‘ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತೇವೆ’ ಎಂಬ ಹುಮ್ಮಸ್ಸಿನಲ್ಲಿ ಜನತಾದಳದ ನಾಯಕರಿದ್ದರು. ದಾವಣಗೆರೆಯಿಂದ ನಾಮಪತ್ರ ಸಲ್ಲಿಸುವಂತೆ ಬಿ.ಪಿ. ಹರೀಶ್ಗೆ ಜೆ.ಎಚ್. ಪಟೇಲರು ತಿಳಿಸಿದ್ದರು. ಹರಿಹರದಿಂದ ಸ್ಪರ್ಧಿಸುವುದಾಗಿ ಹರೀಶ್ ಹೇಳಿದಾಗ, ಎರಡೂ ಕಡೆ ನಾಮಪತ್ರ ಹಾಕಿ ಎಂದಿದ್ದರು. ಆದರೆ, ಹರೀಶ್ ಹರಿಹರದಿಂದ ಮಾತ್ರ ನಾಮಪತ್ರ ಸಲ್ಲಿಸಿ ಸುಮ್ಮನಾಗಿದ್ದರು.