ನಿವೃತ್ತ ಪ್ರಾಧ್ಯಾಪಕ ಡಾ.ಎ.ಬಿ. ರಾಮಚಂದ್ರಪ್ಪ, ‘ತಳ ಸಮುದಾಯಗಳ ಹೆಣ್ಣು ಮಕ್ಕಳು ಹೆಚ್ಚು ಶಿಕ್ಷಣ ಪಡೆಯುತ್ತಿರುವುದು ಮನುವಾದಿಗಳಿಗೆ ನಡುಕ ಹುಟ್ಟಿಸಿದೆ. ದಲಿತರು, ಶೋಷಿತರು, ಧಾರ್ಮಿಕ ಅಲ್ಪಸಂಖ್ಯಾತರು ಮುಂತಾದ ಸಮುದಾಯಗಳಾದ ನಾವೇ ಈ ನೆಲದ ಮೂಲನಿವಾಸಿಗಳು. ಆರ್ಯರು ವಲಸೆ ಬಂದವರು. ದೇಶ ಬಿಡಿಸುವುದಿದ್ದರೆ ಮೊದಲು ಅವರನ್ನು ಬಿಡಿಸಬೇಕು. ನಾವು ಅಂಬೇಡ್ಕರ್ ಅವರ ವಾರಸುದಾರರು. ನಮ್ಮ ರಕ್ಷಣೆಗೆ ಸಂವಿಧಾನ ಇದೆ’ ಎಂದು ಹೇಳಿದರು.