‘ಇದುವರೆಗೆ ಆಡಳಿತ ನಡೆಸಿದ ಗುರುಮೂರ್ತಿ ಹಾಗೂ ಭರತ್ರಾಜ್ ಗುಂಪು ಯಾವುದೇ ಕಾರ್ಯಕ್ರಮ ಹಮ್ಮಿಕೊಂಡಿಲ್ಲ. ಈಗ ಮತ್ತೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ನಮ್ಮ ತಂಡ ಅಧಿಕಾರಕ್ಕೆ ಬಂದರೆ ಸಂಘದಲ್ಲಿ ಬದಲಾವಣೆ ತರಲಾಗುವುದು. ಸಂಘದ ಚುನಾವಣೆಗೆ ಕಲ್ಲಪ್ಪ ಸಿ.ಜಿ., ಕೃಷ್ಣಮೂರ್ತಿ ಎಂ., ಗಡ್ಡದಗೂಳಿ ಬಿ.ಎಂ., ಗುರುಸ್ವಾಮಿ ಯು., ತಿಪ್ಪೇಸ್ವಾಮಿ ಎ.ಡಿ., ದೇವೇಂದ್ರಪ್ಪ ಕೆ., ಮರಿಗೌಡ್ರು ಎನ್.ಎನ್., ಮೋಹನ್ಕುಮಾರ್ ಜೆ.ಆರ್., ರೇಣುಕಾಮೂರ್ತಿ ಬಿ.ಕೆ., ವೀರಯ್ಯ ಎಸ್.ಎಂ., ಡಾ. ವೀರಯ್ಯ ಎಚ್.ಎಂ., ಸಿದ್ದಪ್ಪ ಜಿ.ಸಿ., ಸುಧಾಕರ್ ಎನ್.ಕೆ. ಸ್ಪರ್ಧಿಸಿದ್ದೇವೆ‘ ಎಂದರು.