ಪಟ್ಟಣದ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹೊದಿಗೆರೆ ರಮೇಶ್, ‘ತಾಲ್ಲೂಕು ಅಡಿಕೆ ಬೆಳೆಗೆ ಹೆಸರುವಾಸಿ. ಆದರೆ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿಲ್ಲ. ಶೈಕ್ಷಣಿಕ ಅಭಿವೃದ್ಧಿಯ ದೃಷ್ಟಿಯಿಂದ ಉಚಿತವಾಗಿ ಕಾರ್ಯಾಗಾರ ಏರ್ಪಡಿಸಲಾಗಿದೆ. ತಾಲ್ಲೂಕಿನ ಎಲ್ಲ ಪದವೀಧರ ನಿರುದ್ಯೋಗಿ ಯುವಕರು ಉಚಿತ ಕಾರ್ಯಾಗಾರದಲ್ಲಿ ಭಾಗವಹಿಸಿ, ಸದುಪಯೋಗ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು. ಬಳಗದ ಅಧ್ಯಕ್ಷ ಬುಳುಸಾಗರದ ಬಾಬು, ಜಯ್ಯಣ್ಣ, ಸನಾವುಲ್ಲಾ, ಹರೀಶ್, ಬಸವಾಪುರ ರಂಗನಾಥ ನಾಯಕ, ಯೋಗರಾಜ್, ಸಚ್ಚಿನ್, ಅಣ್ಣಪ್ಪ, ಮೌನೇಶ್, ಸತೀಶ್, ಗೋವಿಂದ ರಾಜ್ ಇದ್ದರು.