ಮಲೇಬೆನ್ನೂರು: ಸಮೀಪದ ಕೊಮಾರನಹಳ್ಳಿ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಹೆಳವನಕಟ್ಟೆ ಲಕ್ಷ್ಮೀ ರಂಗನಾಥ ದೇವಾಲಯದ ಕೆರೆ ಶುಕ್ರವಾರ ಭರ್ತಿಯಾಗಿದ್ದು, ಕೋಡಿ ಬೀಳಲು ಕ್ಷಣಗಣನೆ ಎಣಿಸುತ್ತಿದೆ.
ಸುಮಾರು 97 ಎಕರೆ ವಿಸ್ತೀರ್ಣದ ಕೆರೆ ಭರ್ತಿಯಾಗಿದೆ. ಮೇಲ್ಭಾಗದ ರಾಮನಕಟ್ಟೆ, ಹಾಲುವರ್ತಿ ಸರ, ಪಶ್ಚಿಮದ ಗುಡ್ಡ ಪ್ರದೇಶದಲ್ಲಿ ಮಳೆ ಸುರಿದ ಕಾರಣ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.
ಕೆರೆ ಭರ್ತಿಯಾಗಿರುವುದರಿಂದ ಹಿಂಭಾಗದ ತೋಟ, ಹೊಲಗಳಿಗೆ ನೀರು ನುಗ್ಗಿ ಬೆಳೆಗಳು ಜಲಾವೃತವಾಗಿವೆ ಎಂದು ರೈತರು ತಿಳಿಸಿದರು.
ಕೊಮಾರನಹಳ್ಳಿ, ದಿಬ್ಬದಹಳ್ಳಿ, ಮಲೇಬೆನ್ನೂರು ಭಾಗದ ಕೊಳವೆಬಾವಿಗಳಿಗೆ ಜೀವ ಬಂದಿದ್ದು, ಬೇಸಿಗೆಯಲ್ಲೂ ಕುಡಿಯುವ ನೀರಿನ ಸಮಸ್ಯೆ ನೀಗಲಿದೆ.