ಸ್ಪರ್ಧಿಸಲಷ್ಟೇ ಜೆಡಿಎಸ್: 1999ರಿಂದ 2013ರವರೆಗೆ ದಕ್ಷಿಣ ಕ್ಷೇತ್ರದಿಂದ ವಿಧಾನಸಭೆಗೆ ಜೆಡಿಎಸ್ನಿಂದ ಸ್ಪರ್ಧಿಸಿದ ಅಷ್ಟೂ ಅಭ್ಯರ್ಥಿಗಳು ಚುನಾವಣೆ ಮುಗಿದ ಬಳಿಕ ಪಕ್ಷ ತೊರೆದು ಹೋಗಿದ್ದಾರೆ. ಕಾಂಗ್ರೆಸ್ನಿಂದ ಸೈಯದ್ ಸೈಫುಲ್ಲ, ಮೋತಿ ವೀರಣ್ಣ ಸ್ಪರ್ಧೆಯ ಬಳಿಕ ಕಾಂಗ್ರೆಸ್ಗೆ ಮರಳಿದರೆ, ಎಚ್.ಎಸ್. ನಾಗರಾಜ್ ಬಿಜೆಪಿಗೆ ಹೋದರು. ಅಷ್ಟೇ ಅಲ್ಲ 2008ರಲ್ಲಿ 6 ಕಡೆ ಜೆಡಿಎಸ್ ಪಡೆದಿತ್ತಲ್ಲ 2013ರ ಚುನಾವಣೆಯ ವೇಳೆಗೆ ರಹಮತ್ ಉಲ್ಲಾ ಒಬ್ಬರು ಮೃತಪಟ್ಟಿದ್ದರು. ಉಳಿದ ಐವರೂ ಕಾಂಗ್ರೆಸ್ ಸೇರಿಬಿಟ್ಟಿದ್ದರು.