆಯ ಮುಖ್ಯಾಧಿಕಾರಿ ಎಚ್.ಎನ್. ಭಜಕ್ಕನವರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಆದೇಶಿಸಿದ್ದಾರೆ.</p><p>ತೆರವಾಗಿರುವ ಈ ಹುದ್ದೆಗೆ ನ್ಯಾಮತಿ ಪಟ್ಟಣ ಪಂಚಾಯಿತಿಯ ಸಮುದಾಯ ಸಂಘಟನಾಧಿಕಾರಿ ಎಸ್.ಆರ್. ವೀರಭದ್ರಯ್ಯ ಅವರನ್ನು ನಿಯೋಜಿಸಲಾಗಿದೆ. ಇವರು ಮಲೇಬೆನ್ನೂರು ಪುರಸಭೆಯ ಪ್ರಭಾರ ಮುಖ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.</p><p>ಆಸ್ತಿ ನೋಂದಣಿಗೆ ಅಗತ್ಯವಿರುವ ಡಿಜಿಟಲ್ ‘ಇ–ಖಾತಾ’ಗಳನ್ನು ತಿದ್ದಿ ಸರ್ಕಾರಕ್ಕೆ ನೋಂದಣಿ ಮತ್ತು ಮುದ್ರಾಂಕ ಶುಲ್ಕ ವಂಚನೆ ಮಾಡಿರುವ ಕುರಿತು </p><p>‘ಪ್ರಜಾವಾಣಿ’ ವಿಶೇಷ ವರದಿ ಪ್ರಕಟಿಸಿತ್ತು. ಆ ಬಳಿಕ ಮಲೇಬೆನ್ನೂರು ಪುರಸಭೆಯ ಒಂದೊಂದೇ ಲೋಪಗಳು ಬೆಳಕಿಗೆ ಬಂದಿದ್ದವು. ಮುಖ್ಯಾಧಿಕಾರಿಯ ಆಡಳಿತಾತ್ಮಕ ಲೋಪಗಳ ಕುರಿತು ನಡೆಸಿದ ತನಿಖೆಯನ್ನು ಆಧರಿಸಿ ಜಿಲ್ಲಾಧಿಕಾರಿ ಶಿಸ್ತುಕ್ರಮ ಜರುಗಿಸಿದ್ದಾರೆ.</p><p>ಆಸ್ತಿ ತೆರಿಗೆ ವಸೂಲಾತಿಗೆ ಚಲನ್ಗಳನ್ನು ಮುದ್ರಿಸಿ ನೀಡದಿರುವುದು, ಹೆಚ್ಚುವರಿ ಕೌಂಟರ್ ಸ್ಥಾಪಿಸದೇ ಲೋಪ ಎಸಗಿರುವುದನ್ನು ತನಿಖಾ ತಂಡ ಪತ್ತೆ ಮಾಡಿತ್ತು. ತೆರಿಗೆ ಪಾವತಿಸಿದವರಿಗೆ ಕಚೇರಿ ಸಿಬ್ಬಂದಿ ನಕಲಿ ಚಲನ್ ಮತ್ತು ಬಿಲ್ಗಳನ್ನು ನೀಡಿ ವಂಚಿಸಿರುವುದನ್ನು ಗುರುತಿಸಿತ್ತು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅನುದಾನ ಬಳಕೆಯಲ್ಲಿ ಆಗಿರುವ ಲೋಪ ತನಿಖೆಯ ವೇಳೆ ಗೊತ್ತಾಗಿತ್ತು.</p>.ದಾವಣಗೆರೆ: ‘ಇ–ಖಾತಾ’ ತಿದ್ದಿ ಆಸ್ತಿ ನೋಂದಣಿ.<p>ಪುರಸಭೆ ವ್ಯಾಪ್ತಿಯ ಖಾಸಗಿ ಕಟ್ಟಡಗಳನ್ನು ನಿವೇಶನ ಎಂಬುದಾಗಿ ಡಿಜಿಟಲ್ ‘ಇ–ಖಾತೆ’ ತಿದ್ದುಪಡಿ ಮಾಡಿ ಆಸ್ತಿ ಪರಭಾರೆ ಮಾಡಿದ 11 ಪ್ರಕರಣಗಳನ್ನು ತನಿಖಾ ತಂಡ ಪತ್ತೆ ಮಾಡಿತ್ತು. ಆಸ್ತಿ ಮಾಲಿಕರಿಗೆ ವಿತರಿಸಿದ ಕಂದಾಯ ರಸೀದಿಗಳು ನಕಲಿ ಎಂಬುದು ಈ ವೇಳೆ ಬೆಳಕಿಗೆ ಬಂದಿತ್ತು.