ದಾವಣಗೆರೆ: ತಾಲ್ಲೂಕಿನ ಕಾಡಜ್ಜಿ ಗ್ರಾಮದ ದುರ್ಗಾದೇವಿ ಎಕ್ಸ್ಪ್ಲೋಸಿವ್ ಮ್ಯಾಗಜಿನ್ ಬಳಿ ಸ್ಫೋಟಕಗಳನ್ನು ಸಾಗಿಸುತ್ತಿದ್ದ ವೇಳೆ ದಾಳಿನಡೆಸಿದ ಪೊಲೀಸರು ₹ 3.62 ಲಕ್ಷ ಮೌಲ್ಯದ ಸ್ಫೋಟಕಗಳನ್ನು ವಶಪಡಿಸಿಕೊಂಡು, ಈ ಸಂಬಂಧ ಮೂವರನ್ನು ಬಂಧಿಸಿದ್ದಾರೆ.
ಬಿ.ಎಸ್. ವಿಕ್ರಮ್, ನಾಗರಾಜ್, ವಿಜಯಕುಮಾರ್ ಹಾಗೂ ಮಂಜುನಾಥ ಬಂಧಿತರು. ಆರೋಪಿಗಳು ಬೊಲೆರೊ ಪಿಕ್ಅಪ್ ವಾಹನದಲ್ಲಿ ಸ್ಫೋಟಕಗಳನ್ನು ತುಂಬಿಕೊಂಡು ಹೋಗುತ್ತಿದ್ದಾಗಡಿವೈಎಸ್ಪಿ ನರಸಿಂಹ ವಿ.ತಾಮ್ರಧ್ವಜ ನೇತೃತ್ವದಲ್ಲಿ ಎಎಸ್ಸಿ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ.