ಒಂದು ಬಣವೆಗೆ ಸುಮಾರು ₹ 60 ಸಾವಿರದಿಂದ ₹70 ಸಾವಿರ ಬೆಲೆ ಬಾಳಲಿದ್ದು, ಪಶುಗಳಿಗೆ ಹುಲ್ಲು ಇಲ್ಲದ ಕಷ್ಟಕರ ಪರಿಸ್ಥಿತಿಯಲ್ಲಿ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಕೂಡಲೇ ಅವರನ್ನು ಬಂಧಿಸಬೇಕು. ಜಿಲ್ಲಾಡಳಿತ ಪರಿಹಾರ ನೀಡಬೇಕು ಎಂದು ಬಣವೆಗಳ ಮಾಲೀಕರಾದ ಗುರುಸಿದ್ದಪ್ಪ, ಕುಬೇರಪ್ಪ, ಭಾಗ್ಯಮ್ಮ, ತಿಪ್ಪೇಸ್ವಾಮಿ ಅವರು ಒತ್ತಾಯಿಸಿದ್ದಾರೆ.