</p><p>‘ಬಿ–ಖಾತಾ’ ವಿತರಣಾ ಆಂದೋಲನವನ್ನು ಕೈಗೆತ್ತಿಕೊಳ್ಳುವಲ್ಲಿ ಮುಖ್ಯಾಧಿಕಾರಿ ವಿಳಂಬ ಧೋರಣೆ ಅನುಸರಿಸಿದ್ದರು. ಕ್ರಿಯಾ ಯೋಜನೆ, ಪುರಸಭೆಯ ಬಜೆಟ್ಗೆ ನಿಗದಿತ ಕಾಲಮಿತಿಯಲ್ಲಿ ಅನುಮೋದನೆ ಪಡೆಯದೇ ನಿರ್ಲಕ್ಷ್ಯ ತೋರಲಾಗಿತ್ತು. ನಕಲಿ ನೇಮಕಾತಿ ಪತ್ರ ನೀಡಿ ಹೊರಗುತ್ತಿಗೆ ಆಧಾರದ ಮೇರೆಗೆ ನೇಮಕಾತಿ ಮಾಡಿಕೊಂಡ ಬಗ್ಗೆಯೂ ತನಿಖಾ ತಂಡ ಪತ್ತೆ ಮಾಡಿತ್ತು.</p>.<div><blockquote>ಕರ್ತವ್ಯ ಲೋಪ ಎಸಗಿರುವುದೂ ಸೇರಿದಂತೆ ಹಲವು ಆರೋಪ ಮಲೇಬೆನ್ನೂರು ಪುರಸಭೆಯ ಮುಖ್ಯಾಧಿಕಾರಿ ವಿರುದ್ಧ ಕೇಳಿಬಂದಿದ್ದವು. ತನಿಖೆ ನಡೆಸಿ ಸೇವೆಯಿಂದ ಅಮಾನತುಗೊಳಿಸಲಾಗಿದೆ.</blockquote><span class="attribution">– ಜಿ.ಎಂ. ಗಂಗಾಧರಸ್ವಾಮಿ, ಜಿಲ್ಲಾಧಿಕಾರಿ ದಾವಣಗೆರೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ:</strong> ಜವಾಬ್ದಾರಿ ಅರಿತು ಸರ್ಕಾರದ ನಿಯಮಗಳ ಪ್ರಕಾರ ಕರ್ತವ್ಯ ನಿರ್ವಹಿಸುವಲ್ಲಿ ವಿಫಲರಾಗಿರುವ ಹಾಗೂ ಹಣ ದುರುಪಯೋಗ ಸೇರಿದಂತೆ ಹಲವು ಸೇವಾ ಲೋಪ ಎಸಗಿದ ಆರೋಪದ ಮೇರೆಗೆ ಮಲೇಬೆನ್ನೂರು ಪುರಸಭೆಯ ಮುಖ್ಯಾಧಿಕಾರಿ ಎಚ್.ಎನ್. ಭಜಕ್ಕನವರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಆದೇಶಿಸಿದ್ದಾರೆ.</p><p>ತೆರವಾಗಿರುವ ಈ ಹುದ್ದೆಗೆ ನ್ಯಾಮತಿ ಪಟ್ಟಣ ಪಂಚಾಯಿತಿಯ ಸಮುದಾಯ ಸಂಘಟನಾಧಿಕಾರಿ ಎಸ್.ಆರ್. ವೀರಭದ್ರಯ್ಯ ಅವರನ್ನು ನಿಯೋಜಿಸಲಾಗಿದೆ. ಇವರು ಮಲೇಬೆನ್ನೂರು ಪುರಸಭೆಯ ಪ್ರಭಾರ ಮುಖ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.</p><p>ಆಸ್ತಿ ನೋಂದಣಿಗೆ ಅಗತ್ಯವಿರುವ ಡಿಜಿಟಲ್ ‘ಇ–ಖಾತಾ’ಗಳನ್ನು ತಿದ್ದಿ ಸರ್ಕಾರಕ್ಕೆ ನೋಂದಣಿ ಮತ್ತು ಮುದ್ರಾಂಕ ಶುಲ್ಕ ವಂಚನೆ ಮಾಡಿರುವ ಕುರಿತು </p><p>‘ಪ್ರಜಾವಾಣಿ’ ವಿಶೇಷ ವರದಿ ಪ್ರಕಟಿಸಿತ್ತು. ಆ ಬಳಿಕ ಮಲೇಬೆನ್ನೂರು ಪುರಸಭೆಯ ಒಂದೊಂದೇ ಲೋಪಗಳು ಬೆಳಕಿಗೆ ಬಂದಿದ್ದವು. ಮುಖ್ಯಾಧಿಕಾರಿಯ ಆಡಳಿತಾತ್ಮಕ ಲೋಪಗಳ ಕುರಿತು ನಡೆಸಿದ ತನಿಖೆಯನ್ನು ಆಧರಿಸಿ ಜಿಲ್ಲಾಧಿಕಾರಿ ಶಿಸ್ತುಕ್ರಮ ಜರುಗಿಸಿದ್ದಾರೆ.