‘ನಾಟಕದ ಪರಂಪರೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ರಾಮಾಯಣ, ಮಹಾಭಾರತದ, ಬಸವಣ್ಣ, ಅಕ್ಕಮಹಾದೇವಿ ಅವರ ಜೀವನ ಚರಿತ್ರೆಗಳನ್ನು ಪ್ರದರ್ಶನ ಮಾಡಿ ಮನುಕುಲದ ಓರೆಕೋರೆಗಳನ್ನು ತಿದ್ದುತ್ತಿವೆ. ನಾಟಕದ ಪರಂಪರೆಯನ್ನು ಹಿಡಿದುಕೊಂಡು ಗುಬ್ಬಿ ವೀರಣ್ಣ ನಾಟಕ ಕಂಪನಿ ಆರಂಭಿಸಿದರು. ಏಣಗಿ ಬಾಳಪ್ಪ, ಗುಡಿಗೇರಿ ಬಸವರಾಜ್, ಪುಟ್ಟರಾಜ ಗವಾಯಿಗಳು, ದಾವಣಗೆರೆಯಲ್ಲಿ ಚಿಂದೋಡಿ ಲೀಲಾ ಅವರು ನಾಟಕ ಪ್ರದರ್ಶನ ಮಾಡಿದರು. ಅವರಷ್ಟೇ ಅಲ್ಲದೇ ಶಿವಸಂಚಾರ ನಾಟಕದ ಮುಖೇನ ಸಮಾಜಕ್ಕೆ ಆದರ್ಶಪ್ರಾಯವಾದ ಕೆಲಸವನ್ನು ಸ್ವಾಮೀಜಿಗಳು ಮಾಡಿದ್ದಾರೆ’ ಎಂದರು.