ತಾಲ್ಲೂಕಿನ ಕಕ್ಕರಗೊಳ್ಳದಲ್ಲಿ ಶ್ರೀ ಮಹೇಶ್ವರ ದೇವಸ್ಥಾನವನ್ನು ಮಂಗಳವಾರ ಉದ್ಘಾಟಿಸಿದ ಅವರು, ‘ಬೆಳೆವಿಮೆ ಸಮಸ್ಯೆ ಕುರಿತು ಚರ್ಚಿಸಲು ಕೃಷಿ ಸಚಿವರ ಸಮ್ಮುಖದಲ್ಲಿ ಈಚೆಗೆ ಬೆಂಗಳೂರಿನಲ್ಲಿ ನಡೆಸಿದ ಸಭೆಯಲ್ಲಿ ಅಧಿಕಾರಿಗಳು ನೀಡಿದ ಮಾಹಿತಿ ದಿಗಿಲು ಹುಟ್ಟಿಸಿತು. ಚಿತ್ರದುರ್ಗ ಜಿಲ್ಲೆಯಲ್ಲಿ ವಿಮಾ ಕಂಪನಿಗೆ ₹ 112 ಕೋಟಿ ಕಂತು ಪಾವತಿಸಲಾಗಿದ್ದು, ರೈತರಿಗೆ ಕೇವಲ ₹ 22 ಕೋಟಿ ಪರಿಹಾರ ವಿತರಿಸಲಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ ವಿಮಾ ಕಂಪನಿಗೆ ₹ 90 ಕೋಟಿ ಜಮಾ ಆಗಿದೆ. ಆದರೆ, ₹ 11 ಕೋಟಿ ಪರಿಹಾರ ಮಾತ್ರ ವಿತರಣೆಯಾಗಿದೆ. ಬಾಕಿ ಹಣ ವಿಮಾ ಕಂಪನಿ ಪಾಲಾಯಿತು’ ಎಂದು ಬೇಸರ ವ್ಯಕ್ತಪಡಿಸಿದರು.