</p><p>ಆಸ್ತಿ ತೆರಿಗೆ ವಸೂಲಾತಿಗೆ ಚಲನ್ಗಳನ್ನು ಮುದ್ರಿಸಿ ನೀಡದಿರುವುದು, ಹೆಚ್ಚುವರಿ ಕೌಂಟರ್ ಸ್ಥಾಪಿಸದೇ ಲೋಪ ಎಸಗಿರುವುದನ್ನು ತನಿಖಾ ತಂಡ ಪತ್ತೆ ಮಾಡಿತ್ತು. ತೆರಿಗೆ ಪಾವತಿಸಿದವರಿಗೆ ಕಚೇರಿ ಸಿಬ್ಬಂದಿ ನಕಲಿ ಚಲನ್ ಮತ್ತು ಬಿಲ್ಗಳನ್ನು ನೀಡಿ ವಂಚಿಸಿರುವುದನ್ನು ಗುರುತಿಸಿತ್ತು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅನುದಾನ ಬಳಕೆಯಲ್ಲಿ ಆಗಿರುವ ಲೋಪ ತನಿಖೆಯ ವೇಳೆ ಗೊತ್ತಾಗಿತ್ತು.</p>.ದಾವಣಗೆರೆ: ‘ಇ–ಖಾತಾ’ ತಿದ್ದಿ ಆಸ್ತಿ ನೋಂದಣಿ.<p>ಪುರಸಭೆ ವ್ಯಾಪ್ತಿಯ ಖಾಸಗಿ ಕಟ್ಟಡಗಳನ್ನು ನಿವೇಶನ ಎಂಬುದಾಗಿ ಡಿಜಿಟಲ್ ‘ಇ–ಖಾತೆ’ ತಿದ್ದುಪಡಿ ಮಾಡಿ ಆಸ್ತಿ ಪರಭಾರೆ ಮಾಡಿದ 11 ಪ್ರಕರಣಗಳನ್ನು ತನಿಖಾ ತಂಡ ಪತ್ತೆ ಮಾಡಿತ್ತು. ಆಸ್ತಿ ಮಾಲಿಕರಿಗೆ ವಿತರಿಸಿದ ಕಂದಾಯ ರಸೀದಿಗಳು ನಕಲಿ ಎಂಬುದು ಈ ವೇಳೆ ಬೆಳಕಿಗೆ ಬಂದಿತ್ತು.</p><p>‘ಬಿ–ಖಾತಾ’ ವಿತರಣಾ ಆಂದೋಲನವನ್ನು ಕೈಗೆತ್ತಿಕೊಳ್ಳುವಲ್ಲಿ ಮುಖ್ಯಾಧಿಕಾರಿ ವಿಳಂಬ ಧೋರಣೆ ಅನುಸರಿಸಿದ್ದರು. ಕ್ರಿಯಾ ಯೋಜನೆ, ಪುರಸಭೆಯ ಬಜೆಟ್ಗೆ ನಿಗದಿತ ಕಾಲಮಿತಿಯಲ್ಲಿ ಅನುಮೋದನೆ ಪಡೆಯದೇ ನಿರ್ಲಕ್ಷ್ಯ ತೋರಲಾಗಿತ್ತು. ನಕಲಿ ನೇಮಕಾತಿ ಪತ್ರ ನೀಡಿ ಹೊರಗುತ್ತಿಗೆ ಆಧಾರದ ಮೇರೆಗೆ ನೇಮಕಾತಿ ಮಾಡಿಕೊಂಡ ಬಗ್ಗೆಯೂ ತನಿಖಾ ತಂಡ ಪತ್ತೆ ಮಾಡಿತ್ತು.</p>.<div><blockquote>ಕರ್ತವ್ಯ ಲೋಪ ಎಸಗಿರುವುದೂ ಸೇರಿದಂತೆ ಹಲವು ಆರೋಪ ಮಲೇಬೆನ್ನೂರು ಪುರಸಭೆಯ ಮುಖ್ಯಾಧಿಕಾರಿ ವಿರುದ್ಧ ಕೇಳಿಬಂದಿದ್ದವು. ತನಿಖೆ ನಡೆಸಿ ಸೇವೆಯಿಂದ ಅಮಾನತುಗೊಳಿಸಲಾಗಿದೆ.</blockquote><span class="attribution">– ಜಿ.ಎಂ. ಗಂಗಾಧರಸ್ವಾಮಿ, ಜಿಲ್ಲಾಧಿಕಾರಿ ದಾವಣಗೆರೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>