ಜಾತ್ಯತೀತ, ಸೌಹಾರ್ದ ಸಮಾಜಕ್ಕಾಗಿ ಭಿನ್ನ ಚಿಂತನೆ, ನಂಬಿಕೆಗಳನ್ನು ಇಟ್ಟುಕೊಂಡು ನಿರ್ಭೀತಿಯಿಂದ ಚಟುವಟಿಕೆ ಮಾಡುತ್ತಿದ್ದರು. ದೇಶದ ಯಾವುದೇ ಮೂಲೆಗಳಲ್ಲಿ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದವರು ತನ್ನ ಮಕ್ಕಳು ಎಂದು ಭಾವಿಸುತ್ತಿದ್ದರು. ಗೌರಿ ಇಟ್ಟುಕೊಂಡ ನಿಲುವುಗಳಿಗಾಗಿ, ಮಾಡಿದ ಹೋರಾಟಗಳಿಗಾಗಿ ಮನುವಾದಿಗಳಿಂದ ಹತ್ಯೆಯಾದರು ಎಂದು ಬೇಸರ ವ್ಯಕ್ತಪಡಿಸಿದರು.