‘ವೈದ್ಯರ ನಿರ್ಲಕ್ಷ್ಯದಿಂದ ನನ್ನ ಕಾಲುಗಳು ಸುಟ್ಟಿದ್ದು, ನಡೆಯಲು ಆಗುತ್ತಿಲ್ಲ. ನನ್ನ ಪತಿ ಆಟೊ ಡ್ರೈವರ್ ಆಗಿದ್ದು, ನಾನು ಅಂಗನವಾಡಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಮೂವರು ಮಕ್ಕಳನ್ನು ಸಾಕುವುದು ಕಷ್ಟವಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನಾವು ಬಡವರಾದ್ದರಿಂದ ಅಷ್ಟು ಹಣವನ್ನು ಭರಿಸಲು ಆಗುತ್ತಿಲ್ಲ. ಇದಕ್ಕೆ ಕಾರಣರಾದ ಡಾ.ಪ್ರಕಾಶ್, ಆರ್ಎಂಒ, ಡಿಎಚ್ಒ, ಸಿಜಿಎಚ್ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ನಮಗೆ ಪರಿಹಾರ ನೀಡುವ ನ್ಯಾಯ ಒದಗಿಸಬೇಕು’ ಎಂದು ಆಗ್ರಹಿಸಿದರು.