ಕಲಬುರ್ಗಿ ಮೂಲದ ಡಾ.ಅರುಣಾ ವಂಚನೆಗೆ ಒಳಗಾದವರು. ವೈದ್ಯಕೀಯ ಅಧ್ಯಯನ ಮಾಡುತ್ತಿದ್ದ ಅರುಣಾ ಇಲ್ಲಿನ ಕಾವೇರಿ ಮೆಡಿಕಲ್ ಕಾಲೇಜು ಹಾಸ್ಟೆಲ್ನಲ್ಲಿ ಉಳಿದುಕೊಂಡಿದ್ದಾರೆ. ಜುಲೈ 18ರಂದು ಅನಾಮಧೇಯ ವ್ಯಕ್ತಿಯೊಬ್ಬ ಕರೆ ಮಾಡಿ ‘ನಿಮ್ಮ ಎಂಟಿಎಂ ಕಾರ್ಡ್ ನಿಷ್ಕ್ರಿಯಗೊಂಡಿದ್ದು, (ಡಿಆಕ್ಟಿವೇಟ್) ನಿಮ್ಮ ಹಳೆಯ ಎಟಿಎಂ ಕಾರ್ಡ್ನ ಒಟಿಪಿ ನಂಬರ್ ಕೊಡಿ ಸಕ್ರಿಯಗೊಳಿಸುತ್ತೇವೆ (ಆಕ್ಟಿವೇಟ್) ಎಂದು ತಿಳಿಸಿದ್ದಾನೆ. ಅದನ್ನು ನಂಬಿದ ಅರುಣಾ ಅವರು ಒಟಿಪಿ ನಂಬರ್ ತಿಳಿಸಿದ್ದಾರೆ.