ಪಟ್ನಾ: ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ಡಿದೇವಿ ಅವರಿಂದ ಸಿಬಿಐ ಹೇಳಿಕೆ ದಾಖಲಿಸಿಕೊಂಡಿದೆ.
ನೋಟು ರದ್ದು (ಅಮಾನ್ಯೀಕರಣ) ಆದಾಗ ದೊಡ್ಡ ಮೊತ್ತದ ಹಣವನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸಿರುವ ಆರೋಪ ಇವರ ಮೇಲಿದೆ. ಸಿಬಿಐ ತಂಡ ರಾಬ್ಡಿದೇವಿ ಅವರನ್ನು 20 ನಿಮಿಷ ವಿಚಾರಣೆ ನಡೆಸಿತು.
ರಾಬ್ಡಿದೇವಿ ಅವರಿಗೆ ಕೆಲವು ದಿನಗಳ ಹಿಂದಷ್ಟೆ ಸಿಬಿಐ ನೋಟಿಸ್ ನೀಡಿತ್ತು. ಬಿಹಾರದ ಅವಾಮಿ ಸಹಕಾರಿ ಬ್ಯಾಂಕ್ನ ವಹಿವಾಟಿನ ಬಗ್ಗೆ ವಿಚಾರಿಸಲಾಗಿದೆ ಎಂದು ಲಾಲು ಕುಟುಂಬದ ಆಪ್ತ ಮತ್ತು ಶಾಸಕ ಭೋಲ್ ಯಾದವ್ ತಿಳಿಸಿದ್ದಾರೆ.