ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಶಾಂತನಗೌಡ ಅವರು ಹೇಳಿರುವ ಗೋದಾಮು ನಮ್ಮವರಿಗೆ ಸೇರಿದ್ದಲ್ಲ. ಅದು ಕಾಂಗ್ರೆಸ್ ಮುಖಂಡರಿಗೆ ಸೇರಿದ್ದು, ನಾನಾಗಲಿ, ನನ್ನ ಕುಟುಂಬದವರಾಗಲಿ ಆ ಗೋದಾಮಿಗೆ ಇದೂವರೆಗೂ ಹೋಗಿಲ್ಲ. ಗೋದಾಮು ಬಿಜೆಪಿಯವರಿಗೆ ಸೇರಿದ್ದು ಎಂದು ಅವರು ಆರೋಪಿಸಿದ್ದಾರೆ. ಆದರೆ, ಅದು ಅವರ ಪಕ್ಷದ ಮುಖಂಡರಿಗೆ ಸೇರಿದ್ದು’ ಎಂದರು.