ಚಿಕ್ಕಬಳ್ಳಾಪುರ: ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡ ಕೋಚಿಮುಲ್ ನಿರ್ದೇಶಕ ಕೆ.ವಿ.ನಾಗರಾಜ್ ಅವರ ವಿರುದ್ಧ ಮಂಗಳವಾರ ನೀತಿ ಸಂಹಿತೆ ಉಲ್ಲಂಘಿಸಿ ಬಾಡೂಟ ಆಯೋಜಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಯಿತು.
ತಾಲ್ಲೂಕಿನ ಕಣಜೇನಹಳ್ಳಿಯಲ್ಲಿ ನಾಗರಾಜ್ ಅವರ ಮನೆ ಬಳಿ ಬಾಡೂಟ ಆಯೋಜಿಸಲಾಗಿತ್ತು. ಎಸ್ಪಿ ಕಾರ್ತಿಕ್ ರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ಗುರುದತ್ ಹೆಗ್ಡೆ ಅವರ ನೇತೃತ್ವದಲ್ಲಿ ದಾಳಿ ಮಾಡಿದ ಅಧಿಕಾರಿಗಳು ಊಟಕ್ಕೆ ಕುಳಿತವರನ್ನು ಖಾಲಿ ಮಾಡಿಸಿ, ಅಡುಗೆ ಮತ್ತು ಪಾತ್ರೆಗಳನ್ನು ಜಪ್ತಿ ಮಾಡಿದರು.