ಮಠ ಕಟ್ಟಿಕೊಂಡ ಸನ್ಯಾಸಿಗಿಂತ, ಕಾಡಿಗೆ ಹೋಗಿ ತಪಸ್ಸು ಮಾಡುವ ಸನ್ಯಾಸಿಗಿಂತ, ಮಣ್ಣು, ಹೆಣ್ಣು, ಹೊನ್ನು ಮಾಯೆ ಎನ್ನುವ ಸನ್ಯಾಸಿಗಿಂತ ಸತ್ಯಶುದ್ಧ ಕಾಯಕ ಮಾಡುವ ಗ್ರಹಸ್ಥರು ಮೇಲು. ನಾಗರಿಕತೆಯ ಮೂಲ ಕುಟುಂಬದಲ್ಲಿದೆ. ಕುಟುಂಬವೇ ಸಮಾಜ. ಸ್ವಾಮೀಜಿ ಕೂಡ ದೇಶದ ಒಳಗೆ ಸತ್ಪ್ರಜೆ ಅಷ್ಟೇ. ತಪ್ಪು ಮಾಡದೇ ಇರುವವ ಸನ್ಯಾಸಿ ಎಂದಲ್ಲ. ಸತ್ಯದ ದಾರಿಯಲ್ಲಿ ನಡೆಸುವವ ಸನ್ಯಾಸಿ ಎಂಬುದನ್ನು ತಿಳಿಯಬೇಕು ಎಂದರು.