ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೃತ್ತ ನೌಕ‌ರರ ಜಿಲ್ಲಾ ಸಂಘದ ಚುನಾವಣೆ 25ಕ್ಕೆ

Last Updated 24 ಜೂನ್ 2022, 2:51 IST
ಅಕ್ಷರ ಗಾತ್ರ

ದಾವಣಗೆರೆ: ‘ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘದ ಚುನಾವಣೆ ಜೂನ್‌ 25ರಂದು ನಡೆಯಲಿದ್ದು, ಕಾರ್ಯಕಾರಿ ಮಂಡಳಿಗೆ 13 ಜನ ಸ್ಪರ್ಧಿಸಿದ್ದಾರೆ ಎಂದು ಸ್ಪರ್ಧಾಳು ಡಾ. ವೀರಯ್ಯ ಎಚ್‌.ಎಂ. ಹೇಳಿದರು.

‘ಸಂಘವು 55 ವರ್ಷಗಳ ಹಿಂದೆ ಸ್ಥಾಪನೆಯಾಗಿದ್ದು, 10–15 ವರ್ಷಗಳಿಂದ ಆಡಳಿತ ನಡೆಸುತ್ತಾ ಬಂದವರು ಯಾವುದೇ ಪ್ರಗತಿಪರ ಕಾರ್ಯಕ್ರಮ ಜಾರಿಗೊಳಿಸಿಲ್ಲ. ಸಂಘದ ಆಡಳಿತವು ನಿಂತನೀರಾಗಿದೆ. ನಮ್ಮ ಬಣ ಅಧಿಕಾರಕ್ಕೆ ಬಂದರೆ ಒಬ್ಬ ಸದಸ್ಯನಿಗೆ ಆಡಳಿತ ಮಂಡಳಿ ಚುನಾವಣೆಗೆ ಕೇವಲ ಎರಡು ಬಾರಿ ಮಾತ್ರ ಸ್ಪರ್ಧೆಗೆ ಅವಕಾಶ ಮಿತಿಗೊಳಿಸಿ ಬೈಲಾಗೆ ತಿದ್ದುಪಡಿ ತರಲಾಗುವುದು. ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು’ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಇದುವರೆಗೆ ಆಡಳಿತ ನಡೆಸಿದ ಗುರುಮೂರ್ತಿ ಹಾಗೂ ಭರತ್‌ರಾಜ್‌ ಗುಂಪು ಯಾವುದೇ ಕಾರ್ಯಕ್ರಮ ಹಮ್ಮಿಕೊಂಡಿಲ್ಲ. ಈಗ ಮತ್ತೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ನಮ್ಮ ತಂಡ ಅಧಿಕಾರಕ್ಕೆ ಬಂದರೆ ಸಂಘದಲ್ಲಿ ಬದಲಾವಣೆ ತರಲಾಗುವುದು. ಸಂಘದ ಚುನಾವಣೆಗೆ ಕಲ್ಲಪ್ಪ ಸಿ.ಜಿ., ಕೃಷ್ಣಮೂರ್ತಿ ಎಂ., ಗಡ್ಡದಗೂಳಿ ಬಿ.ಎಂ., ಗುರುಸ್ವಾಮಿ ಯು., ತಿಪ್ಪೇಸ್ವಾಮಿ ಎ.ಡಿ., ದೇವೇಂದ್ರಪ್ಪ ಕೆ., ಮರಿಗೌಡ್ರು ಎನ್‌.ಎನ್‌., ಮೋಹನ್‌ಕುಮಾರ್‌ ಜೆ.ಆರ್‌., ರೇಣುಕಾಮೂರ್ತಿ ಬಿ.ಕೆ., ವೀರಯ್ಯ ಎಸ್.ಎಂ., ಡಾ. ವೀರಯ್ಯ ಎಚ್‌.ಎಂ., ಸಿದ್ದಪ್ಪ ಜಿ.ಸಿ., ಸುಧಾಕರ್‌ ಎನ್‌.ಕೆ. ಸ್ಪರ್ಧಿಸಿದ್ದೇವೆ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT